ರಾಜ್ಯ

ವಿಡಿಯೋ: ಹಾವು ಹಿಡಿಯುವ ವೇಳೆ ಕಚ್ಚಿದ ನಾಗರಹಾವು, ಉರಗ ರಕ್ಷಕ ಆಸ್ಪತ್ರೆಗೆ ದಾಖಲು, ಸ್ಥಿತಿ ಗಂಭೀರ!

Srinivasamurthy VN

ಹೊನ್ನಾವರ: ಹಾವು ಹಿಡಿಯುವ ವೇಳೆ ಅವಘಡ ಸಂಭವಿಸಿ ನಾಗರಹಾವೊಂದು ಉರಗ ರಕ್ಷಕನಿಗೇ ಕಚ್ಚಿದ ಪರಿಣಾಮ ಆತನ ಪರಿಸ್ಥಿತಿ ಗಂಭೀರವಾಗಿ ಆತ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಬಾಳ ಹತ್ತಿರದ ಮನೆಯೊಂದರಲ್ಲಿ ಬಂದಿದ್ದ ನಾಗರಹಾವನ್ನು ಹಿಡಿಯಲು ಹೋದ ಉರಗ ತಜ್ಞನಿಗೆ ಹಾವು ಕಡಿದ ಪರಿಣಾಮ ಆಸ್ಪತ್ರೆಗೆ ದಾಖಲಿಸಿದ ಘಟನೆ ಸಂಭವಿಸಿದೆ.

ರಾತ್ರಿ ಸಮಯದಲ್ಲಿ ಮನೆಯ ಸಮೀಪ ಕಾಣಿಸಿಕೊಂಡ ನಾಗರಹಾವು ಹೋಗದೆ ಇರುವುದರಿಂದ ಉರಗ ತಜ್ಞ ಅಬು ತಲಾ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞ ಅಬು ತಲಾ ಹಾವಿನ ರಕ್ಷಣೆಗೆ ಮುಂದಾಗಿದ್ದಾರೆ. ಹಾವನ್ನು ಹಿಡಿಯುವಾಗ ಅಕಸ್ಮಾತಾಗಿ ಕೈ ಭಾಗಕ್ಕೆ ಹಾವು ಕಚ್ಚಿದೆ. ಆದರು ಹಾವನ್ನು ಹಿಡಿದ್ದಾರೆ. ನಂತರ ತಾಲೂಕು ಆಸ್ಪತ್ರೆಗೆ ಕರೆದೊಯ್ದರು ಸ್ಥಿತಿ ಗಂಭೀರವಾಗಿರುದರಿಂದ ಕೂಡಲೇ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರ ಸ್ಥಿತಿ ಗಂಭೀರವಾಗಿದೆ.

SCROLL FOR NEXT