ಸೆರೆಯಾದ ಮಕ್ನಾ ಆನೆ 
ರಾಜ್ಯ

ಮೂವರ ಬಲಿ ಪಡೆದಿದ್ದ Wild Elephant 'Makna' ಕೊನೆಗೂ ಸೆರೆ, ಕ್ಯಾಪ್ಟನ್ ಅಭಿಮನ್ಯು ಅನುಪಸ್ಥಿತಿಯಲ್ಲೂ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ!

ಸೋಮವಾರ ಬನ್ನೇರುಘಟ್ಟದ (Bannerughatta) ತಟ್ಟಗುಪ್ಪೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಮಕ್ನಾ ಕಾಡಾನೆಯನ್ನು ಸೆರೆ ಹಿಡಿದಿದೆ.

ಬೆಂಗಳೂರು: ಬನ್ನೇರುಘಟ್ಟ ಸಂರಕ್ಷಿತಾರಣ್ಯ ಪ್ರದೇಶದ ಸುತ್ತಮುತ್ತ ಮೂವರನ್ನು ಬಲಿ ಪಡೆದು ಸ್ಥಳೀಯರಿಗೆ ಸಿಂಹ್ವಸ್ವಪ್ನವಾಗಿದ್ದ ಕಾಡಾನೆ (Wild Elephant) ಮಕ್ನಾ ಅನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.

ಸೋಮವಾರ ಬನ್ನೇರುಘಟ್ಟದ (Bannerughatta) ತಟ್ಟಗುಪ್ಪೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಮಕ್ನಾ ಕಾಡಾನೆಯನ್ನು ಸೆರೆ ಹಿಡಿದಿದೆ. ಈ ಹಿಂದೆ ಇದೇ ಮಕ್ನಾ ಆನೆ ಅರಣ್ಯ ಸಿಬ್ಬಂದಿ ವಾಹನವನ್ನೇ ಹಿಂಬಾಲಿಸಿ ದಾಳಿಗೆ ಮುಂದಾಗಿತ್ತು.

ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದರು. 10 ದಿನಗಳ ಹಿಂದೆ ಇದೇ ಮಕ್ನಾ ಆನೆ ಫಾರೆಸ್ಟ್ ವಾಚರ್ ಒಬ್ಬರನ್ನು ಕೊಂದು ಹಾಕಿತ್ತು.

ಕ್ಯಾಪ್ಟನ್ ಅಭಿಮನ್ಯು ಅನುಪಸ್ಥಿತಿಯಲ್ಲೂ ಯಶಸ್ವಿ ಕಾರ್ಯಾಚರಣೆ

ಇನ್ನು ಇಂದಿನ ಆನೆ ಸೆರೆ ಕಾರ್ಯಾಚರಣೆಯಲ್ಲಿ ಕ್ಯಾಪ್ಟನ್ ಅಭಿಮನ್ಯು ಆನೆ ಗೈರಾಗಿತ್ತು. ಸಾಕಾನೆ ಭೀಮ, ಮಹೇಂದ್ರ ನೇತೃತ್ವದಲ್ಲಿ ಇಂದಿನ ಕಾರ್ಯಾಚರಣೆ ನಡೆದಿತ್ತು. ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಡ್ರೋನ್ ಮೂಲಕ ಮಕ್ನಾ ಇರುವ ಸ್ಥಳ ಗುರುತಿಸಿದ್ದರು. ನಂತರ ಮಕ್ನಾ ಆನೆಯನ್ನು ಅರಣ್ಯ ಅಧಿಕಾರಿಗಳು, ಸಾಕಾನೆಗಳು, ಮಾವುತರು ಸುತ್ತುವರೆದಿದ್ದಾರೆ. ಮಾವುತರು, ಕಾವಾಡಿಗರ ಮಾಹಿತಿ ಆಧರಿಸಿ ವೈದ್ಯರ ತಂಡ ಕೂಡ ಬಂದಿತ್ತು.

ಈ ವೇಳೆ ಪಶುವೈದ್ಯ, ಶಾರ್ಪ್​ಶೂಟರ್ ರಂಜನ್ ಅರಿವಳಿಕೆ ಚುಚ್ಚುಮದ್ದು ನೀಡಿದ್ದರು. ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಒಂದು ಕಿ.ಮೀ. ಸಾಗಿದ್ದ ಮಕ್ನಾ ಆನೆ ನಂತರ ನಿತ್ರಾಣಗೊಂಡಿತ್ತು. ಬಳಿಕ ಮಕ್ನಾ ಆನೆಯನ್ನು ಸೆರೆ ಹಿಡಿದು ಅದಕ್ಕೆ ಚಿಕಿತ್ಸೆ ನೀಡಿ ಬಳಿಕ ಆನೆಯನ್ನು ಆನೆ ಬಿಡಾರಕ್ಕೆ ರವಾನೆ ಮಾಡಲಾಯಿತು.

ಸದ್ಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆನೆ ಬಿಡಾರಕ್ಕೆ ಮಕ್ನಾ ಆನೆಯನ್ನು ಶಿಫ್ಟ್ ಮಾಡಲಾಗಿದೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT