ರಾಜ್ಯ

ಧಾರವಾಡ: ಕೋಮು ಉದ್ವಿಗ್ನತೆ ನಂತರ ಭಯದಿಂದ ತಡಕೋಡು ಗ್ರಾಮ ತೊರೆದ ಹಲವು ಕುಟುಂಬಗಳು!

Shilpa D

ಧಾರವಾಡ: ಧಾರವಾಡ ಜಿಲ್ಲೆಯ ತಡಕೋಡು ಗ್ರಾಮಕ್ಕೆ ಹಿಂದೂ ಕಾರ್ಯಕರ್ತರ ಭೇಟಿಗೆ ಹೆದರಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಕೆಲವು ಕುಟುಂಬಗಳು ಸದ್ದಿಲ್ಲದೆ ಗ್ರಾಮವನ್ನು ತೊರೆಯುತ್ತಿವೆ.

ಇತ್ತೀಚೆಗೆ, ಅಲ್ಪಸಂಖ್ಯಾತ ಸಮುದಾಯದ ಯುವಕ ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಚಿತ್ರವನ್ನು ಪೋಸ್ಟ್ ಮಾಡಿದ ನಂತರ  ನಡೆದ ಕೋಮುಗಲಭೆಯು ಗ್ರಾಮವನ್ನು ಬೆಚ್ಚಿಬೀಳಿಸಿದೆ.

ಇದರ ಬೆನ್ನಲ್ಲೇ ಹಿಂದೂ ಕಾರ್ಯಕರ್ತರು ಗ್ರಾಮಕ್ಕೆ ಭೇಟಿ ನೀಡಿ,  ಪೋಸ್ಟ್ ಹಾಕಿದ್ದ ಯುವಕನನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುವುದಾಗಿ ಹೇಳಿಕೆ ನೀಡಿದ್ದರು. ಪೊಲೀಸರ ಉಪಸ್ಥಿತಿಯಲ್ಲಿ, ಕನಿಷ್ಠ ಐದು ಕುಟುಂಬಗಳು ಭಾನುವಾರ ಮಧ್ಯರಾತ್ರಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಸಮುದಾಯದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ನಾವು ಎಲ್ಲಾ ಕಾರ್ಯಕ್ರಮಗಳನ್ನು ಪರಸ್ಪರ ಗೌರವದಿಂದ ಆಚರಿಸುತ್ತಿದ್ದೆವು, ನಾವು ಸಹೋದರತ್ವದ ಮನೋಭಾವದಿಂದ ಬದುಕುತ್ತಿದ್ದೆವು. ಆದರೆ ಒಬ್ಬ ಯುವಕನ ಒಂದೇ ಒಂದು ತಪ್ಪು ಸಮುದಾಯಗಳ ನಡುವೆ ಕಂದಕ ಸೃಷ್ಟಿ ಮಾಡಿದೆ ಅವರು ಹೇಳಿದರು. ಸೋಷಿಯಲ್ ಮೀಡಿಯಾ ಪೋಸ್ಟ್ ನಂತರ, ಸಮುದಾಯದ ಮುಖಂಡರು ಸಭೆ ನಡೆಸಿ ಸಮಸ್ಯೆಯನ್ನು ಪರಿಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗ್ರಾಮಸ್ಥರು ಪೊಲೀಸರಿಗೆ ದೂರು ನೀಡದಿರಲು ನಿರ್ಧರಿಸಿದರು, ಆದರೆ ಇದ್ದಕ್ಕಿದ್ದಂತೆ ಯುವಕನ ಮನೆಗೆ ಮುತ್ತಿಗೆ ಹಾಕಿ , ಸಮುದಾಯದ ಧಾರ್ಮಿಕ ಸ್ಥಳವನ್ನು ಹಾನಿಗೊಳಿಸಲಾಯಿತು. ಘಟನೆಯ ಬಗ್ಗೆ ಅವರು ಯಾರೋಬ್ಬರು ದೂರು ನೀಡಿಲ್ಲ ಎಂದು ಇತರೆ ಸಮುದಾಯದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಇದು ಇಲ್ಲಿನ ಜನರ ನಡುವಿನ ಒಗ್ಗಟ್ಟನ್ನು ತೋರಿಸುತ್ತದೆ, ಆದರೆ ಕೋಪ  ಇಂತಹ ಸ್ಥಿತಿಗೆ ಕಾರಣವಾಗಿವೆ ಎಂದು ಅವರು ಹೇಳಿದರು. ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT