ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕ: ಟ್ರೆಕ್ಕಿಂಗ್ ವೇಳೆ ಎನ್ಸೆಫಾಲಿಟಿಸ್ ಸೋಂಕು, 20 ದಿನ ಜೀವನ್ಮರಣ ಹೋರಾಟದ ಬಳಿಕ ಟ್ರೆಕ್ಕರ್ ಸಾವು

ಟ್ರೆಕ್ಕಿಂಗ್ ವೇಳೆ ಎನ್ಸೆಫಾಲಿಟಿಸ್ ಸೋಂಕಿಗೆ ತುತ್ತಾಗಿ ಕಳೆದ 20 ದಿನಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ 25 ವರ್ಷದ ಟ್ರೆಕ್ಕರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಟ್ರೆಕ್ಕಿಂಗ್ ವೇಳೆ ಎನ್ಸೆಫಾಲಿಟಿಸ್ ಸೋಂಕಿಗೆ ತುತ್ತಾಗಿ ಕಳೆದ 20 ದಿನಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ 25 ವರ್ಷದ ಟ್ರೆಕ್ಕರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸುಮಾರು ಎರಡು ತಿಂಗಳ ಹಿಂದೆ ಚಾರಣಕ್ಕೆ ತೆರಳಿದ್ದ 25 ವರ್ಷದ ಶಿವ ಪ್ರಸಾದ್‌ ಎಂಬುವರಿಗೆ ದಿಢೀರನೆ ಜ್ವರ ಕಾಣಿಸಿಕೊಂಡು ವಾಂತಿಭೇದಿ ಹಾಗೂ ತೀವ್ರ ಮೈಕೈ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಚೇತರಿಸಿಕೊಳ್ಳದ ಕಾರಣ ಅವರನ್ನು ಮೈಸೂರಿನ ಹಲವಾರು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. IV ಫ್ಲೂಡ್ಸ್ ಆ್ಯಂಟಿಬಯೋಟಿಕ್ಸ್ ಮತ್ತು ವಿವಿಧ ಔಷಧಿಗಳ ಮೂಲಕ ರೋಗಲಕ್ಷಣಗಳನ್ನು ನಿರ್ವಹಿಸಲಾಯಿತು.

ಆದರೆ ಈ ಚಿಕಿತ್ಸೆಗಳ್ಯಾವುದು ಶಿವ ಪ್ರಸಾದ್ ಪ್ರಸಾದ್ ಚೇತರಿಸಿಕೊಳ್ಳುವಂತೆ ಮಾಡಲಿಲ್ಲ. ಬದಲಿಗೆ ಅವರ ಆರೋಗ್ಯ ಸ್ಥಿತಿಯು ದಿನೇ ದಿನೇ ಕುಸಿಯತೊಡಗಿತ್ತು. ಬಳಿಕ ಅವರು ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು. ತೀವ್ರ ಅಸ್ವಸ್ಥರಾಗಿದ್ದ ಶಿವಪ್ರಸಾದ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ಅವರ ಅಂತ್ಯಕ್ರಿಯೆ ಮಂಗಳವಾರ ಹುಟ್ಟೂರು ಮೈಸೂರಿನಲ್ಲಿ ನೆರವೇರಿತು.

ಶಿವಪ್ರಸಾದ್ ಚಾರಣಕ್ಕೆ ಹೋಗಿದ್ದಾಗ ಅವರ ತಂಡ ಕಾಡಿನಲ್ಲಿ ಸತ್ತ ಕೋತಿಯನ್ನು ನೋಡಿದೆ ಎಂದು ಹೇಳಲಾಗುತ್ತಿದೆ. ಕೋತಿಯನ್ನು ಕೊಂದದ್ದು ಏನು ಎಂದು ಕುತೂಹಲದಿಂದ ಸುತ್ತ ಮುತ್ತ ನೋಡಿ ಸಾವಿಗೆ ಕಾರಣ ಹುಡುಕಲು ಯತ್ನಿಸಿದರು. ಆ ಸಮಯದಲ್ಲಿ ಶಿವಪ್ರಸಾದ್ ಚೆನ್ನಾಗಿದ್ದರು, ಆದರೆ ನಂತರ ಜ್ವರ ಮತ್ತು ಇತರ ಲಕ್ಷಣಗಳು ಕಾಣಿಸಿಕೊಂಡವು. ಹೀಗಾಗಿ ಶಿವ ಪ್ರಸಾದ್ ಗೆ ಮಂಗನ ಕಾಯಿಲೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಆದರೆ ಶಿವಪ್ರಸಾದ್ ರ ರೋಗಲಕ್ಷಣಗಳನ್ನು ಗಮನಿಸಿದರೆ ಸಂಭವನೀಯ ರೋಗನಿರ್ಣಯವು ಜಪಾನೀಸ್ ಎನ್ಸೆಫಾಲಿಟಿಸ್ ಎಂದು ಹೇಳಿದೆ. 

ಮೂಲಗಳ ಪ್ರಕಾರ, ಶಿವ ಪ್ರಸಾದ್ ಅವರ ವೈದ್ಯಕೀಯ ವರದಿಗಳು ಅವರ ಸಾವಿಗೆ ಸಂಭವನೀಯ ಕಾರಣ 'ಜಪಾನೀಸ್ ಎನ್ಸೆಫಾಲಿಟಿಸ್' ಎಂದು ತೋರಿಸಿದೆ, ಇದು ಮೆದುಳಿಗೆ ಸೋಂಕು ತರುತ್ತದೆ ಮತ್ತು ಸೊಳ್ಳೆಗಳಿಂದ ಒಯ್ಯುವ ವೈರಸ್ ಇದಾಗಿದೆ. ಉಣ್ಣೆಗಳಿಂದ ಹರಡುವ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದೂ ಕರೆಯಲ್ಪಡುವ ‘ಮಂಕಿ ಜ್ವರ’ ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಅವರನ್ನು ಆಗಸ್ಟ್ 28 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು, ಅಲ್ಲಿ ಇಸಿಎಂಒ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು ಎಂದು ಹೇಳಲಾಗಿದೆ.

ಸೋಂಕು ದೇಹ ಪ್ರವೇಶಿಸುತ್ತಿದ್ದಂತೆಯೇ ಇದು ರಕ್ತದ ಮೂಲಕ ಇಡೀ ದೇಹವನ್ನು ವ್ಯಾಪಿಸುತ್ತದೆ. ಇದರಿಂದ ECMO ಬಲ ಹೃತ್ಕರ್ಣದಿಂದ ಸಿರೆಯ ಅಥವಾ ಅಶುದ್ಧ ನೀಲಿ ರಕ್ತವನ್ನು ಖಾಲಿ ಮಾಡುತ್ತದೆ. ಇಲಿಯಾಕ್ ಅಪಧಮನಿಗೆ ಮರು ಆಕ್ಸಿಜನೀಕರಣದ ನಂತರ ಸಮತೋಲಿತ ಪರಿಮಾಣಗಳನ್ನು ಹಿಂದಿರುಗಿಸುತ್ತದೆ. ಇದೂ ಫಲಕಾರಿಯಾಗದೆ ಬಹು ಅಂಗಾಂಗ ವೈಫಲ್ಯದಿಂದ ಶಿವಪ್ರಸಾದ್ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT