ರಾಜ್ಯ

ರಾಮ ಮಂದಿರ ನಿರ್ಮಾಣ ಬಡತನ ನಿರ್ಮೂಲನೆ ಮಾಡಲಿದೆಯೇ? ಸಚಿವ ಸಂತೋಷ್ ಲಾಡ್

ರಾಮ ಮಂದಿರ ನಿರ್ಮಾಣ ಬಡತನ ನಿರ್ಮೂಲನೆ ಮಾಡಲಿದೆಯೇ? ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.

ಬೆಂಗಳೂರು: ರಾಮ ಮಂದಿರ ನಿರ್ಮಾಣ ಬಡತನ ನಿರ್ಮೂಲನೆ ಮಾಡಲಿದೆಯೇ? ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ. ರಾಮ ಮಂದಿರ ನಿರ್ಮಾಣ ರಾಜಕೀಯ ಪ್ರೇರಿತವಾದುದ್ದಾಗಿದ್ದು, ಮಂದಿರ ನಿರ್ಮಿಸುವುದರಿಂದ ಬಡತನ ನಿರ್ಮೂಲನೆಯಾಗುವುದಿಲ್ಲ. ಬಿಜೆಪಿ ರಾಜಕೀಯ ಲಾಭಕ್ಕಾಗಿ ರಾಮ ಮಂದಿರವನ್ನು ನಿರ್ಮಿಸಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಮಂದಿರ ನಿರ್ಮಾಣಕ್ಕೆ ಆಯ್ಕೆ ಮಾಡಲಾದ ಸ್ಥಳವೂ ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದ ಸ್ಥಳಕ್ಕಿಂತ ಭಿನ್ನವಾಗಿದೆ. ನಾವು ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುತ್ತಿಲ್ಲ. ಆದರೆ ಅದು ನಿರ್ಮಾಣಗೊಂಡಿರುವ ಸ್ಥಳ ಸರಿಯಲ್ಲ. ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗಿಲ್ಲ. ಸುಪ್ರೀಂ ಕೋರ್ಟ್ ಹೇಳಿದ ಸ್ಥಳದಲ್ಲಿ ದೇವಾಲಯದ ಶೇ.40 ರಷ್ಟು ಭಾಗ ಮಾತ್ರ ಇದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ರಾಮಮಂದಿರ ನಿರ್ಮಾಣ ಬಡತನ ನಿರ್ಮೂಲನೆಗೆ ದಾರಿ ಮಾಡಿಕೊಟ್ಟಿದೆಯೇ ಅಥವಾ ರೈತರಿಗೆ ಏನಾದರೂ ಪ್ರಯೋಜನವನ್ನು ತಂದಿದೆಯೇ ಎಂದು ಸಂತೋಷ್ ಲಾಡ್ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ. ಈಗ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳತ್ತ ಗಮನಸೆಳೆದ ಲಾಡ್, ಅವರ ಸಮಸ್ಯೆಗಳನ್ನು ಪರಿಹರಿಸುವ ಸರ್ಕಾರದ ಬದ್ಧತೆಯನ್ನು ಪ್ರಶ್ನಿಸಿದರು.

“ರಾಮಂದಿರದಿಂದ ನಿಮಗೇನು ಲಾಭ, ನಮ್ಮ ಸಹೋದರಿಯರಿಗೆ ಏನು ಲಾಭ? ಬಿಜೆಪಿಯವರು ಮಂದಿರದ ಆಧಾರದ ಮೇಲೆ ಮತ ಕೇಳುತ್ತಿರುವುದು ಏಕೆ? ರೈತರಿಗೆ ಲಾಭವಾಗಿದೆಯೇ? ಅವರಿಗೆ ಲಾಭವಾಗಿದ್ದರೆ, ರೈತರು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ? ಬುಲ್ಡೋಜರ್‌ಗಳು ಏಕೆ? ಮತ್ತು ರೈತರ ವಿರುದ್ಧ ಅಶ್ರುವಾಯು ಬಳಸಲಾಗುತ್ತಿದೆಯೇ? ಸಚಿವರು ಕೇಳಿದ್ದಾರೆ. ಸಂತೋಷ್ ಲಾಡ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, "ರಾಮ ಮಂದಿರವನ್ನು ನಿರ್ಮಿಸಿದ ಸ್ಥಳವು 500 ವರ್ಷಗಳ ಹಿಂದೆ ರಾಮಲಲ್ಲಾ ಇದ್ದ ಸ್ಥಳವಾಗಿದೆ. ಇದೆಲ್ಲವನ್ನು ಖಚಿತಪಡಿಸಿಕೊಳ್ಳಲು ಸಂತೋಷ್ ಲಾಡ್ 500 ವರ್ಷಗಳ ಹಿಂದೆ ಹುಟ್ಟಿರಲಿಲ್ಲ. ಅವರಿಗೆ ರಾಜ್ಯದಲ್ಲಿ ಸಾಕಷ್ಟು ವಿಷಯಗಳಿವೆ. ಹಾಗೆ, ಅವರು ಅದರ ಮೇಲೆ ಗಮನ ಕೇಂದ್ರೀಕರಿಸಬೇಕು, ”ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT