ಆಫ್ರಿಕಾ ನಟನಿಂದ ಬೆಂಗಳೂರಿನ ಮೂಲಸೌಕರ್ಯ ಅಪಹಾಸ್ಯ 
ರಾಜ್ಯ

ಆಫ್ರಿಕಾ ನಟನಿಂದ ಬೆಂಗಳೂರಿನ ಮೂಲಸೌಕರ್ಯ ಅಪಹಾಸ್ಯ: ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದ ಕಿರಣ್ ಮಜುಂದಾರ್ ಶಾ

ದಕ್ಷಿಣ ಆಫ್ರಿಕಾದ ಖ್ಯಾತ ಹಾಸ್ಯನಟ ಟ್ರೆವರ್ ನೋಹ್ ಬೆಂಗಳೂರಿನ ಮೂಲಸೌಕರ್ಯವನ್ನು ಅಪಹಾಸ್ಯ ಮಾಡಿದ್ದು, ಈ ಕುರಿತು ಪ್ರತಿಕ್ಯೆ ನೀಡಿರುವ ಖ್ಯಾತ ಉದ್ಯಮಿ ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಶಾ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದ್ದಾರೆ.

ಬೆಂಗಳೂರು: ದಕ್ಷಿಣ ಆಫ್ರಿಕಾದ ಖ್ಯಾತ ಹಾಸ್ಯನಟ ಟ್ರೆವರ್ ನೋಹ್ ಬೆಂಗಳೂರಿನ ಮೂಲಸೌಕರ್ಯವನ್ನು ಅಪಹಾಸ್ಯ ಮಾಡಿದ್ದು, ಈ ಕುರಿತು ಪ್ರತಿಕ್ಯೆ ನೀಡಿರುವ ಖ್ಯಾತ ಉದ್ಯಮಿ ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಶಾ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ಖ್ಯಾತ ಹಾಸ್ಯನಟ ಟ್ರೆವರ್ ನೋಹ್ ಬೆಂಗಳೂರಿನ ಮೂಲಸೌಕರ್ಯದ ಕುರಿತು ತಮ್ಮ ಕಾರ್ಯಕ್ರಮದಲ್ಲಿ ಅಪಹಾಸ್ಯ ಮಾಡಿದ್ದು, 'ಕಳಪೆ ರಸ್ತೆಗಳು, ಟ್ರಾಫಿಕ್ ಮತ್ತು ಶೋಚನೀಯ ಸ್ಥಳ.. ತಮಗೆ ಕಾರ್ಯಕ್ರಮಗಳು ಮಾಡಲು ಸಾಕಷ್ಟು ಕಂಟೆಂಟ್ ಸಿಕ್ಕಿದೆ ಎಂದು ಹೇಳುವ ಮೂಲಕ ನಟ ಟ್ರೆವರ್ ನೋಹ್ ಬೆಂಗಳೂರಿನ ಮೂಲಸೌಕರ್ಯವನ್ನು ಅಪಹಾಸ್ಯ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ವೈರಲ್ ವೀಡಿಯೊವನ್ನು ಹಂಚಿಕೊಂಡಿರುವ ಬಯೋಕಾನ್ ಸಂಸ್ಥಾಪಕಿ ಮತ್ತು ಉದ್ಯಮಿ ಕಿರಣ್ ಮಜುಂದಾರ್-ಶಾ ರಾಜ್ಯ ಆಡಳಿತವು ಎಚ್ಚೆತ್ತುಕೊಳ್ಳುವಂತೆ ಕರೆ ನೀಡಿದ್ದಾರೆ. 

ತಮ್ಮ ಟ್ವೀಟ್ ನಲ್ಲಿ ನಟ ನೋಹ್ ಪ್ರಸ್ತಾಪಿಸಿರುವ ವಿಷಯಗಳು ಸರಿಯಾಗಿವೆ. ಬೆಂಗಳೂರಿನ ಶಾಂಬೋಲಿಕ್ ರಾಜ್ಯವು ಟ್ರೆವರ್ ನೋಹ್ ಅವರ ಭವಿಷ್ಯದ ಪ್ರದರ್ಶನಗಳಿಗೆ ಸಾಕಷ್ಟು ವಿಷಯವನ್ನು ಒದಗಿಸಿದೆ. ಇದು ಆಡಳಿತವನ್ನು ಎಚ್ಚೆತ್ತುಕೊಳ್ಳದಿದ್ದರೆ ನಾವು ಆಶಿಸಲು ಏನೂ ಉಳಿದಿಲ್ಲ ಎಂದು ಟ್ವೀಟ್ ಮಾಡಿ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಂಚಾರ ಜಂಟಿ ಆಯುಕ್ತರು ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರನ್ನು ಟ್ಯಾಗ್ ಮಾಡಿದ್ದಾರೆ. 

ಇನ್ನು ನಟ ನೋಹ್ ತನ್ನ 'ಆಫ್ ದಿ ರೆಕಾರ್ಡ್' ಪ್ರವಾಸದ ಭಾಗವಾಗಿ, ಸೆಪ್ಟೆಂಬರ್ 27 ಮತ್ತು 28 ರಂದು ಬೆಂಗಳೂರಿನ ಮ್ಯಾನ್‌ಫೋ ಕನ್ವೆನ್ಷನ್ ಸೆಂಟರ್‌ನಲ್ಲಿ ಪ್ರದರ್ಶನ ನೀಡಬೇಕಿತ್ತು. ಆದರೆ ಪ್ರದರ್ಶನವನ್ನು ಆರಂಭವಾಗುವ ಕೇವಲ ಅರ್ಧ ಘಂಟೆಯ ಮೊದಲು ರದ್ದುಗೊಳಿಸಲಾಯಿತು. ಅಲ್ಲದೆ ಆಯೋಜಕರು ಪ್ರೇಕ್ಷಕರಿಗೆ ಕ್ಷಮೆಯಾಚಿಸಿ ಮತ್ತು ಟಿಕೆಟ್‌ಗಳ ಸಂಪೂರ್ಣ ಮರುಪಾವತಿಯ ಭರವಸೆ ನೀಡಿದರು.

ಈಗ, ನೋಹ್ ಅವರ ಶೋ ರದ್ದಾಗಿದ್ದಕ್ಕೆ ಕಾರಣ ತಿಳಿಸಿದ್ದು, ನಗರದ ಟ್ರಾಫಿಕ್, ಈವೆಂಟ್ ಸ್ಥಳದಲ್ಲಿನ ಅಡಚಣೆಗಳಿಂದ ಶೋ ರದ್ದಾಗಿದೆ ಎಂದು ಹೇಳಲಾಗಿದೆ. ನೋಹ್ ಅವರು ಪ್ರದರ್ಶನ ಸ್ಥಳವನ್ನು ತಲುಪಲು ಸುಮಾರು ಒಂದೂವರೆ ಗಂಟೆಗಳನ್ನು ತೆಗೆದುಕೊಂಡರು. ಹೀಗಾಗಿ ಅವರು ಧ್ವನಿ ತಪಾಸಣೆ ಮಾಡಲು ಸಾಧ್ಯವಾಗಲಿಲ್ಲ. ಮಣ್ಣಿನ ರಸ್ತೆಗಳು, ಧೂಳು, ರಸ್ತೆಗಳ ಮೇಲೆ ಬೀದಿನಾಯಿಗಳ ಆರ್ಭಟ, ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದೇ ನನಗೆ ಗೊಂದಲವಾಯಿತು. ಪ್ರದರ್ಶನದ ಸ್ಥಳವು ಅರೆ-ಶಾಶ್ವತ ಟೆಂಟ್‌ನಂತೆ ಕಾಣುತ್ತಿತ್ತು. ಆ ರೂಂಅನ್ನು ಮನುಷ್ಯರಿಗಾಗಿ ವಿನ್ಯಾಸಗೊಳಿಸಲಾಗಿಲ್ಲ ಎಂದು ನನಗನ್ನಿಸಿತು ಎಂದು ಅವರು ಹೇಳಿಕೊಂಡಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT