ಭೋಜನ ಬಂಡಿಗಳಾಗಿ ಪರಿವರ್ತನೆಗೊಂಡಿರುವ ಬಿಎಂಟಿಸಿ ಬಸ್ ಗಳು. 
ರಾಜ್ಯ

BMTC ಸ್ಕ್ರ್ಯಾಪ್ ಬಸ್'ಗಳ ಪರಿವರ್ತನೆ; 'ಭೋಜನ ಬಂಡಿ'ಗಳಾಗಿ ಬಳಕೆ!

10.64 ಲಕ್ಷ ಕಿ.ಮೀ ಕ್ರಮಿಸಿದ ಉತ್ತರ ವಿಭಾಗಕ್ಕೆ ಸೇರಿದ ಬಿಎಂಟಿಸಿ ಸ್ಟೋರ್ ಬಸ್ ಅನ್ನು ದಾಸನಾಪುರದ ಸೆಂಟ್ರಲ್ ವರ್ಕ್‌ಶಾಪ್-4 ರ ತಾಂತ್ರಿಕ ಮತ್ತು ಇತರೆ ಸಿಬ್ಬಂದಿಗಳು ‘ಭೋಜನ ಬಂಡಿ’ (ಮೊಬೈಲ್ ಕ್ಯಾಂಟೀನ್)ಗಳಾಗಿ ಪರಿವರ್ತಿಸಿದ್ದಾರೆ.

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಕೆಲ ತಾಂತ್ರಿಕ ಸಿಬ್ಬಂದಿ ಸ್ಕ್ರ್ಯಾಪ್​ ಆದ ಬಸ್ ಅನ್ನು ಮೊಬೈಲ್ ಕ್ಯಾಂಟೀನ್ ಗಳಾಗಿ ಪರಿವರ್ತಿಸಿದ್ದು, ಈ ಮೂಲಕ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

10.64 ಲಕ್ಷ ಕಿ.ಮೀ ಕ್ರಮಿಸಿದ ಉತ್ತರ ವಿಭಾಗಕ್ಕೆ ಸೇರಿದ ಬಿಎಂಟಿಸಿ ಸ್ಟೋರ್ ಬಸ್ ಅನ್ನು ದಾಸನಾಪುರದ ಸೆಂಟ್ರಲ್ ವರ್ಕ್‌ಶಾಪ್-4 ರ ತಾಂತ್ರಿಕ ಮತ್ತು ಇತರೆ ಸಿಬ್ಬಂದಿಗಳು ‘ಭೋಜನ ಬಂಡಿ’ (ಮೊಬೈಲ್ ಕ್ಯಾಂಟೀನ್)ಗಳಾಗಿ ಪರಿವರ್ತಿಸಿದ್ದಾರೆ, ಸಿಬ್ಬಂದಿಗಳ ಈ ಶ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ಯಾಂಟಿನ್​ಗಳು ಇಲ್ಲದ ಬಿಎಂಟಿಸಿ ಡಿಪೋಗಳಿಗೆ ಈ ಮೊಬೈಲ್​ ಕ್ಯಾಂಟೀನ್ ಸಿದ್ಧಪಡಿಸಲಾಗಿದೆ. ಹಳೆ BMTC ಬಸ್​ಗಳನ್ನೇ ಕ್ಯಾಂಟೀನ್​ಗಳಾಗಿ ಮಾಡಿದ್ದು, ಇದಕ್ಕೆ ಭೋಜನ ಬಂಡಿ ಎಂದು ಹೆಸರಿಡಲಾಗಿದೆ.

ಈ ಮೊಬೈಲ್ ಕ್ಯಾಂಟೀನ್‌ನಲ್ಲಿ ಆಸನ, ಟೇಬಲ್, ಫ್ಯಾನ್ ಮತ್ತು ವಾಶ್ ಬೇಸಿನ್ ಇದೆ. ಇದಲ್ಲದೆ, ಇದು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡ ಹೊಂದಿದೆ. ಕ್ಯಾಂಟೀನ್‌ನ ಮೇಲ್ಭಾಗದಲ್ಲಿ ಗಾಜಿನ ಕಿಟಕಿ ಹೊಂದಿದ್ದು, ಗಾಳಿ ಮತ್ತು ಬೆಳಕು ಬರುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಕುರಿತು ಬಿಎಂಟಿಸಿ ಪ್ರಕಟಣೆ ಹೊರಡಿಸಿದ್ದು, ಸಿಬ್ಬಂದಿಗಳ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಮೊಬೈಲ್ ಕ್ಯಾಂಟೀನ್‌ಗೆ 'ಬನ್ನಿ, ಕುಳಿತುಕೊಳ್ಳಿ, ಒಟ್ಟಿಗೆ ಆಹಾರ ಸೇವಿಸೋಣ...ಇದು ತಾಂತ್ರಿಕ ಸಿಬ್ಬಂದಿಯ ಸೃಜನಶೀಲತೆ ಮತ್ತು ಶ್ರಮಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ: Sonam Wangchuk ಸಂಸ್ಥೆ ಪರವಾನಗಿ ರದ್ದುಪಡಿಸಿದ ಕೇಂದ್ರ ಸರ್ಕಾರ

ಮಾಲೀಕರು-ಬಾಡಿಗೆದಾರರ ನಡುವೆ ಘರ್ಷಣೆ ಹೆಚ್ಚಳ: ಬಾಡಿಗೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಅಸ್ತು!

ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಆಘಾತ: ಸ್ಟಾರ್ ಬೌಲರ್‌ಗೆ ಗಾಯ; ವೀಲ್‌ಚೇರ್‌ನಲ್ಲಿ ಸ್ಥಳಾಂತರ, Video!

ಜುಬೀನ್ ಗರ್ಗ್ ಸಾವಿನ ಪ್ರಕರಣ: ಸಂಗೀತಗಾರ ಶೇಖರ್ ಜ್ಯೋತಿ ಗೋಸ್ವಾಮಿ ಬಂಧಿಸಿದ SIT

Wipro ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ: ಸಿಎಂ ಸಿದ್ದರಾಮಯ್ಯ ಮನವಿ ತಿರಸ್ಕರಿಸಿದ Azim Premji

SCROLL FOR NEXT