ರಾಜ್ಯ

ಶಿಕ್ಷಣಕ್ಕೆ ಸಂಬಂಧಿಸಿದಂತೆ ತುರ್ತು ಸಭೆಗೆ ಕೆಎಎಂಎಸ್ ಮನವಿ

Srinivas Rao BV

ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಶಿಕ್ಷಣಕ್ಕೆ ಸಂಬಂಧಪಟ್ಟ ಅಂಶಗಳಿಗೆ ಆದ್ಯತೆ ನೀಡಬೇಕೆಂದು ಕರ್ನಾಟಕದಲ್ಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಯೋಜಿತ ಆಡಳಿತ (ಕೆಎಎಂಎಸ್) ಹೇಳಿದೆ.

ಈ ಹಿಂದಿನ ಸರ್ಕಾರ ಗಮನ ಹರಿಸದೇ ಉಳಿಸಿದ ಅಂಶಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತುರ್ತು ಸಭೆಯನ್ನು ನಡೆಸುವಂತೆ ಕೆಎಎಂಎಸ್ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ. 

ಕೆಎಎಂಎಸ್ ನಲ್ಲಿ ರಾಜ್ಯಾದ್ಯಂತ ಅಂದಾಜು 4,000 ಸದಸ್ಯರಿದ್ದು, ಸಮಸ್ಯೆಗಳ ಬಗ್ಗೆ ಗಮನಸೆಳೆಯುವುದಕ್ಕೆ ಯತ್ನಿಸಲಾಗಿದೆ. ಆದರೆ ಈ ಹಿಂದಿನ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತುಹೋಗಿದ್ದೆವು. ನಮ್ಮ ಸದಸ್ಯರು ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಹಾಗೂ ಹಲವು ಕಾನೂನು ಸಮರಗಳನ್ನು ಎದುರಿಸುತ್ತಿದ್ದಾರೆ ಎಂದು ಕೆಎಎಂಎಸ್ ತಿಳಿಸಿದೆ.

ಶಿಕ್ಷಕರಿಗೆ ಸುರಕ್ಷತಾ ಕಾನೂನುಗಳು, ಶಿಕ್ಷಕರ ವಿಮೆ, ರಾಜ್ಯವಾರು ಶಾಲಾ ಬಜೆಟ್‌ಗಳು ಮತ್ತು ಸಂಸ್ಥೆಗಳಿಗೆ ಹಣದ ಕೊರತೆ ಸೇರಿದಂತೆ ಅನುದಾನರಹಿತ ಖಾಸಗಿ ಶಾಲೆಗಳ ಬೆಂಬಲಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿವೆ ಎಂದು ಸಂಘ ಹೇಳಿದೆ. " ಹಳೆಯ ಶಿಕ್ಷಣ ಸಂಸ್ಥೆಗಳಿಗೆ ರಿಯಾಯಿತಿಗಳನ್ನು ನೀಡಬಹುದೆಂದು ಖಚಿತಪಡಿಸಿಕೊಳ್ಳಲು ನಾವು ಈ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಬಯಸುತ್ತೇವೆ ಎಂದು ಸಂಘ ಹೇಳಿದೆ.

SCROLL FOR NEXT