ಸಾಂದರ್ಭಿಕ ಚಿತ್ರ 
ರಾಜ್ಯ

ಬೆಳಗ್ಗೆ ಡಾಂಬರು ಹಾಕಿದ ಬಿಬಿಎಂಪಿ; ಮಧ್ಯರಾತ್ರಿ ರಸ್ತೆ ಅಗೆದು ಹಾನಿ ಮಾಡಿದ ಬಿಡಬ್ಲ್ಯೂಎಸ್ ಎಸ್ ಬಿ!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಸ್ತೆಗೆ ಟಾರ್ ಮಾಡಿದ 12 ಗಂಟೆಗಳ ನಂತರ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್‌ಬಿ) ಅದೇ ರಸ್ತೆಯನ್ನು ಅಗೆದು, ಆ ಮೂಲಕ ಟಾರ್ ರಸ್ತೆಯನ್ನು ನಾಶಪಡಿಸಿದೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಸ್ತೆಗೆ ಟಾರ್ ಮಾಡಿದ 12 ಗಂಟೆಗಳ ನಂತರ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್‌ಬಿ) ಅದೇ ರಸ್ತೆಯನ್ನು ಅಗೆದು, ಆ ಮೂಲಕ ಟಾರ್ ರಸ್ತೆಯನ್ನು ನಾಶಪಡಿಸಿದೆ.

ಶುಕ್ರವಾರ ಬೆಳಗ್ಗೆ ಬಿಬಿಎಂಪಿ ಪೂರ್ವ ವಲಯದ ಉಡುಪಿ ಗ್ರ್ಯಾಂಡ್ ಹೋಟೆಲ್ ಎದುರಿನ ಹೆಣ್ಣೂರು ಮುಖ್ಯರಸ್ತೆ ಜಂಕ್ಷನ್‌ನಲ್ಲಿ ಬೆಳಗಿನ ವಾಕಿಂಗ್ ಮಾಡುವವರು ಹೊಸದಾಗಿ ಡಾಂಬರು ರಸ್ತೆ ಹಾಳಾಗಿರುವುದನ್ನು ಗಮನಿಸಿದಾಗ ಘಟನೆ ವರದಿಯಾಗಿದೆ.

ಹೊಸದಾಗಿ ಡಾಂಬರೀಕರಣ ಮಾಡಿದ ರಸ್ತೆಯನ್ನು ಅಗೆಯಲು ಬಿಬಿಎಂಪಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಬಿಡಬ್ಲ್ಯೂಎಸ್ಎಸ್‌ಬಿ ಎಂಜಿನಿಯರ್ ಒಬ್ಬರು ಹೇಳಿಕೊಂಡಿದ್ದಾರೆ, ಆದರೆ ಪಾಲಿಕೆ ಅಧಿಕಾರಿಗಳು ಲಿಖಿತವಾಗಿ ಒಪ್ಪಿಗೆ ನೀಡಲಿಲ್ಲ ಎಂದು ತಿಳಿದು ಬಂದಿದೆ.

ವಾಟರ್ ವಾಲ್ವ್ ನ ಸುಗಮ ಕಾರ್ಯಾಚರಣೆಗಾಗಿ ವಾಲ್ವ್ ಮ್ಯಾನ್ ಕೇಶವ ರಸ್ತೆಯನ್ನು ಅಗೆದಿದ್ದರು. ನಾವು ಅನುಮತಿಯನ್ನು ತೆಗೆದುಕೊಂಡಿದ್ದೇವೆ ಮತ್ತು ಸಣ್ಣ ಹಾನಿ ಮಾತ್ರ ಸಂಭವಿಸಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಬಿಡಬ್ಲ್ಯುಎಸ್‌ಎಸ್‌ಬಿ ಯಾವುದೇ ಲಿಖಿತ ಅನುಮತಿ ಪಡೆದಿಲ್ಲ, ಮಧ್ಯರಾತ್ರಿ ಕೆಲಸವನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಯಿತು. ಎಂದು ಬಿಬಿಎಂಪಿಯ ಪ್ರಮುಖ ರಸ್ತೆಗಳ (ಪೂರ್ವ ವಿಭಾಗ) ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಬೆಳಗ್ಗೆ ನಮಗೆ ಈ ರೀತಿಯ ದೂರು ಬಂದಿತು. ರಸ್ತೆಗೆ ಡಾಂಬರ್ ಹಾಕುವಾಗ ಹಾಜರಿರಲು ಬಿಡಬ್ಲ್ಯೂ ಎಸ್ ಎಸ್ ಬಿ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ ಅವರು ಬರಲಿಲ್ಲ, ಈಗ ವಾಲ್ವ್‌ಗೆ ಆರು ಇಂಚು ಕಟ್ ಮಾಡುವ ಬದಲು ವಾಲ್ವ್ ಮ್ಯಾನ್ ಮೂರು ಅಡಿ ರಸ್ತೆಯನ್ನು ಕತ್ತರಿಸಿ ಹಾಳು ಮಾಡಿದ್ದಾರೆ ಎಂದು ಶ್ರೀನಿವಾಸ್ ಹೇಳಿದರು.

BWSSB, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಇತರ ಆಪ್ಟಿಕಲ್ ಫೈಬರ್ ಕಂಪನಿಗಳಂತಹ ಏಜೆನ್ಸಿಗಳು ಆಗಾಗ್ಗೆ ರಸ್ತೆಗಳನ್ನು ಅಗೆದು ಅನಾನುಕೂಲತೆಯನ್ನು ಉಂಟುಮಾಡುತ್ತವೆ ಎಂದು ಅವರು ಹೇಳಿದರು.  ನಾಗರಿಕ ಸಂಸ್ಥೆಗಳ ವಿರುದ್ಧ ವಾಗ್ದಾಳಿ ನಡೆಸಿದ ಹೆಣ್ಣೂರು ರಸ್ತೆಯ ನಿವಾಸಿ ವಿಂಕಲ್ ಮಥಿಯಾಸ್, ಬಿಬಿಎಂಪಿ  ಡಾಂಬರು ಹಾಕಿ ರಿಪೇರಿ ಮಾಡಿದ ನಂತರ  BWSSB ರಸ್ತೆಯನ್ನು ಅಗೆದು ಹಾಳು ಮಾಡುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT