ರಾಜ್ಯ

ಉಡುಪಿ: ಪೊಲೀಸ್ ಪೇದೆ ಎಚ್ ಸಿ ಪ್ರಶಾಂತ್ ಆತ್ಮಹತ್ಯೆಗೆ ಶರಣು!

Vishwanath S

ಉಡುಪಿ: ಕಾರ್ಕಳ ನಗರ ಠಾಣೆ ಕಾನ್ಸ್ ಟೇಬಲ್ ಎಚ್ ಸಿ ಪ್ರಶಾಂತ್ ತಮ್ಮ ನಿವಾಸದಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

48 ವರ್ಷದ ಎಚ್ ಸಿ ಪ್ರಶಾಂತ್ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. 

ಮಾನಸಿಕ ಖಿನ್ನತೆ ಅಥವಾ ಸಾಲಭಾದೆಯಿಂದ ಆತ್ಮಹತ್ಯೆಗೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. 

SCROLL FOR NEXT