ಬೆಂಗಳೂರಿನಲ್ಲಿ ಭಾನುವಾರ ನಡೆದ ಜನ ಸಾಹಿತ್ಯ ಸಮ್ಮೇಳನದಲ್ಲಿ ಬರಹಗಾರ್ತಿ ಬಾನು ಮುಷ್ಟಾಕ್ ಮತ್ತು ನಟ ಪ್ರಕಾಶ್ ರಾಜ್ 
ರಾಜ್ಯ

ಸಾಹಿತ್ಯ ಲೋಕದಲ್ಲೂ ರಾಜಕೀಯ ಅಸ್ಪೃಶ್ಯತೆ: ಪರ್ಯಾಯ 'ಜನ ಸಾಹಿತ್ಯ ಸಮ್ಮೇಳನ'ದಲ್ಲಿ ಚಿಂತಕ

ರಾಜಕೀಯ ಅಸ್ಪೃಶ್ಯತೆ ಸಾಹಿತ್ಯ ಲೋಕದಲ್ಲಿ ನುಸುಳಿದೆ. ಈ ಬೆಳವಣಿಗೆ ಅಪಾಯದ ಸೂಚನೆಯಾಗಿದೆ. ಅದರ ವಿರುದ್ಧದ ಎಲ್ಲ ಧ್ವನಿಗಳನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ ಎಂದು ಚಿಂತಕ ರಾಮಕೃಷ್ಣ ಜಿ. ಹೇಳಿದರು.

ಬೆಂಗಳೂರು: ರಾಜಕೀಯ ಅಸ್ಪೃಶ್ಯತೆ ಸಾಹಿತ್ಯ ಲೋಕದಲ್ಲಿ ನುಸುಳಿದೆ. ಈ ಬೆಳವಣಿಗೆ ಅಪಾಯದ ಸೂಚನೆಯಾಗಿದೆ. ಅದರ ವಿರುದ್ಧದ ಎಲ್ಲ ಧ್ವನಿಗಳನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ ಎಂದು ಚಿಂತಕ ರಾಮಕೃಷ್ಣ ಜಿ. ಹೇಳಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮಾನಾಂತರವಾಗಿ ಕ್ರೌಡ್ ಫಂಡಿಂಗ್ ಮೂಲಕ ಸಾಹಿತಿಗಳು ಮತ್ತು ಬುದ್ಧಿಜೀವಿಗಳ ವಿಭಾಗ ಭಾನುವಾರ ಇಲ್ಲಿ ಆಯೋಜಿಸಿದ್ದ ಜನ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯ ಪ್ರಾಯೋಜಿತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಮತ್ತು ದಲಿತ ಲೇಖಕರನ್ನು ಕಡೆಗಣಿಸಿರುವ ಆರೋಪದ ಮೇಲೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

'ಎಲ್ಲಾ ಮನುಷ್ಯರನ್ನು ಸಮಾನತೆಯಿಂದ ಕಾಣಬೇಕು. ಅವರು (ಸರ್ಕಾರ) ‘ಸಂಸ್ಕೃತಿ’ಯ ಬಗ್ಗೆ ಉಪನ್ಯಾಸಗಳನ್ನು ನೀಡುತ್ತಾರೆ. ಆದರೆ, ಅದನ್ನು ತ್ಯಾಗ ಮಾಡಿದ್ದಾರೆ ಮತ್ತು ಅದರ ವಿರುದ್ಧದ ಎಲ್ಲಾ ಧ್ವನಿಗಳನ್ನು ಹತ್ತಿಕ್ಕಲು ಹೇಯ ಕೃತ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅವರು ಚಿಂತಿಸುತ್ತಿಲ್ಲ. ಈ ದಮನದ ವಿರುದ್ಧ ಆಂದೋಲನ ನಡೆಯಬೇಕು' ಎಂದು ಹೇಳಿದರು.

ಖ್ಯಾತ ಕವಿ ಮುಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, 'ದೇಶ ಕಟ್ಟುವವರು ಕವಿಗಳು ಮತ್ತು ಕಲಾವಿದರೇ ಹೊರತು ರಾಜಕಾರಣಿಗಳು ಅಥವಾ ಉದ್ಯಮಿಗಳಲ್ಲ. ಸ್ವಾತಂತ್ರ್ಯಾನಂತರ ಭಾರತದಲ್ಲಿ ಎಂದೂ ಕಾಣದಂತಹ ಬಿಕ್ಕಟ್ಟು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತಲೆದೋರಿದೆ' ಎಂದರು.

ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ ಎಂಬ ಕಾವ್ಯನಾಮದಿಂದ ಪರಿಚಿತರು) ಅವರು ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನಗಳಿಂದ ರಾಜಕಾರಣಿಗಳನ್ನು ದೂರವಿಟ್ಟಿದ್ದನ್ನು ಸ್ಮರಿಸಿದ ಬರಹಗಾರ ರವಿಕುಮಾರ್, ಸಾಹಿತ್ಯದ ಹಬ್ಬವನ್ನು ಸಾಮಾನ್ಯ ಅಜೆಂಡಾ ಇಟ್ಟುಕೊಂಡು ಜನರಿಗೆ ಸೀಮಿತಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮ್ಮೇಳನದಲ್ಲಿ ಅಂಗೀಕರಿಸಲ್ಪಟ್ಟ ಪ್ರಮುಣ ನಿರ್ಣಯಗಳೆಂದರೆ, ಜಾತಿ, ಲಿಂಗ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಮಾನವರನ್ನು ಸಮಾನವಾಗಿ ಪರಿಗಣಿಸುವುದು ಮತ್ತು ಅರ್ಹ ಅಭ್ಯರ್ಥಿಗಳನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡುವುದು. ಹಿಂದಿ ಹೇರಿಕೆ, ಉತ್ತರ ಭಾರತದ ಸಂಸ್ಥೆಗಳೊಂದಿಗೆ ನಂದಿನಿ ವಿಲೀನ ಮತ್ತು ಸರ್ಕಾರದ ಕೋಮುವಾದಿ ನಡೆಗಳನ್ನು ವಿರೋಧಿಸುವ ನಿರ್ಣಯಗಳನ್ನು ಅಂಗೀಕರಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT