ಪ್ರಸ್ತುತ ಕಾಗಾರಿಯ ಚಿತ್ರ 
ರಾಜ್ಯ

ಮಡಿಕೇರಿ: ಮುಗಿಯದ ಜಿಲ್ಲಾಧಿಕಾರಿ ಕಚೇರಿ ರಿಟೈನಿಂಗ್ ವಾಲ್ ಕಾಮಗಾರಿ, ಜನರಿಗೆ ತಪ್ಪದ ಸಂಕಷ್ಟ!

ಕೊಡಗಿನ ಹಲವು ಮೂಲಸೌಕರ್ಯ ಯೋಜನೆಗಳು ಹಲವು ವರ್ಷಗಳಿಂದ ಅಪೂರ್ಣಗೊಂಡಿದ್ದು, ಈ ಅಪೂರ್ಣ ಕಾಮಗಾರಿಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ನಿರಾಸಕ್ತಿ ಎದ್ದು ಕಾಣುತ್ತಿದೆ. 

ಮಡಿಕೇರಿ: ಕೊಡಗಿನ ಹಲವು ಮೂಲಸೌಕರ್ಯ ಯೋಜನೆಗಳು ಹಲವು ವರ್ಷಗಳಿಂದ ಅಪೂರ್ಣಗೊಂಡಿದ್ದು, ಈ ಅಪೂರ್ಣ ಕಾಮಗಾರಿಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ನಿರಾಸಕ್ತಿ ಎದ್ದು ಕಾಣುತ್ತಿದೆ. 

ಮಳೆಗಾಲದಲ್ಲಿ ನಿವಾಸಿಗಳಿಗೆ ಅಪಾಯವನ್ನುಂಟುಮಾಡುವಂತಹ ಒಂದು ಯೋಜನೆ ಮಡಿಕೇರಿ ಜಿಲ್ಲಾಡಳಿತ ಕಚೇರಿಯ ಹಿಂಭಾಗದ ತಡೆಗೋಡೆ ಹಲವು ವರ್ಷಗಳೇ ಕಳೆದರೂ ಮುಗಿದಿಲ್ಲ. 2020 ರಿಂದ, ಯೋಜನೆ ಆರಂಭವಾಗಿದ್ದು, ಇನ್ನೂ ಪೂರ್ಣಗೊಂಡಿಲ್ಲ.

2019ರ ಮಳೆಗಾಲದಲ್ಲಿ ಮಡಿಕೇರಿ ಡಿಸಿ ಕಚೇರಿ ಹಿಂಭಾಗದಲ್ಲಿ ಸಣ್ಣಪುಟ್ಟ ಭೂಕುಸಿತ ಸಂಭವಿಸಿತ್ತು. ಆದಾಗ್ಯೂ, ದುರ್ಬಲವಾದ ಮಣ್ಣನ್ನು ಬಲಪಡಿಸಲು ಮತ್ತು ರಿಟೈನಿಂಗ್ ವಾಲ್ ನಿರ್ಮಿಸಲು ಮತ್ತಷ್ಟು ಅಗೆಯಲಾಯಿತು. 2020 ರಲ್ಲಿ, ಜರ್ಮನ್ ತಂತ್ರಜ್ಞಾನವನ್ನು ಬಳಸಿಕೊಂಡು ತಡೆಗೋಡೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಾಗಿದೆ.

7.53 ಕೋಟಿ ರೂ.ಗೆ ಮಂಜೂರಾದ ಈ ಕಾಮಗಾರಿಯನ್ನು ಅಯ್ಯಪ್ಪ ಕನ್ಸ್ಟ್ರಕ್ಷನ್ ಕಂಪನಿ ಗುತ್ತಿಗೆ ಪಡೆದಿದ್ದು, 11 ತಿಂಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ, ಭೂಕುಸಿತ ಪೀಡಿತ ಪ್ರದೇಶವನ್ನು ಬಲಪಡಿಸಲು ಅಳವಡಿಸಿದ ಫಲಕಗಳು ಕುಸಿಯುವ ಹಂತದಲ್ಲಿದ್ದು, ಕಳಪೆ-ಗುಣಮಟ್ಟದ ಕಾಮಗಾರಿ ಎಂಬುದು ಪೂರ್ಣಗೊಳ್ಳುವ ಮುನ್ನವೇ ಬಹಿರಂಗವಾಗಿದೆ. 

ಇದರ ಬೆನ್ನಲ್ಲೇ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ 2023ರಲ್ಲಿ ಲೋಕಾಯುಕ್ತ ದೂರು ದಾಖಲಾಗಿದ್ದು, ಎಂಜಿನಿಯರ್‌ಗಳಲ್ಲಿ ಒಬ್ಬರಾದ ಕೆಎಲ್ ದೇವರಾಜ್ ಅವರನ್ನು ಅಮಾನತುಗೊಳಲಾಗಿದೆ. ಹೀಗಾಗಿ ತಡೆಗೋಡೆಯನ್ನು ಸಂಪೂರ್ಣವಾಗಿ ತೆಗೆದು ಮರು ಕಾಮಗಾರಿ ನಡೆಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಆದೇಶ ನೀಡಲಾಗಿದೆ. 

ಕಾಮಗಾರಿಗೆ ಹೆಚ್ಚುವರಿ ಹಣ ಬಿಡುಗಡೆಯಾಗಿಲ್ಲ ಎಂದು ಪಿಡಬ್ಲ್ಯುಡಿ ಎಇಇ ಸಿದ್ದೇಗೌಡ ಅವರು ಖಚಿತಪಡಿಸಿದ್ದು, ಗುತ್ತಿಗೆದಾರರು ಸ್ವಂತ ಹಣ ಬಳಸಿ ಪೂರ್ಣಗೊಳಿಸಬೇಕು. ಆದರೆ, ಯೋಜನೆಯ ಕಾರ್ಯಕ್ಕೆ ಯಾವುದೇ ಗಡುವು ನೀಡದಿರುವುದು ಮತ್ತು ಅಧಿಕಾರಿಗಳು ಆಸಕ್ತಿ ವಹಿಸದಿರುವುದು ಈ ವರ್ಷವೂ ಯೋಜನೆ ಪೂರ್ಣಗೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT