ಡಾ.ಜಿ ಪರಮೇಶ್ವರ್ 
ರಾಜ್ಯ

ಅಗತ್ಯ ವಸ್ತುಗಳ ಬೆಲೆ ಏಕಾಏಕಿ ಹೆಚ್ಚಲು ಕಾಳಧನ ಕಾರಣ; ತನಿಖೆ ಭರವಸೆ ನೀಡಿದ ಪರಮೇಶ್ವರ್

ದಿನ ಬಳಕೆಯ ಕೆಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ. ಸೊಪ್ಪು ತರಕಾರಿಗಳ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಧವಸ ಧಾನ್ಯಗಳ ಬೆಲೆ ಸಾಮಾನ್ಯ ಜನರ ಕೈಗೆ ನಿಲುದಂತಾಗಿದೆ.

ಬೆಂಗಳೂರು: ದಿನ ಬಳಕೆಯ ಕೆಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ. ಸೊಪ್ಪು ತರಕಾರಿಗಳ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಧವಸ ಧಾನ್ಯಗಳ ಬೆಲೆ ಸಾಮಾನ್ಯ ಜನರ ಕೈಗೆ ನಿಲುದಂತಾಗಿದೆ.

ಸೊಪ್ಪಿನ ಬೆಲೆ 90 ರಿಂದ 140 ರೂ.ಗೆ ಏರಿಕೆಯಾಗಿದ್ದು, ಪ್ರತಿ ಕೆಜಿಗೆ 50 ರೂ. ಏರಿಸಲಾಗಿದೆ, ಜೀರಿಗೆ 300 ರಿಂದ 650 ರೂ.ಗೆ ಏರಿಕೆಯಾಗಿದ್ದು, ಅಂದರೆ ಪ್ರತಿ ಕೆಜಿಗೆ 350 ರೂ. ಏರಿಕೆಯಾಗಿದೆ. ಬೆಳ್ಳುಳ್ಳಿ ಬೆಲೆ ಬಹುತೇಕ ದುಪ್ಪಟ್ಟಾಗಿದೆ. ಪ್ರತಿ ಕೆಜಿಗೆ 50-60 ರೂ.ನಿಂದ 110-120 ರೂ.ಗೆ ಏರಿದೆ. 90 ರು. ಇದ್ದ ತೊಗರಿ ಬೇಳೆ ಬೆಲೆ ಪ್ರತಿ ಕೆಜಿಗೆ 50 ರುಪಾಯಿ ಏರಿಕೆಯಾಗಿದ್ದು ಸದ್ಯ 140 ರು. ಆಗಿದೆ.

ಬೆಲೆ  ಏರಿಕೆ ಆಘಾತ ಕ್ಕೆ ವಿತರಕರ  ಅನಧಿಕೃತ ಸಂಗ್ರಹಣೆ ಕಾರಣ ಎಂದು APMC ಯ ಮೂಲಗಳು ತಿಳಿಸಿವೆ, ನಿತ್ಯ ಬಳಕೆಯ ವಸ್ತುಗಳ ಬೆಲೆ ಏರುತ್ತಿದ್ದರು ಸರ್ಕಾರ ಏನು ಮಾಡುತ್ತಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಇದೊಂದು ಗಂಭೀರ ವಿಚಾರ. ಇದನ್ನು ಯಾರೂ ಹಗುರವಾಗಿ ಪರಿಗಣಿಸಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡಬಾರದು. ನಾವು ಸ್ವತಂತ್ರ ತನಿಖೆ ನಡೆಸುತ್ತೇವೆ. ಕಾಳಧನದಿಂದ ಎಲ್ಲೆಲ್ಲಿ ಬೆಲೆ ಏರಿಕೆಯಾಗಿದೆಯೋ ಅಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಬೆಲೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಯಾರೂ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ಗುಣಮಟ್ಟ ಅಥವಾ ಸುವಾಸನೆಗೆ ಯಾವುದೇ  ತೊಂದರೆಯಿಲ್ಲ ಎಲ್ಲಾ ಮೂರು ಸರಕುಗಳನ್ನು ಕನಿಷ್ಠ ಎಂಟು ತಿಂಗಳವರೆಗೆ ಸಂಗ್ರಹಿಸಬಹುದು ಎಂದು ಆಹಾರ ತಜ್ಞರು ಹೇಳಿದ್ದಾರೆ.

ಕಳೆದ ತ್ರೈಮಾಸಿಕದಲ್ಲಿ ಹಣದುಬ್ಬರವು 4.1% ರಷ್ಟಿದೆ ಮತ್ತು ಆಹಾರ ಮತ್ತು ಅಗತ್ಯ ವಸ್ತುಗಳ ಬೆಲೆಗಳು ಸುಮಾರು ಒಂದು ತಿಂಗಳ ಹಿಂದೆಯೇ ಕಡಿಮೆಯಾಗಿದೆ. ಹಾಗಾದರೆ, ಬೆಲೆಗಳು ಏಕೆ ಹೆಚ್ಚಿವೆ? ಅದರಲ್ಲೂ ಹೊಸ ಸರಕಾರ ಇಲ್ಲಿ ಅಧಿಕಾರದಲ್ಲಿದ್ದಾಗ ಇದು ಕುತೂಹಲ ಮೂಡಿಸಿದೆ. ಸಂಸತ್ತಿನ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ಸರಕುಗಳ ಸಂಗ್ರಹವು ಪ್ರಾರಂಭವಾಗಿದೆ ಎಂಬುದಕ್ಕೆ ಇದು ಸೂಚನೆಯಾಗಿದೆ ಎಂದು ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಜೆ ಕ್ರಾಸ್ತಾ ತಿಳಿಸಿದ್ದಾರೆ.

ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮಾತನಾಡಿ, ಕಾಳಧನಿಕರಿಂದ ಬೆಲೆ ಏರಿಕೆಯಾಗಿದೆ. ಇದರಿಂದ ಬೆಳೆಗಾರನಿಗೂ, ಗ್ರಾಹಕರಿಗೂ ಪ್ರಯೋಜನವಿಲ್ಲ. ಕೇಂದ್ರ ಸರ್ಕಾರ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ' ಎಂದು ಎಚ್ಚರಿಕೆ ನೀಡಿದ್ದಾರೆ.

ಎಪಿಎಂಸಿಗೆ ಶೇ. 22-25ರಷ್ಟು ಕೃಷಿ ಉತ್ಪನ್ನಗಳು ಮಾತ್ರ ತಲುಪುತ್ತಿರುವುದು ಬೇಸರದ ಸಂಗತಿ. ಎಪಿಎಂಸಿ ವ್ಯಾಪ್ತಿಗೆ ಬರದಿದ್ದರೆ ಅಂದಾಜು ಪಟ್ಟಿ ಸಿಗುವುದು ಕಷ್ಟ. ಪಟ್ಟಭದ್ರ ಹಿತಾಸಕ್ತಿಗಳಿಂದ ಇವುಗಳನ್ನು ರಕ್ಷಿಸಬೇಕು. ಇಲ್ಲದಿದ್ದರೆ ಕೆಲವು ನಿರ್ಲಜ್ಜ ವ್ಯಾಪಾರಿಗಳಿಗೆ ಲಾಭವಾಗುತ್ತದೆ. ಅದನ್ನು ಸರಿಪಡಿಸಲು ಕೇಂದ್ರ ಸರ್ಕಾರ ಸುಸಂಬದ್ಧ ನೀತಿಯನ್ನು ರೂಪಿಸಬೇಕು ಎಂದು ಕೃಷಿ ಅರ್ಥಶಾಸ್ತ್ರಜ್ಞ ಪ್ರಕಾಶ ಕಮ್ಮರಡ್ಡಿ ಅಭಿಪ್ರಾಯ ಪಟ್ಟಿದ್ದಾರೆ.

ಏತನ್ಮಧ್ಯೆ, ಕೆಲವು ತಜ್ಞರು ಇತ್ತೀಚಿನ ತಿದ್ದುಪಡಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಅಗತ್ಯ ವಸ್ತುಗಳ ಕಾಯಿದೆ, ಸೆಕ್ಷನ್ 3, ವ್ಯಾಪಾರಿಗಳು ಅಕ್ರಮ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಾಗ ಅವರಿಗೆ ಕೆಲವು ವಿನಾಯಿತಿ ನೀಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

Minneapolis Shooter: 'Trump ಸಾವು.. ಭಾರತ ಸರ್ವನಾಶ': ಅಮೆರಿಕ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

SCROLL FOR NEXT