ಕಾಂಕ್ರಿಟ್ ನ ಘನ ಸ್ಲ್ಯಾಬ್  
ರಾಜ್ಯ

ಬೆಂಗಳೂರು: ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಗುರುವಾರ ಸತತ 50 ಗಂಟೆಗಳ ಕಾಲ ಕಾಂಕ್ರೀಟ್ ಸ್ಲ್ಯಾಬ್ ಕಾಮಗಾರಿ!

ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್ ಅನ್ನು ಸಂಪೂರ್ಣ ಸಿಗ್ನಲ್ ಮುಕ್ತಗೊಳಿಸುವ ಕೆಲಸ ಬಿಎಂಆರ್ ಸಿಎಲ್ ನಿಂದ ನಡೆಯುತ್ತಿದೆ.

ಬೆಂಗಳೂರು: ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್ ಅನ್ನು ಸಂಪೂರ್ಣ ಸಿಗ್ನಲ್ ಮುಕ್ತಗೊಳಿಸುವ ಕೆಲಸ ಬಿಎಂಆರ್ ಸಿಎಲ್ ನಿಂದ ನಡೆಯುತ್ತಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್‌ನಲ್ಲಿ ಮೇಲ್ಸೇತುವೆಯ ರಾಂಪ್ ಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ನಿರಂತರವಾಗಿ 50 ಗಂಟೆಗಳ ಕಾಲ ಕಾಂಕ್ರೀಟ್ ಸುರಿದು ಸ್ಲ್ಯಾಬ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿ 2,520 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ನಿಂದ ಘನ ಸ್ಲ್ಯಾಬ್ ಮಾಡಲಾಗಿದ್ದು, ಗುರುವಾರದಿಂದ ಕಾಮಗಾರಿ ಆರಂಭವಾಗಲಿದೆ.

ಇದೇ ಮೊದಲ ಬಾರಿಗೆ ಈ ರೀತಿಯ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ, ಕಳೆದ ಎರಡು ತಿಂಗಳಿನಿಂದ, 10,100 ಕಾರ್ಮಿಕರು ರಾಂಪ್ ಸಂಬಂಧಿತ ಕೆಲಸಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಜನರಿಂದ ತುಂಬಿದ ಜಂಕ್ಷನ್ ಆಗಿರುವುದರಿಂದ ಸಂಚಾರ ಪೊಲೀಸರೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಬಿಎಂಆರ್ ಸಿಎಲ್ ಹೊರ ವರ್ತುಲ ರಸ್ತೆ ಮಾರ್ಗದ ಉಪ ಮುಖ್ಯ ಎಂಜಿನಿಯರ್ ಎನ್. ಸದಾಶಿವ TNIE ಗೆ ತಿಳಿಸಿದರು. AFCONS ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ BMRCL ಮೂಲಕ ಈ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದೆ.

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಬಿಎಂಆರ್ ಸಿಎಲ್ ನ ನ ಹಂತ-2A ಮಾರ್ಗವಾಗಿದೆ. ಇದು ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ K R ಪುರ ನಿಲ್ದಾಣಕ್ಕೆ (ಹೊರ ವರ್ತುಲ ರಸ್ತೆ ಮಾರ್ಗ) ಮತ್ತು ಹಳದಿ ರೇಖೆಯಿಂದ (R V ರಸ್ತೆಯಿಂದ ಬೊಮ್ಮಸಂದ್ರಕ್ಕೆ) ಸಾಗುತ್ತದೆ. ಸಿಎಸ್‌ಬಿ ಜಂಕ್ಷನ್‌ನಲ್ಲಿ ರಸ್ತೆ ಮೇಲ್ಸೇತುವೆ ಮತ್ತು ಐದು ಲೂಪ್‌ಗಳು ಮತ್ತು ಇಳಿಜಾರುಗಳನ್ನು 3 ಕಿಮೀ ಉದ್ದದವರೆಗೆ ಓಡುವ ಸಂಚಾರ ದಟ್ಟಣೆಯನ್ನು ನಿವಾರಿಸಲು ನಿರ್ಮಿಸಲಾಗಿದೆ.

ಎ- ರಾಂಪ್- ರಾಗಿಗುಡ್ಡದಿಂದ ಹೊಸೂರು ರಸ್ತೆ

ಸಿ-ರಾಂಪ್ => ರಾಗಿಗುಡ್ಡದಿಂದ ಕೆ ಆರ್ ಪುರಂ ಕಡೆಗೆ

ಡಿ- ರಾಂಪ್- HSR ಲೇಔಟ್‌ನಿಂದ ರಾಗಿಗುಡ್ಡ ಕಡೆಗೆ

ಬಿ-ರಾಂಪ್ => ಬಿಟಿಎಂ ಲೇಔಟ್‌ನ ನೆಲಮಟ್ಟವನ್ನು ಎ-ರಾಂಪ್‌ನ ಮೊದಲ ಹಂತದ ಫ್ಲೈಓವರ್ ರಸ್ತೆಗೆ ಸಂಪರ್ಕಿಸುತ್ತದೆ

ಇ-ರಾಂಪ್ => ಡಿ-ರಾಂಪ್‌ನ ಮೊದಲ ಹಂತದ ಫ್ಲೈಓವರ್ ರಸ್ತೆಯನ್ನು ಬಿಟಿಎಂ ಲೇಔಟ್‌ನ ನೆಲಮಟ್ಟಕ್ಕೆ ಸಂಪರ್ಕಿಸುತ್ತದೆ

"ಒಟ್ಟು 2520 ಘನ ಮೀಟರ್ ಘನ ಸ್ಲ್ಯಾಬ್ ನ್ನು ರಾಂಪ್ ನಲ್ಲಿ ಇರಿಸಲಾಗಿದೆ, ಇದು 124 ಮೀಟರ್ ಉದ್ದ ಮತ್ತು 15.1 ಮೀಟರ್ ಅಗಲವನ್ನು ಹೊಂದಿರುತ್ತದೆ. "1.8 ಮೀಟರ್ ಆಳವಿದ್ದು, 245 ಟನ್ ಉಕ್ಕು, 225 ಹೈ ಟೆನ್ಸಿಲ್ ಸ್ಟೀಲ್ ಸ್ಟ್ರಾಂಡ್‌ಗಳು ಮತ್ತು 11,074 ಹೈ ಡೆನ್ಸಿಟಿ ಪಾಲಿಥಿಲೀನ್ ಪೈಪ್‌ಗಳನ್ನು ಬಳಸಲಾಗುತ್ತಿದೆ" ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಥೂ ನಿಮ್ ಯೋಗ್ಯತೆಗೆ ಬೆಂಕಿ ಹಾಕಾ.., ಲೇ ಅರೆಸ್ಸೆಸ್ಸು.. ನಿಂಗೆ ಮಾನ ಮರ್ಯಾದೆ ಇದ್ಯಾ..': ಸದನದಲ್ಲಿ ರೊಚ್ಚಿಗೆದ್ದ ಶಿವಲಿಂಗೇ ಗೌಡ

ಚುನಾವಣೆಗೂ ಮುನ್ನ SIRಗೆ ಆತುರ ಏಕೆ?: ಸುಪ್ರೀಂ ಕೋರ್ಟ್‌ನಲ್ಲಿ ಖುದ್ದು ವಾದ ಮಂಡಿಸಿದ ಮಮತಾ; ಹೊಸ ದಾಖಲೆ

ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ

'ಟ್ರಂಪ್ ಗೆ ಯಾರ ಬಗ್ಗೆಯೂ ಕಾಳಜಿ ಇಲ್ಲ.. ಅವರಿಗೇನು ಬೇಕೋ ಅದನ್ನೇ ಮಾಡುವುದು': ಉಧ್ಯಮಿ ಮೋಹನ್ ದಾಸ್ ಪೈ

VIDEO: ಅತ್ತಿಬೆಲೆ ಬಳಿ ಭಾರೀ ರಸ್ತೆ ಕುಸಿತ; ಬೆಂಗಳೂರು-ಹೊಸೂರು ವಾಹನ ಸಂಚಾರ ಅಸ್ತವ್ಯಸ್ತ!

SCROLL FOR NEXT