ರಾಜ್ಯ

ಕಾಲೇಜು ಸಾಂಸ್ಕೃತಿಕ ಉತ್ಸವದ ವೇಳೆ ವಿದ್ಯಾರ್ಥಿ ಹತ್ಯೆ ಪ್ರಕರಣ: ಇಬ್ಬರ ಬಂಧನ

Manjula VN

ಬೆಂಗಳೂರು: ಖಾಸಗಿ ಕಾಲೇಜಿನಲ್ಲಿ ನಡೆದಿದ್ದ ವಿದ್ಯಾರ್ಥಿ ಹತ್ಯೆ ಪ್ರಕರಣ ಸಂಬಂಧ ಇನ್ನೂ ಇಬ್ಬರು ಆರೋಪಿಗಳನ್ನು ಬಾಗಲೂರು ಠಾಣಾ ಪೊಲೀಸರು ಬಂಧನಕ್ಕೊಳಪಡಿಸಿದ್ದು, ಇದರೊಂದಿಗೆ ಪ್ರಕರಣ ಸಂಬಂಧ ಈ ವರೆಗೆ ಮೂವರನ್ನು ಬಂದಿಸಲಾಗಿದೆ.

ಬಂಧತರನ್ನು ಬಿದರಹಳ್ಳಿಯ ಎಂ.ಅನಿಲ್ ಕುಮಾರ್ (20), ಚಿಕ್ಕಮಗಳೂರಿನ ಎಚ್.ಡಿ.ಶೃಂಗಮಿತ್ರ (19) ಎಂದು ಗುರ್ತಿಸಲಾಗಿದೆ.

ಹತ್ಯೆಯಾದ ಒಂದು ದಿನದ ನಂತರ ಓರ್ವ ಆರೋಪಿ ಎನ್.ಎ.ಭರತೇಶ್ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಏ.28ರ ರಾತ್ರಿ ಕಾಲೇಜು ಸಾಂಸ್ಕೃತಿಕ ಉತ್ಸವದ ವೇಳೆ ಅದೇ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಭಾಸ್ಕರ್ ಜಟ್ಟಿ ಎಂಬಾತನ ಹೊಟ್ಟೆಗೆ ಹಲವು ಬಾರಿ ಚೂರಿಯಿಂದ ಇರಿಯಲಾಗಿತ್ತು. ಈ ವೇಳೆ ಭಾಸ್ಕರ್ ಮೃತಪಟ್ಟಿದ್ದ.

SCROLL FOR NEXT