ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ 
ರಾಜ್ಯ

ಸಿದ್ದರಾಮಯ್ಯ ಅವರಂತೆ ಕರ್ನಾಟಕ ವಿಧಾನಸಭೆ ಚೇಂಬರ್ ಪಕ್ಕದಲ್ಲೇ ಕಚೇರಿ ಬಯಸಿದ ಡಿಸಿಎಂ ಡಿಕೆ ಶಿವಕುಮಾರ್‌!

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರ್ನಾಟಕ ವಿಧಾನಸಭೆ ಚೇಂಬರ್ ಹೊರಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ಪಕ್ಕದಲ್ಲೆ ಕಚೇರಿಯನ್ನು ಹೊಂದಲು ಬಯಸಿದ್ದಾರೆ.

ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರ್ನಾಟಕ ವಿಧಾನಸಭೆ ಚೇಂಬರ್ ಹೊರಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ಪಕ್ಕದಲ್ಲೆ ಕಚೇರಿಯನ್ನು ಹೊಂದಲು ಬಯಸಿದ್ದಾರೆ.

ಶಿವಕುಮಾರ್ ಅವರ ಹೊಸ ಕಚೇರಿಯು ವಿಧಾನಸೌಧದ ಗೇಟ್‌ನ ಪಶ್ಚಿಮ ಭಾಗದ ಮೊದಲ ಮಹಡಿಯಲ್ಲಿದ್ದು, ಅಲ್ಲಿಂದ ಎಲ್ಲಾ ಶಾಸಕರು, ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಸದನವನ್ನು ಪ್ರವೇಶಿಸುತ್ತಾರೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಕಚೇರಿಗಳು ಮೂರನೇ ಮಹಡಿಯಲ್ಲಿವೆ. ಮುಖ್ಯಮಂತ್ರಿಗಳು ಪಶ್ಚಿಮ ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಗೆ ಎದುರಾಗಿದ್ದರೆ, ಕರ್ನಾಟಕ ಹೈಕೋರ್ಟ್‌ಗೆ ಎದುರಾಗಿರುವ ಪೂರ್ವ ಭಾಗದಲ್ಲಿ ಡಿಸಿಎಂ ಇದ್ದಾರೆ.

ದಶಕಗಳಿಂದ, ಮುಖ್ಯಮಂತ್ರಿಗಳು ವಿಧಾನಸಭೆ ಚೇಂಬರ್‌ನ ಹೊರಗಿನ ಮೊದಲ ಮಹಡಿಯಲ್ಲಿ ಹೆಚ್ಚುವರಿ ಕಚೇರಿಯನ್ನು ಪಡೆದುಕೊಳ್ಳುವ ಸವಲತ್ತು ಹೊಂದಿದ್ದರು. ಇದರಿಂದ ಅವರು ಅಧಿಕಾರಿಗಳು ಮತ್ತು ಶಾಸಕರನ್ನು ಭೇಟಿ ಮಾಡಲು, ವಿಶೇಷವಾಗಿ ವಿಧಾನಸಭೆ ಅಧಿವೇಶನಗಳಲ್ಲಿ ಭಾಗವಹಿಸಲು ನೆರವಾಗುತ್ತಿತ್ತು.

ಆದರೆ, ಈ ಹಿಂದೆ ಯಾವುದೇ ಉಪಮುಖ್ಯಮಂತ್ರಿ ತಮ್ಮ ಕಚೇರಿಯನ್ನು ವಿಧಾನಸಭೆಯ ಚೇಂಬರ್ ಪಕ್ಕದಲ್ಲೇ ಹೊಂದಿರಲಿಲ್ಲ. ಆದಾಗ್ಯೂ, ಈ ಬಾರಿ, ಶಿವಕುಮಾರ್ ಅವರು ತಮ್ಮ ಅಧಿಕಾರಿಗಳು ಮತ್ತು ಶಾಸಕರನ್ನು ಭೇಟಿ ಮಾಡಲು ತನಗೂ ಅಲ್ಲಿಯೇ ಕಚೇರಿ ಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.

ಶಿವಕುಮಾರ್ ಅವರು ವಿಧಾನಸಭೆ ಚೇಂಬರ್‌ನ ಎಡ ಮೂಲೆಯಲ್ಲಿರುವ ಕೊಠಡಿಯನ್ನು ಸಜ್ಜುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಧೀನ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಅದನ್ನು ಈಗ ಬಳಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಚಿತ್ತಾಪುರದಲ್ಲಿ ನ.2ಕ್ಕೆ RSS ಪಥಸಂಚಲನಕ್ಕೆ ಅನುಮತಿ: ಅ.24ಕ್ಕೆ ಅರ್ಜಿ ವಿಚಾರಣೆ, ಹೈಕೋರ್ಟ್ ಮಹತ್ವದ ಸೂಚನೆ

ನ.2ಕ್ಕೆ ಚಿತ್ತಾಪುರ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ: ಪ್ರಜಾತಂತ್ರದ ಹಕ್ಕು ಕಸಿಯಲು ಹೊರಟವರಿಗೆ ಮುಖಭಂಗವಾಗಿದೆ; BJP

Afghanistan-Pakistan War: ತಕ್ಷಣದ ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳು ಒಪ್ಪಿಗೆ: ಕತಾರ್ ವಿದೇಶಾಂಗ ಸಚಿವಾಲಯ

ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಇನ್ಮುಂದೆ ಗ್ರಾ.ಪಂ ವ್ಯಾಪ್ತಿಯಲ್ಲೂ ಸಿಗಲಿದೆ ಇ-ಸ್ವತ್ತು ಸೌಲಭ್ಯ..!

ಗುತ್ತಿಗೆದಾರರು ಬಾಕಿ ಬಿಲ್ ಕೇಳಿದರೆ ಅದು "ಧಮ್ಕಿ" ಹೇಗೆ ಆಗುತ್ತದೆ DCM ಡಿಕೆ.ಶಿವಕುಮಾರ್ ಅವರೇ?

SCROLL FOR NEXT