ನಮ್ಮ ಯಾತ್ರಿ 
ರಾಜ್ಯ

ಬೆಂಗಳೂರು: ನಮ್ಮ ಯಾತ್ರಿಯಿಂದ ಅಂಗವಿಕಲರಿಗಾಗಿ ಪರ್ಪಲ್ ರೈಡ್ ಸೇವೆ ಆರಂಭ

ಬೆಂಗಳೂರು ಮೂಲದ ಆ್ಯಪ್ ಆಧಾರಿತ ಸಂಸ್ಥೆ ನಮ್ಮ ಯಾತ್ರಿಯು ಎನೆಬಲ್ ಇಂಡಿಯಾ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ಅಂಗವಿಕಲ ಸ್ನೇಹಿ ಆಟೋರಿಕ್ಷಾ ಸೌಲಭ್ಯ ಪರ್ಪಲ್ ರೈಡ್ ಯೋಜನೆಗೆ ಜಾಲನೆ ನೀಡಿದೆ.

ಬೆಂಗಳೂರು: ಬೆಂಗಳೂರು ಮೂಲದ ಆ್ಯಪ್ ಆಧಾರಿತ ಸಂಸ್ಥೆ ನಮ್ಮ ಯಾತ್ರಿಯು ಎನೆಬಲ್ ಇಂಡಿಯಾ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ಅಂಗವಿಕಲ ಸ್ನೇಹಿ ಆಟೋರಿಕ್ಷಾ ಸೌಲಭ್ಯ ಪರ್ಪಲ್ ರೈಡ್ ಯೋಜನೆಗೆ ಜಾಲನೆ ನೀಡಿದೆ.

ಅಂಧರು, ಶ್ರವಣದೋಷವುಳ್ಳವರು ಹಾಗೂ ಅಂಗವಿಕಲ ವಾಹನ ಸವಾರರಿಗೆ ಅನುಗುಣವಾಗಿ ಪರ್ಪಲ್‌ ರೈಡ್ಸ್‌ ಅನ್ನು ನಮ್ಮ ಯಾತ್ರಿ ಪ್ರಾರಂಭಿಸಿದೆ.

ಈಗಾಗಲೇ ಇದರಲ್ಲಿ 3,500 ಗ್ರಾಹಕರು ಮತ್ತು 1,300 ಚಾಲಕರು ಈ ಸೇವೆನ್ನು ಬಳಸುತ್ತಿದ್ದು, 6 ಸಾವಿರಕ್ಕೂ ಹೆಚ್ಚು ಟ್ರಿಪ್‌ಗಳನ್ನು ಪೂರ್ಣಗೊಳಿಸಿದ್ದಾರೆ’ ಎಂದು ನಮ್ಮ ಯಾತ್ರಿ ಆ್ಯಪ್‌ನ ಎಂ.ಎಸ್. ಶಾನ್‌ ಮಾಹಿತಿ ನೀಡಿದ್ದಾರೆ.

‘ಪರ್ಪಲ್ ರೈಡ್ಸ್‌ನಲ್ಲಿ ಅಂಗವಿಕಲ ಗ್ರಾಹಕರ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಚಾಲಕರು ಕೆಲಸ ಮಾಡುತ್ತಾರೆ. ಶ್ರವಣ ದೋಷವುಳ್ಳ ಬಳಕೆದಾರರಿಗೆ ಆಟೊ, ಬೈಕ್‌ ಚಾಲಕರೊಂದಿಗೆ ಫೋನ್‌ ಕರೆಗಳ ಬದಲಿಗೆ ಸಂದೇಶಗಳ ಮೂಲಕ ಸಂವಹನ ನಡೆಸಬಹುದು. ಅಂಧರು ಟಾಕ್‌ಬ್ಯಾಕ್‌ ಸಹಾಯದಿಂದ ಸಂವಹನ ನಡೆಸಬಹುದು’ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT