ಲೈಂಗಿಕ ಕಿರುಕುಳ 
ರಾಜ್ಯ

ಬೆಂಗಳೂರು: ಕಾರಿನಲ್ಲಿ ಕುಳಿತಿದ್ದ ಮಹಿಳೆ ಎದುರು ಅನುಚಿತವಾಗಿ ವರ್ತಿಸಿದ ವ್ಯಕ್ತಿ, ತನಿಖೆ ಕೈಗೆತ್ತಿಕೊಂಡ ಪೊಲೀಸರು

ಬೆಂಗಳೂರು ಮೂಲದ ಮಹಿಳೆಯೊಬ್ಬರು ಬ್ಯುಸಿನೆಸ್ ಪಾರ್ಕ್‌ ಬಳಿ ಕಾರಿನೊಳಗೆ ಕುಳಿತಿದ್ದಾಗ ಪುರುಷನೊಬ್ಬ ತನ್ನ ಕಡೆಗೆ ಅನುಚಿತವಾಗಿ ವರ್ತಿಸುವ ಮತ್ತು ಅಶ್ಲೀಲ ಸನ್ನೆಗಳನ್ನು ಮಾಡುವ ಮೂಲಕ ಕಿರುಕುಳ ನೀಡಿದ್ದಾನೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಆರೋಪಿಸಿದ್ದಾರೆ. 

ಬೆಂಗಳೂರು: ಬೆಂಗಳೂರು ಮೂಲದ ಮಹಿಳೆಯೊಬ್ಬರು ಬ್ಯುಸಿನೆಸ್ ಪಾರ್ಕ್‌ ಬಳಿ ಕಾರಿನೊಳಗೆ ಕುಳಿತಿದ್ದಾಗ ಪುರುಷನೊಬ್ಬ ತನ್ನ ಕಡೆಗೆ ಅನುಚಿತವಾಗಿ ವರ್ತಿಸುವ ಮತ್ತು ಅಶ್ಲೀಲ ಸನ್ನೆಗಳನ್ನು ಮಾಡುವ ಮೂಲಕ ಕಿರುಕುಳ ನೀಡಿದ್ದಾನೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಆರೋಪಿಸಿದ್ದಾರೆ. 

ಈ ಕುರಿತು ಮಾಡಿರುವ ಪೋಸ್ಟ್‌ನಲ್ಲಿ, ಜನವರಿ 5 ರಂದು ಈ ಘಟನೆ ಸಂಭವಿಸಿದ್ದು, ಇಂದು ಬೆಳಕಿಗೆ ಬಂದಿದೆ. ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆ ಮಹದೇವಪುರ ಪೊಲೀಸರಿಗೆ ಮನವಿ ಮಾಡಿದ್ದಾರೆ.

'ರಾತ್ರಿ 8.40 ರ ಸುಮಾರಿಗೆ ಮಹದೇವಪುರದ ಬಾಗಮನೆ ಕಾನ್ಸ್ಟೆಲೇಷನ್ ಬ್ಯುಸಿನೆಸ್ ಪಾರ್ಕ್ ಎದುರು ನನಗೆ ಕೆಟ್ಟ ಅನುಭವವಾಯಿತು. ಸರ್ವಿಸ್ ರಸ್ತೆಯ ಪಾರ್ಕಿಂಗ್ ಸ್ಥಳದಲ್ಲಿ ಕಾರಿನೊಳಗೆ ಕುಳಿತಿದ್ದಾಗ, ವ್ಯಕ್ತಿಯೊಬ್ಬರು ನನಗೆ ಎದುರಾದರು. ಆತ ನನ್ನನ್ನೇ ದಿಟ್ಟಿಸುತ್ತಲೇ ಅನುಚಿತವಾಗಿ ವರ್ತಿಸಲು ಆರಂಭಿಸಿದ ಮತ್ತು ನನ್ನತ್ತ ತಿರುಗಿ ಹಸ್ತಮೈಥುನ ಸೇರಿದಂತೆ ಅಶ್ಲೀಲ ಸನ್ನೆಗಳನ್ನು ಮಾಡುತ್ತಿದ್ದ' ಎಂದಿದ್ದಾರೆ.

'ಹೆದರಿಕೆ ಉಂಟಾಗಿ ನಾನು ನನ್ನ ಕಾರನ್ನು ಲಾಕ್ ಮಾಡಿ ಕುಳಿತೆ. ಆದರೆ, ಇನ್ನೊಂದು ಕಾರು ಅಡ್ಡ ಬಂದಿದ್ದರಿಂದ ನಾನು ಹೊರಹೋಗಲು ಸಾಧ್ಯವಾಗಲಿಲ್ಲ. ಈ ವೇಳೆ ಆ ವ್ಯಕ್ತಿ ನನ್ನ ಕಾರನ್ನು ಹಲವು ಬಾರಿ ಸುತ್ತು ಹಾಕಿದ. ಚಾಲಕನ ಕಡೆಯ ಕಿಟಕಿ ಬಳಿಗೆ ಬಂದು ನನ್ನ ಕಡೆಗೆ ಅಶ್ಲೀಲ ಸನ್ನೆ ಮಾಡಿದ. ನಾನು ಸ್ಟೇರಿಂಗ್ ಕೆಳಗೆ ಅಡಗಿ ಕೂರುವಂತಾಯಿತು' ಎಂದಿದ್ದಾರೆ.

'ನಾನು ಆತನನ್ನು ನಿರ್ಲಕ್ಷಿಸಲು ಪ್ರಯತ್ನಿಸಿದರೂ, ಆತ ತನ್ನ ಅನುಚಿತ ವರ್ತನೆಯನ್ನು ಮುಂದುವರಿಸಿದ. ನಾನು ಭಯದಿಂದ ತತ್ತರಿಸಿ ಹೋಗಿದ್ದೆ, ನನ್ನ ಹೃದಯ ಬಡಿತ ಜೋರಾಗಿತ್ತು. ಅದಾದ ಸುಮಾರು 10 ನಿಮಿಷಗಳ ನಂತರ, ನನ್ನ ಸ್ನೇಹಿತರೊಬ್ಬರು ಬಂದರು. ಆಗ ನಾನು ಇನ್ನೊಂದು ಬಾಗಿಲಿನಿಂದ ನನ್ನ ಕಾರಿನಿಂದ ಹೊರಬಂದು ಅವರ ಕಾರನ್ನು ಹತ್ತಿದೆ' ಎಂದು ಹೇಳಿದ್ದಾರೆ. 

'ಬಳಿಕ ನಾವು ಪಾರ್ಕಿಂಗ್ ಪ್ರದೇಶದಲ್ಲಿ ಆತನಿಗಾಗಿ ಹುಡುಕಿದೆವು. ಆದರೆ, ಆ ವ್ಯಕ್ತಿ ಕಣ್ಮರೆಯಾಗಿದ್ದನು' ಎಂದು ಮಹಿಳೆ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT