ಸಾಂದರ್ಭಿಕ ಚಿತ್ರ 
ರಾಜ್ಯ

ಎರಡನೇ ಪತ್ನಿ ಕೊಂದು ಬಿಹಾರದಲ್ಲಿ ಮೂರನೇ ಮದುವೆಗೆ ಹೊರಟಿದ್ದ ವ್ಯಕ್ತಿಯ ಬಂಧನ!

ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಸರಿಯಾ ಪಟ್ಟಣದ ಪೇಂಟರ್ ಆಗಿರುವ ಮೊಹಮ್ಮದ್ ನಸೀಮ್, ಎರಡನೇ ಪತ್ನಿ ರುಮೇಶ್ ಖಾತೂನ್ ಜೊತೆ ಸರ್ಜಾಪುರದಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು.

ಬೆಂಗಳೂರು: ಎರಡನೇ ಪತ್ನಿಯನ್ನು ಕೊಂದು ಮೂರನೇ ಮದುವೆಗೆ ಹೊರಟ್ಟಿದ್ದ 39 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ರಿಜಿಸ್ಟ್ರಾರ್ ಮದುವೆಯಾಗಲು ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ದಂಪತಿಯನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ? ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಸರಿಯಾ ಪಟ್ಟಣದ ಪೇಂಟರ್ ಆಗಿರುವ ಮೊಹಮ್ಮದ್ ನಸೀಮ್, ಎರಡನೇ ಪತ್ನಿ ರುಮೇಶ್ ಖಾತೂನ್ ಜೊತೆ ಸರ್ಜಾಪುರದಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ನಸೀಂ ತನ್ನ ಆರು ಮಕ್ಕಳ ಪತ್ನಿಯನ್ನು ಕೊಂದು ಅದನ್ನು ಆತ್ಮಹತ್ಯೆಯಂತೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇತ್ತೀಚೆಗೆ, ಆತನೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ರುಮೇಶ್ ನಿರಾಕರಿಸಿದ ನಂತರ ಆಕೆಯ ಶೀಲವನ್ನು ಶಂಕಿಸುತ್ತಿದ್ದ ನಸೀಂ, ಆಕೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸುತ್ತಿದ್ದ. ಈ ವಿಚಾರದಲ್ಲಿ ದಂಪತಿ ನಡುವೆ ಜಗಳವಾಗುತಿತ್ತು. ನವೆಂಬರ್ ಎರಡನೇ ವಾರದಲ್ಲಿ ಆಕೆಯ ಕೊಲೆಯಾಗಿತ್ತು. ಆಕೆಯ ದೇಹ, ಕೈ ಮತ್ತು ಕಾಲುಗಳನ್ನು ಕೇಬಲ್ ಗಳಿಂದ ಕಟ್ಟಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ಚರಂಡಿವೊಂದರಲ್ಲಿ ಅರೆಬೆತ್ತಲೆ ದೇಹವನ್ನು ಎಸೆದಿದ್ದ.

ಒಂದು ದಿನದ ನಂತರ ಶವ ಪತ್ತೆಯಾಗಿತ್ತು. ನಂತರ ತನ್ನ ಎಂಟು ಮಕ್ಕಳನ್ನು ಬಿಹಾರದಲ್ಲಿರುವ ರುಮೇಶ್ ಅವರ ಕುಟುಂಬದ ಮನೆಗೆ ಕರೆದೊಯ್ದು, ಆಕೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಓಡಿಹೋಗಿರುವುದಾಗಿ ತಿಳಿಸಿದ್ದ. ಅಲ್ಲದೇ ಆ ಮಕ್ಕಳ ಶಿಕ್ಷಣ ಸೇರಿದಂತೆ ಎಲ್ಲಾ ಜವಾಬ್ದಾರಿಯನ್ನು ಅವರೇ ಹೊರಬೇಕು, ಪೊಲೀಸರಿಗೆ ದೂರು ನೀಡದಂತೆ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.

ಮೊದಲಿನಿಂದಲೂ ನಸೀಮ್ ಬಗ್ಗೆ ಅನುಮಾನವಿದ್ದ ಪೊಲೀಸರು ಆತ ಇರುವ ಸ್ಥಳವನ್ನು ಪತ್ತೆ ಹಚ್ಚಿದ್ದಾಗ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕ (ಎಸ್‌ಪಿ) ಸಿಕೆ ಬಾಬಾ ಅವರು ಟಿಎನ್‌ಐಇಗೆ ತಿಳಿಸಿದರು. ಈ ಮಧ್ಯೆ, ನಸೀಮ್ ಮೂರನೇ ಮದುವೆಯಾಗಲು ನಿರ್ಧರಿಸಿ ಸಾಯಿರಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಗೆ ಪ್ರಪೋಸ್ ಮಾಡಿದ್ದ. ನನ್ನ ಸಂತೋಷ ಕಿತ್ತುಕೊಳ್ಳಲು ಬಯಸುತ್ತಿರುವ ಜನರು ನನ್ನ ಬಗ್ಗೆ ಸುಳ್ಳು ವದಂತಿ ಹರಡುತ್ತಿದ್ದಾರೆ. ನಾನು ಪ್ರಾಮಾಣಿಕವಾಗಿ ಇದ್ದರೂ ಹೆಂಡತಿ ಬಿಟ್ಟುಹೋದಳು. ಪೊಲೀಸರು ಸೇರಿದಂತೆ ಯಾರಾದರೂ ಪ್ರಶ್ನಿಸಿದರೆ ನಾನೇ ರುಮೇಶ್ ಎಂದು ಹೇಳುವಂತೆ ಸಾಯಿರಾಗೆ ನಸೀಮ್ ಹೇಳಿದ್ದ.

ಪೊಲೀಸರು ಬಿಹಾರಕ್ಕೆ ಆಗಮಿಸಿದಾಗ ಸಾಯಿರಾ ತನ್ನನ್ನು ರುಮೇಶ್ ಎಂದು ಹೇಳುವ ಮೂಲಕ ಹಾದಿತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ತನ್ನ ಹೆಂಡತಿ ಇನ್ನೂ ಬದುಕಿದ್ದಾಳೆ ಎಂಬ ನಸೀಮ್‌ನ ಹೇಳಿಕೆಯನ್ನು ಬೆಂಬಲಿಸಲು ಆಕೆ ರುಮೇಶ್‌ನಂತೆ ನಟಿಸಿದ್ದಾಳೆ. ಆದಾಗ್ಯೂ ಪೊಲೀಸರು ಇತ್ತೀಚೆಗೆ ಸಾಯಿರಾ ಅವರ ತಂಗಿಯನ್ನು ಸಂಪರ್ಕಿಸಿದಾಗ ಆಕೆ ಹೇಳುತ್ತಿರುವುದು ಸುಳ್ಳು ಎಂಬುದು ಕಂಡುಬಂದಿದೆ. ಇದರಿಂದ ರುಮೇಶ್‌ನನ್ನು ಕೊಂದಿದ್ದು ನಸೀಂ ಎಂಬುದು ದೃಢಪಟ್ಟಿದೆ ಎಂದು ಎಸ್‌ಪಿ ಬಾಬಾ ವಿವರಿಸಿದ್ದಾರೆ.

ನಸೀಮ್ ಮತ್ತು ಸಾಯಿರಾ ತಮ್ಮ ವಿವಾಹವನ್ನು ನೋಂದಾಯಿಸಲು ನ್ಯಾಯಾಲಯಕ್ಕೆ ಹೋಗುತ್ತಿದ್ದಾಗ, ಪೊಲೀಸರು ನಸೀಮ್ ಅವರನ್ನು ಬಂಧಿಸಿದ್ದಾರೆ. ಅವರ ಮೊದಲ ಪತ್ನಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂಬ ಅವರ ಹೇಳಿಕೆಯನ್ನು ಈಗ ಪರಿಶೀಲಿಸುತ್ತಿದ್ದಾರೆ, ಏಕೆಂದರೆ ಆಕೆಯನ್ನು ಕೊಂದು ನಂತರ ಅದನ್ನು ಆತ್ಮಹತ್ಯೆ ಎಂದು ಕಥೆ ಕಟ್ಟಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸ್ಫೋಟದಲ್ಲಿ ಜೈಶ್‍ನ 22 ವೈಟ್-ಕಾಲರ್ ಭಯೋತ್ಪಾದಕರು ಭಾಗಿ: ವಿಮಾನ ನಿಲ್ದಾಣಗಳಿಗೆ ಲುಕ್ಔಟ್ ಎಚ್ಚರಿಕೆ

'RSSಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ; 100 ವರ್ಷಗಳಲ್ಲಿ ಮೊದಲ ಬಾರಿ ಕಾನೂನು ಪಾಲನೆ'

ಪುಣೆ: ವಾಹನಗಳಿಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಟ್ರಕ್; ಕನಿಷ್ಠ ಎಂಟು ಮಂದಿ ಸಾವು - Video

ಬೆಂಗಳೂರಿನಲ್ಲಿ ಕಸ ಗುಡಿಸುವ ಯಂತ್ರಗಳಿಗೆ 613 ಕೋಟಿ ರೂ. ಬಾಡಿಗೆ; ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು ಹೀಗಿವೆ

ಕೆಂಪು ಕೋಟೆ ಬಳಿ ನಡೆದದ್ದು ಉಗ್ರ ದಾಳಿ ಎಂಬುದರಲ್ಲಿ ಅನುಮಾನ ಇಲ್ಲ- ಮಾರ್ಕೊ ರುಬಿಯೊ; ಭಾರತದ ತನಿಖಾ ವಿಧಾನಕ್ಕೆ ತಲೆದೂಗಿದ ಅಮೆರಿಕ ಸಚಿವ!

SCROLL FOR NEXT