ರಾಜ್ಯ

ಎಲ್ಲ ಸಮಸ್ಯೆಗಳಿಗೂ ಸಂವಿಧಾನವೇ ಪರಿಹಾರ: ಸಂಸದ ವಿ.ಶ್ರೀನಿವಾಸ್ ಪ್ರಸಾದ್

Nagaraja AB

ಮೈಸೂರು: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಅತ್ಯುತ್ತಮ ಸಂವಿಧಾನ ನೀಡದಿದ್ದರೆ ದೇಶ ಅಭಿವೃದ್ಧಿಯಾಗುತ್ತಿರಲಿಲ್ಲ ಎಂದು ಚಾಮರಾಜನಗರ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಡಾ.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಶನಿವಾರ ನಡೆದ ಬುದ್ಧ, ಬಸವೇಶ್ವರ ಮತ್ತು ಅಂಬೇಡ್ಕರ್ ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್, ಹುಟ್ಟಿನಿಂದಲೂ ಸಾಮಾಜಿಕ ಕಳಂಕ ಹೊಂದಿದ್ದರೂ ಡಾ.ಬಿ.ಆರ್. ಅಂಬೇಡ್ಕರ್ ಅವರು ಅತ್ಯುತ್ತಮ ಶಿಕ್ಷಣ ಪಡೆಯಲು ಹೋರಾಡಿದರು, ಇದು ಅತ್ಯುತ್ತಮವಾದ ಸಂವಿಧಾನವನ್ನು ರಚಿಸುವಲ್ಲಿ ಮತ್ತು ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಲು ಅವರಿಗೆ ಸಹಾಯ ಮಾಡಿತು. ಅವಮಾನ ಮತ್ತು ಕಷ್ಟಗಳ ನಡುವೆಯೂ ಅಂಬೇಡ್ಕರ್ ಸಾಧಿಸಿದಷ್ಟು ಯಶಸ್ಸನ್ನು ಮತ್ತೊಬ್ಬ ಯಾವುದೇ ನಾಯಕರು ಸಾಧಿಸಿಲ್ಲ ಎಂದರು. 

ಯುವಕರು ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದು ಒತ್ತಾಯಿಸಿದ ಅವರು, ಅಂಬೇಡ್ಕರ್ ಅವರನ್ನು ಕೇವಲ ಧ್ವನಿಯಿಲ್ಲದವರ ನಾಯಕ ಎಂದು ಕೊಂಡಾಡುವುದು ಮಾತ್ರವಲ್ಲದೆ ಅವರ ಬಗ್ಗೆ ಓದಿ, ಅರ್ಥೈಸಿಕೊಂಡು ಅನುಸರಿಸಬೇಕು ಎಂದು ಅವರು ಹೇಳಿದರು. ಬುದ್ಧ  ಮಹಾನ್ ದಾರ್ಶನಿಕ ಮತ್ತು ಮನುಕುಲಕ್ಕೆ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿರುವ ಮಾರ್ಗದರ್ಶಕ ಎಂದು ಕರೆದ ಅವರು, ಭಾರತದಲ್ಲಿ ಜನಿಸಿದ ಬೌದ್ಧಧರ್ಮವು ಇತರ ಏಷ್ಯಾದ ದೇಶಗಳಲ್ಲಿ ಪ್ರಮುಖ ಧರ್ಮವಾಗುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.

ಬಸವೇಶ್ವರರು ಆಚಾರ-ವಿಚಾರಗಳನ್ನು ತಿರಸ್ಕರಿಸಿ ಮಾನವೀಯತೆ ಮತ್ತು ಸಮಾನತೆಯನ್ನು ಸಾರಲು ಲಿಂಗಾಯತ ಧರ್ಮವನ್ನು ಕಂಡುಕೊಂಡರು ಆದರೆ ಅದು ವಿಶ್ವಧರ್ಮವಾಗಲು ಸಾಧ್ಯವಾಗಿಲ್ಲ. ಲಿಂಗಾಯತ ಧರ್ಮ ಧರ್ಮವೇ ಅಥವಾ ಜಾತಿಯೇ ಎಂಬ ಪ್ರಶ್ನೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ಜಾತಿ ಮತ್ತು ಉಪಜಾತಿಗಳ ಪಟ್ಟಿಯನ್ನು ವಿವಿಧ ವರ್ಗಗಳಾಗಿ ಮಾಡಲಾಗಿದೆ ಎಂದು ವಿಷಾದಿಸಿದರು. ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಬಸವರಾಜು, ಪ್ರೊ.ಆನಂದ್ ಮತ್ತಿತರರು ಮಾತನಾಡಿದರು.

SCROLL FOR NEXT