Photo 
ರಾಜ್ಯ

ಕಲಬುರಗಿ: ಧಾರ್ಮಿಕ ಮತಾಂತರ ಪ್ರಕರಣದಲ್ಲಿ ಇಬ್ಬರು ನರ್ಸ್‌ ಸೇರಿ 11 ಮಂದಿ ವಿರುದ್ಧ ಎಫ್‌ಐಆರ್

ಕಲಬುರಗಿ ಜಿಲ್ಲೆಯಲ್ಲಿ ಆಪಾದಿತ 'ಬಲವಂತದ' ಧಾರ್ಮಿಕ ಮತಾಂತರ ಪ್ರಕರಣದಲ್ಲಿ ಒಂಬತ್ತು ಕಾರ್ಯಕರ್ತರು ಮತ್ತು ಇಬ್ಬರು ನರ್ಸ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಬೆಂಗಳೂರು: ಕಲಬುರಗಿ ಜಿಲ್ಲೆಯಲ್ಲಿ ಆಪಾದಿತ 'ಬಲವಂತದ' ಧಾರ್ಮಿಕ ಮತಾಂತರ ಪ್ರಕರಣದಲ್ಲಿ ಒಂಬತ್ತು ಕಾರ್ಯಕರ್ತರು ಮತ್ತು ಇಬ್ಬರು ನರ್ಸ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಫೆಬ್ರುವರಿ 22 ರಂದು ಅಶ್ವಿನಿ ಮತ್ತು ರುಬಿಕಾ ಎಂಬ ಇಬ್ಬರು ಕ್ರಿಶ್ಚಿಯನ್ ನರ್ಸ್‌ಗಳು ರಟಕಲ್ ಗ್ರಾಮದ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ 'ಬಲವಂತವಾಗಿ' ಮತಾಂತರಿಸಲು ಪ್ರಯತ್ನಿಸಿದ್ದರು. ಹಿಂದೂ ಜಾಗೃತಿ ಸೇನಾ ಎಂಬ ಹಿಂದೂ ಸಂಘಟನೆಯು ಇಬ್ಬರು ದಾದಿಯರ ವಿರುದ್ಧ ಪ್ರಕರಣ ದಾಖಲಿಸಿದೆ.

ಶುಕ್ರವಾರ ನರ್ಸ್‌ಗಳಲ್ಲಿ ಒಬ್ಬರಾದ ಅಶ್ವಿನಿ ಅವರು ಹಿಂದೂ ಜಾಗೃತಿ ಸೇನೆಯ ಅಧ್ಯಕ್ಷ ಶಂಕರ್ ಚೋಕಾ, ಬಸವರಾಜ್, ವಿಷ್ಣು ಮತ್ತು ಇತರರ ವಿರುದ್ಧ ದೌರ್ಜನ್ಯ ಕಾಯ್ದೆ ಮತ್ತು ಇತರ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹಿಂದೂ ಜಾಗೃತಿ ಸೇನಾ ತನ್ನ ದೂರಿನಲ್ಲಿ, ಆರೋಪಿ ನರ್ಸ್‌ಗಳು ಹಣ ನೀಡುತ್ತಿದ್ದಾರೆ ಮತ್ತು ಜನರನ್ನು ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುತ್ತಿದ್ದಾರೆ ಎಂದು ಹೇಳಿದೆ.

'ಹಿಂದೂ ಜಾಗೃತಿ ಸೇನೆಯ ಸದಸ್ಯರು ಸ್ಥಳಕ್ಕೆ ತೆರಳಿ ನರ್ಸ್‌ಗಳನ್ನು ಪ್ರಶ್ನಿಸಿದ್ದಾರೆ. ಅವರು ಧಾರ್ಮಿಕ ಬೋಧಕರನ್ನು ಆಹ್ವಾನಿಸಿ, ಬೈಬಲ್ ಅನ್ನು ಬೋಧಿಸಿದರು. ಅವರು ಧಾರ್ಮಿಕ ಮತಾಂತರದಲ್ಲಿ ತೊಡಗಿದ್ದಾರೆ ಮತ್ತು ಗ್ರಾಮದಲ್ಲಿ ಕೋಮು ಗಲಭೆ ಸೃಷ್ಟಿಸುತ್ತಿದ್ದಾರೆ' ಎಂದು ಸೇನೆ ಆರೋಪಿಸಿದೆ.

ಇವರಿಬ್ಬರು ಸರ್ಕಾರಿ ಉದ್ಯೋಗಿಗಳಾಗಿದ್ದು, ಧರ್ಮದ ಬಗ್ಗೆ ತಲೆಕೆಡಿಸಿಕೊಳ್ಳದೆ ಎಲ್ಲಾ ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲು ನರ್ಸ್‌ಗಳು ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಮತ್ತು ಮತಾಂತರದಲ್ಲಿ ತೊಡಗಿದ್ದಾರೆ ಎಂದು ಸೇನೆ ದೂರಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಯಕತ್ವ ಬದಲಾವಣೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಗರಂ; ನಾಯಕರಿಗೆ ಖಡಕ್ ಸಂದೇಶ

ಭಕ್ತಿ ಗೀತೆ ಹಾಡಿದ್ದಕ್ಕೆ ಬಂಗಾಳಿ ಗಾಯಕಿ ಲಗ್ನಜಿತಾ ಚಕ್ರವರ್ತಿ ಮೇಲೆ ಮೆಹಬೂಬ್ ಮಲ್ಲಿಕ್‌ನಿಂದ ಹಲ್ಲೆಗೆ ಯತ್ನ, Video Viral

ಆರೋಗ್ಯ ತಪಾಸಣೆಯೋ ಅಥವಾ ರಾಜಕೀಯವೋ? ಕುತೂಹಲ ಮೂಡಿಸಿದ ನಿತೀಶ್ ಕುಮಾರ್ ದೆಹಲಿ ಭೇಟಿ

U-19 Asia Cup ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಹೀನಾಯ ಸೋಲು!

ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿನ ವೀಸಾ ಕೇಂದ್ರ ಸ್ಥಗಿತಗೊಳಿಸಿದ ಭಾರತ

SCROLL FOR NEXT