ಸಂಗ್ರಹ ಚಿತ್ರ 
ರಾಜ್ಯ

ಮತ ಚಲಾಯಿಸುವಂತೆ ನಗರದ ಮತದಾರರು, ಯುವಕರನ್ನು ಪ್ರೇರೇಪಿಸಬೇಕು: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್

ನಗರ ಪ್ರದೇಶದ ಮತದಾರರು ಮತದಾನದ ಬಗ್ಗೆ ನಿರಾಸಕ್ತಿ ತೋರುತ್ತಿರುವ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು: ನಗರ ಪ್ರದೇಶದ ಮತದಾರರು ಮತದಾನದ ಬಗ್ಗೆ ನಿರಾಸಕ್ತಿ ತೋರುತ್ತಿರುವ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಕಳವಳ ವ್ಯಕ್ತಪಡಿಸಿದರು. ಶುಕ್ರವಾರ ಬೆಂಗಳೂರಿನಲ್ಲಿ ಚುನಾವಣಾ ಹ್ಯಾಕಥಾನ್ “ELECTHON 2023” ಅನ್ನು ಪ್ರಾರಂಭಿಸಿದ ನಂತರ, ಆಯೋಗದ ಮುಂದೆ ಇರುವ ಪ್ರಮುಖ ಸವಾಲೆಂದರೆ, ಮುಖ್ಯವಾಗಿ ಯುವ ಮತ್ತು ನಗರ ಮತದಾರರಲ್ಲಿರುವ ಸಾಮಾನ್ಯ ನಿರಾಸಕ್ತಿಯನ್ನು ತೊಡೆದುಹಾಕುವುದಾಗಿದೆ ಎಂದರು.

ಕಾರಣಗಳು, ಗ್ರಹಿಕೆಗಳು, ನಂಬಿಕೆಗಳು, ಪ್ರೇರಣೆಗಳು, ಅಡೆತಡೆಗಳು, ಸವಾಲುಗಳು, ಅನುಭವಗಳು, ಸಂದರ್ಭಗಳು ಮತ್ತು ಅವರ ಮತವನ್ನು ಚಲಾಯಿಸದಿರುವ ನಿರ್ಧಾರವನ್ನು ರೂಪಿಸುವ ಬಾಹ್ಯರೇಖೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ. ಈ ಮತ ಚಲಾಯಿಸದವರು ಅವರ ಶಕ್ತಿಯನ್ನು ಅರಿತುಕೊಳ್ಳಲು, ಆ ಶಕ್ತಿಯನ್ನು ನಂಬಲು ಮತ್ತು ಅವರ ಒಂದು ಮತವು ದೊಡ್ಡ ಬದಲಾವಣೆಯನ್ನು ತರುತ್ತದೆ ಎಂಬ ಕರೆಯನ್ನು ತೆಗೆದುಕೊಳ್ಳಲು ನಾವು ಅವರನ್ನು ಪ್ರೇರೇಪಿಸಬಹುದೇ? ಇದೊಂದು ಸಾಮೂಹಿಕ ಪ್ರಯತ್ನ’ ಎಂದರು.

ಚುನಾವಣಾ ದಿನವನ್ನು ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಎಂದು ಆಚರಿಸುವುದಕ್ಕಿಂತ ಹೆಚ್ಚಾಗಿ ರಜಾದಿನವೆಂದು ಪರಿಗಣಿಸಲಾಗಿದೆ ಎಂದು ಹೇಳಿದರು.

ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಅವರು ಕರ್ನಾಟಕದ ಸಿಇಒ ಅವರು ಬಿಬಿಎಂಪಿಯೊಂದಿಗೆ ನಗರ ಮತ್ತು ಯುವಜನರ ನಿರಾಸಕ್ತಿ, ಜಾಗೃತಿ ಮೂಡಿಸಲು ಮತ್ತು ಮತದಾನ ಮಾಡಲು ಯುವಕರನ್ನು ಪ್ರೇರೇಪಿಸಲು ಆಯೋಜಿಸಿದ್ದ ವೋಟ್‌ಫೆಸ್ಟ್ 2023 ರಲ್ಲಿ ಭಾಗವಹಿಸಿದರು.

ಕೆಲವು ಹಿರಿಯ ಮತದಾರರನ್ನು ಸನ್ಮಾನಿಸಲಾಯಿತು ಮತ್ತು ಕೆಲವು ಯುವ ಮತದಾರರಿಗೆ ಸಾಂಕೇತಿಕವಾಗಿ ಹೊಸ ಮತದಾರರ ಗುರುತಿನ ಚೀಟಿಗಳನ್ನು ನೀಡಲಾಯಿತು. ಇದಕ್ಕೂ ಮುನ್ನ ಚುನಾವಣಾ ಪೂರ್ವ ಸಿದ್ಧತೆ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT