ವಿ. ಸಿದ್ದರಾಮಣ್ಣ 
ರಾಜ್ಯ

ಬಾಗಲಕೋಟೆ: ವಚನ ಸಾಹಿತ್ಯದ ‘ಆಲದ ಮರ’ ಎಂದೇ ಪ್ರಸಿದ್ಧರಾಗಿದ್ದ ಶತಾಯುಷಿ ವಿ. ಸಿದ್ದರಾಮಣ್ಣ ನಿಧನ

ವಚನಗಳನ್ನು ಸ್ಮೃತಿಯಿಂದ ಪಠಿಸುವ ಸಾಮರ್ಥ್ಯ ಮತ್ತು ಲಿಂಗಾಯತ ಮತ್ತು ಬಸವ ತತ್ತ್ವದ ಬೋಧನೆಗಳನ್ನು ಮೌಖಿಕವಾಗಿ ಹಂಚಿಕೊಳ್ಳುವ ಶತಮಾನಗಳ ಹಳೆಯ ಸಂಪ್ರದಾಯವನ್ನು ಉಳಿಸಿಕೊಂಡು ಸಿದ್ದರಾಮಣ್ಣ ಅವರು ಪ್ರಸಿದ್ಧರಾಗಿದ್ದರು.

ಬಾಗಲಕೋಟೆ: ತಮ್ಮ ಅಪಾರ ಜ್ಞಾನ ಮತ್ತು ಬೋಧನೆಗಳಿಂದ ಬಸವ ತತ್ವದ ‘ಆಲದ ಮರ’ ಎಂದೇ ಖ್ಯಾತರಾಗಿದ್ದ ಶರಣ ವಿ ಸಿದ್ದರಾಮಣ್ಣ ಅವರು ಸೋಮವಾರ ಮಧ್ಯಾಹ್ನ ದಾವಣಗೆರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 104 ವರ್ಷ ವಯಸ್ಸಾಗಿತ್ತು.

ವಚನಗಳನ್ನು ಸ್ಮೃತಿಯಿಂದ ಪಠಿಸುವ ಸಾಮರ್ಥ್ಯ ಮತ್ತು ಲಿಂಗಾಯತ ಮತ್ತು ಬಸವ ತತ್ತ್ವದ ಬೋಧನೆಗಳನ್ನು ಮೌಖಿಕವಾಗಿ ಹಂಚಿಕೊಳ್ಳುವ ಶತಮಾನಗಳ ಹಳೆಯ ಸಂಪ್ರದಾಯವನ್ನು ಉಳಿಸಿಕೊಂಡು ಸಿದ್ದರಾಮಣ್ಣ ಅವರು ಪ್ರಸಿದ್ಧರಾಗಿದ್ದರು. ಈ ಸಂಪ್ರದಾಯವು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದಾದ್ಯಂತ ಹರಡಿರುವ ಲಿಂಗಾಯತ ಚಳವಳಿಯ ಮೂಲಾಧಾರವಾಗಿದೆ.

ಅವರ ಪಾರ್ಥಿವ ಶರೀರವನ್ನು ದಾವಣಗೆರೆ ಬಸವ ಬಳಗದಲ್ಲಿ ಮಂಗಳವಾರ ಬೆಳಗ್ಗೆ 9 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. ಅಂತ್ಯಕ್ರಿಯೆಯ ವಿಧಿಗಳು ಮಧ್ಯಾಹ್ನ 1 ಗಂಟೆಯ ನಂತರ ನೆರವೇರಿಸಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಮತ್ತಿಹಳ್ಳಿಯಲ್ಲಿ 1920ರಲ್ಲಿ ಜನಿಸಿದ ಸಿದ್ದರಾಮಣ್ಣ ವಚನ ಸಾಹಿತ್ಯದ ಬಗ್ಗೆ ಜ್ಞಾನ ಪ್ರಸಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT