ರಾಜ್ಯ

ಕೇಂದ್ರದ ನೆರವಿನ ಕುರಿತು ಶ್ವೇತಪತ್ರ ಬಿಡುಗಡೆ ಮಾಡಿ: ಕರ್ನಾಟಕ ಸರ್ಕಾರಕ್ಕೆ ಸಚಿವ ಪ್ರಹ್ಲಾದ್ ಜೋಶಿ ಸೂಚನೆ

Ramyashree GN

ಹುಬ್ಬಳ್ಳಿ: ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಬಂದಿರುವ ಅನುದಾನ ಮತ್ತು ಈಗ ಕಾಂಗ್ರೆಸ್ ಸರ್ಕಾರ ಪಡೆದಿರುವ ಹಣದ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್‌ಟಿ ಜಾರಿಯಾದ ನಂತರ ರಾಜ್ಯಕ್ಕೆ ಕೇಂದ್ರದ ನೆರವು ಹೆಚ್ಚಿದೆ ಎಂದಿದ್ದಾರೆ.

'ಹಿಂದೆ, ಕೇಂದ್ರವು ರಾಜ್ಯಗಳಿಗೆ ಬರ ಅಥವಾ ಇತರ ವಿಪತ್ತುಗಳಿಗೆ ಪರಿಹಾರವನ್ನು ಘೋಷಿಸುತ್ತಿತ್ತು. ಈಗ, ವ್ಯವಸ್ಥೆ ಬದಲಾಗಿದೆ ಮತ್ತು ಕೇಂದ್ರವು ನಿರಂತರವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ನಿಂದ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ಗೆ ಹಣವನ್ನು ನೀಡುತ್ತದೆ. ಎಸ್‌ಡಿಆರ್‌ಎಫ್‌ನಲ್ಲಿನ ಹಣವನ್ನು ಖರ್ಚು ಮಾಡಿದ ನಂತರ, ಕೇಂದ್ರವು ಎಸ್‌ಡಿಆರ್‌ಎಫ್‌ಗೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುತ್ತದೆ. ಆದ್ದರಿಂದ ರಾಜ್ಯವು ಇದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸ್ವೀಕರಿಸಬೇಕು' ಎಂದು ಹೇಳಿದರು.

ರಾಜ್ಯ ಸರ್ಕಾರ ಮೊದಲು ಈಗಾಗಲೇ ಎಸ್‌ಡಿಆರ್‌ಎಫ್‌ನಲ್ಲಿರುವ ಹಣವನ್ನು ಖರ್ಚು ಮಾಡಬೇಕು. ಬಳಿಕ 'ಇನ್ನಷ್ಟು ಹೆಚ್ಚು ಪರಿಹಾರ ಖಂಡಿತವಾಗಿಯೂ ಬರುತ್ತವೆ' ಎಂದು ಅವರು ಹೇಳಿದರು.

SCROLL FOR NEXT