ಗುಡ್ಡ ಕುಸಿತ ಪ್ರಕರಣ 
ರಾಜ್ಯ

Karnataka landslide: ಮತ್ತೆ ಭೂಕುಸಿತ ಭೀತಿ; ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಉಳ್ಳುವರೆ ಗ್ರಾಮಸ್ಥರ ಒತ್ತಾಯ

ಉತ್ತರ ಕನ್ನಡ ಜಿಲ್ಲೆಯ ಶಿರೂರು ತಾಲ್ಲೂಕಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ಪ್ರಕರಣ ಸ್ಥಳೀಯ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸುವಂತಾಗಿದ್ದು, ಕೂಡಲೇ ಸುರಕ್ಷಿತ ಸ್ಥಳಕ್ಕೆ ತಮ್ಮನ್ನು ಸ್ಥಳಾಂತರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಶಿರೂರು ತಾಲ್ಲೂಕಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ಪ್ರಕರಣ ಸ್ಥಳೀಯ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸುವಂತಾಗಿದ್ದು, ಕೂಡಲೇ ಸುರಕ್ಷಿತ ಸ್ಥಳಕ್ಕೆ ತಮ್ಮನ್ನು ಸ್ಥಳಾಂತರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಮಂಗಳವಾರ ಸಂಭವಿಸಿದ ಭಾರೀ ಭೂಕುಸಿತದಿಂದ ತಮ್ಮ ಗ್ರಾಮವನ್ನು ಅವಶೇಷಗಳಾಗಿ ಪರಿವರ್ತಿಸಿದ ನಂತರ ಉಳ್ಳುವರೆ ಜನರು ಭಯದಿಂದ ಬದುಕುತ್ತಿದ್ದಾರೆ. ಈಗ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಬಯಸಿದ್ದಾರೆ. ಭೀಕರ ಗುಡ್ಡ ಕುಸಿತಕ್ಕೆ ಸಾಕ್ಷಿಯಾಗಿದ್ದ ಮಂಜುನಾಥ ಹನುಮಂತೇಗೌಡ (20) ಎಂಬುವರು ಮನೆಗೆ ಹಿಂತಿರುಗುತ್ತಿದ್ದಾಗ ಗುಡ್ಡ ಕುಸಿದು ಸಣ್ಣ ಹೋಟೆಲ್, ಕೆಲವು ವಾಹನಗಳು ಮತ್ತು ರಾಷ್ಟ್ರೀಯ ಹೆದ್ದಾರಿ 66 ರ ಭಾಗವನ್ನು ಗಂಗವಳ್ಳಿ ನದಿ ಪಾಲಾಗಿದ್ದನ್ನುನೋಡಿದ್ದಾರೆ.

ಗುಡ್ಡದ ಅವಶೇಷಗಳು ನದಿಯನ್ನು ಪ್ರವೇಶಿಸುತ್ತಿದ್ದಂತೆ, ನೀರು 40 ಅಡಿಗಳಷ್ಟು ಎತ್ತರಕ್ಕೆ ಏರಿತು. ಇದರಿಂದಾಗಿ, ಹೈ ಟೆನ್ಶನ್ ವಿದ್ಯುತ್ ಕೇಬಲ್‌ಗಳು ಸಹ ಹರಿದು ನದಿಗೆ ಬಿದ್ದವು. ದೊಡ್ಡ "ಸ್ಫೋಟ" ಕೇಳಿಸಿತು. ಗುಡ್ಡದ ಮೇಲಿನ ಮಣ್ಣು, ಬಂಡೆಗಳು ಮತ್ತು ಮರಗಳು ನದಿಯ ಇನ್ನೊಂದು ಬದಿಯ ಉಳ್ಳುವರೆ ಗ್ರಾಮದ ಕೆಲವು ಭಾಗಗಳನ್ನು ಕೊಚ್ಚಿಹೋಗಿವಂತೆ ಮಾಡಿದವು ಎಂದು ಅವರು ಹೇಳಿದರು.

ಭೂಕುಸಿತ ಸಂಭವಿಸಿದಾಗ ಅವರ ತಾಯಿ ಸಣ್ಣಿ ಹನುಮಂತೇಗೌಡ (60) ಮನೆಯಲ್ಲಿ ಒಬ್ಬರೇ ಇದ್ದರು. "ಇದೆಲ್ಲ ಕೆಲವೇ ಸೆಕೆಂಡುಗಳಲ್ಲಿ ಸಂಭವಿಸಿತು. ಹೊಸದಾಗಿ ನಿರ್ಮಿಸಲಾದ ಮಾರ್ಗ, ಕಾಲುವೆ ಮತ್ತು ಗದ್ದೆಗಳನ್ನು ಬಂಡೆಗಳು ಮತ್ತು ಮಣ್ಣು ಆವರಿಸಿದೆ. ನದಿಯಲ್ಲಿದ್ದ ಮೀನುಗಳು ಕೂಡ ದಡಕ್ಕೆ ಕೊಚ್ಚಿ ಹೋಗಿವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣೇಗೌಡ ತಿಳಿಸಿದರು. ನದಿಯಿಂದ ಏರಿದ ನೀರು ಬಿಸಿಯಾಗಿರುವುದು ನಮಗೆ ಆಶ್ಚರ್ಯವನ್ನುಂಟುಮಾಡಿದೆ. ಕೆಲವೇ ನಿಮಿಷಗಳಲ್ಲಿ ಗ್ರಾಮದಲ್ಲಿ ಸುಮಾರು 27 ಮನೆಗಳು ಕುಸಿದಿವೆ ಎಂದು ತಿಳಿಸಿದರು.

ಗ್ರಾಮಕ್ಕೆ ಸಚಿವ-ಶಾಸಕರ ಭೇಟಿ

ಸಚಿವರಾದ ಮಾಂಕಾಳ್ ವೈದ್ಯ ಮತ್ತು ಕಾರವಾರ–ಅಂಕೋಲಾ ಶಾಸಕ ಸತೀಶ್ ಸೈಲ್ ಅವರು ಶನಿವಾರ ಉಳ್ಳುವರೆ ಗ್ರಾಮಕ್ಕೆ ಭೇಟಿ ನೀಡಿದಾಗ ಸಂತ್ರಸ್ತರು ಗ್ರಾಮದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಿದರು. “ನಾವು ಇಲ್ಲಿ ವಾಸಿಸಲು ಬಯಸುವುದಿಲ್ಲ. ಗ್ರಾಮವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ. ನದಿಯಿಂದ ಏರಿದ ನೀರು ಬಿಸಿಯಾಗಿರುವುದು ನಮಗೆ ಆಶ್ಚರ್ಯವನ್ನುಂಟುಮಾಡಿದೆ. ಕೆಲವೇ ನಿಮಿಷಗಳಲ್ಲಿ ಗ್ರಾಮದಲ್ಲಿ ಸುಮಾರು 27 ಮನೆಗಳು ಕುಸಿದಿವೆ ಎಂದು ದುರ್ಗಿ ಶಿವುಗೌಡ ಅಳಲು ತೋಡಿಕೊಂಡರು.

ಮೀನುಗಾರ ನಾಗೇಶ ಈಶ್ವರ ಅಂಬಿಗ ಮಾತನಾಡಿ, ಗ್ರಾಮದಲ್ಲಿ ಸುಮಾರು 27 ಕುಟುಂಬಗಳಿವೆ. ಪ್ರತಿ ಕುಟುಂಬವು ಮೂರರಿಂದ ನಾಲ್ಕು ಮೀನುಗಾರಿಕೆ ದೋಣಿಗಳನ್ನು ಹೊಂದಿತ್ತು. ನಮ್ಮ ಎಲ್ಲಾ ದೋಣಿಗಳು, ಮೀನುಗಾರಿಕೆ ಬಲೆಗಳು ಮತ್ತು ಇತರ ಉಪಕರಣಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಅಂಕೋಲಾದಲ್ಲಿ ಭೂಕುಸಿತದ ನಂತರ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.

ಪರಿಹಾರ

ಗ್ರಾಮಸ್ಥರಿಗೆ ಸಾಂತ್ವನ ಹೇಳಿದ ಸಚಿವ ಮಾಂಕಾಳ್ ವೈದ್ಯ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 10 ಸಾವಿರ ರೂ. ಸೇರಿದಂತೆ "ನಾವಿಬ್ಬರೂ ನಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳಿಂದ ಸಂತ್ರಸ್ತ ಜನರಿಗೆ ಪರಿಹಾರವಾಗಿ 4.5 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದೇವೆ" ಎಂದು ಹೇಳಿದರು. ಅದರ ಜೊತೆಗೆ ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ರಾಜ್ಯ ಸರ್ಕಾರ ಪ್ರತಿ ಕುಟುಂಬಕ್ಕೆ 5 ಸಾವಿರ ರೂ. ದೋಣಿ ಮತ್ತು ಮೀನುಗಾರಿಕೆ ಬಲೆ ಕಳೆದುಕೊಂಡ ಮೀನುಗಾರರಿಗೆ ತಲಾ 25 ಸಾವಿರ ರೂ.ಗಳನ್ನು ನೀಡಲು ಅವಕಾಶವಿದೆ ಎಂದು ವೈದ್ಯ ಹೇಳಿದರು. ಭಾರೀ ಭೂಕುಸಿತದಿಂದ ಮನೆ ಕಳೆದುಕೊಂಡವರಿಗೆ ತಲಾ 1.5 ಲಕ್ಷ ಹಾಗೂ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT