ಗ್ರಹಣದ ವೇಳೆ ಹಣ್ಣು ಸೇವನೆ ಮಾಡುತ್ತಿರುವುದು. 
ರಾಜ್ಯ

ಗ್ರಹಣ; ಮೌಢ್ಯ ವಿರೋಧಿಸಿ ಟೌನ್ ಹಾಲ್ ಎದುರು ಆಹಾರ ಸೇವನೆ!

ಗ್ರಹಣಕ್ಕೆ ಸಂಬಂಧಿಸಿದ ಪುರಾಣ ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಲು ಮೂಢನಂಬಿಕೆ ವಿರೋಧಿ ಒಕ್ಕೂಟದ ಕಾರ್ಯಕರ್ತರು ಸೋಮವಾರ ಜಾಗೃತಿ ಮೂಡಿಸಿದರು.

ಬೆಂಗಳೂರು; ಗ್ರಹಣಕ್ಕೆ ಸಂಬಂಧಿಸಿದ ಪುರಾಣ ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಲು ಮೂಢನಂಬಿಕೆ ವಿರೋಧಿ ಒಕ್ಕೂಟದ ಕಾರ್ಯಕರ್ತರು ಸೋಮವಾರ ಜಾಗೃತಿ ಮೂಡಿಸಿದರು.

ಸೋಮವಾರ ನಗರದ ಪುರಭವನದ ಮೆಟ್ಟಿಲುಗಳ ಮೇಲೆ ಸಮೋಸಾ, ಬಜ್ಜಿ ಹಾಗೂ ಹಣ್ಣುಗಳು ಸೇರಿದಂತೆ ಮತ್ತಿತರ ಆಹಾರ ಪದಾರ್ಥಗಳನ್ನು ಸೇವಿಸಿ ಚಹಾ ಕುಡಿಯುವ ಮೂಲಕ ಗ್ರಹಣದ ಆಚರಣೆಯನ್ನು ಖಂಡಿಸಿದರು.

ಮೂಡಾಂಬಿಕೆ ವಿರೋಧ ಒಕ್ಕೂಟದ ಸಂಸ್ಥಾಪಕ ನರಸಿಂಹ ಮೂರ್ತಿ, ಸೂರ್ಯಗ್ರಹಣ, ಚಂದ್ರಗ್ರಹಣ ಪ್ರತಿ ವರ್ಷ ನಡೆಯುವ ಪ್ರಕ್ರಿಯೆ. ಆದರೆ, ಕೆಲ ಜ್ಯೋತಿಷಿಗಳು ಇಲ್ಲಸಲ್ಲದ ವಿವರಣೆ ಕೊಡುತ್ತಾರೆ. “ಗರ್ಭಿಣಿಯರು ಹೊರಗೆ ಹೋಗಬಾರದು, ಊಟ ಮಾಡಬಾರದು ಎಂದು ಜನರಿಗೆ ಕೆಲವು ಪ್ರಸ್ತುತವಲ್ಲದ ಸಲಹೆ ನೀಡುತ್ತಾರೆ. ಇವೆಲ್ಲ ಮೂಢನಂಬಿಕೆಗಳಾಗಿವೆ. ಜನರು ಇಂತಹ ಜ್ಯೋತಿಷಿಗಳನ್ನು ನಿರ್ಲಕ್ಷಿಸಬೇಕು. ಹೀಗಾಗಿ ಅರಿವು ಮೂಡಿಸಲು ಅಭಿಯಾನವನ್ನು ನಡೆಸಿದ್ದೇವೆಂದು ಹೇಳಿದರು.

ಜನರಿಗೆ ಸರಿಯಾದ ವೈಜ್ಞಾನಿಕ ದಾರಿ ತೋರಿಸಲು ಸುಮಾರು 20 ವರ್ಷದಿಂದ ಮೂಢ ನಂಬಿಕೆ ವಿರೋಧಿ ಒಕ್ಕೂಟದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT