ನದಿಗೆ ಹಾಕಿದ್ದ ಕಸ ತೆಗೆಯುತ್ತಿರುವ ಕುಟುಂಬಸ್ಥರು. 
ರಾಜ್ಯ

ವೆಡ್ಡಿಂಗ್ ಪಾರ್ಟಿ: ಕಾವೇರಿ ನದಿಗೆ ಕಸ ಎಸೆದವರ ವಾಪಸ್ ಕರೆಸಿ ಸ್ವಚ್ಛಗೊಳಿಸಿದ ಸ್ಥಳೀಯರು!

ಮದುವೆ ಸಮಾರಂಭದ ಬಳಿಕ ಕಸವನ್ನು ಕಾವೇರಿ ನದಿ ನೀರಿಗೆ ಎಸೆದಿದ್ದ ಕುಟುಂಬವೊಂದನ್ನು ವಾಪಸ್ ಕರೆಸಿದ ಸ್ಥಳೀಯ ನಿವಾಸಿಗಳು ಹಾಗೂ ಪರಿಸರ ಪ್ರೇಮಿಗಳು ಜಲಮೂಲವನ್ನು ಸ್ವಚ್ಛಗೊಳಿಸುವಂತೆ ಮಾಡಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.

ಮಡಿಕೇರಿ: ವೆಡ್ಡಿಂಗ್ ಪಾರ್ಟಿ ಬಳಿಕ ಕಸವನ್ನು ಕಾವೇರಿ ನದಿ ನೀರಿಗೆ ಎಸೆದಿದ್ದ ಕುಟುಂಬವೊಂದನ್ನು ವಾಪಸ್ ಕರೆಸಿದ ಸ್ಥಳೀಯ ನಿವಾಸಿಗಳು ಹಾಗೂ ಪರಿಸರ ಪ್ರೇಮಿಗಳು ಜಲಮೂಲವನ್ನು ಸ್ವಚ್ಛಗೊಳಿಸುವಂತೆ ಮಾಡಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.

ಕುಶಾಲನಗರ-ಕೊಪ್ಪ ಸೇತುವೆ ಬಳಿ ನದಿಯಲ್ಲಿ ಕಾಗದದ ರಾಶಿ ತೇಲುತ್ತಿದ್ದವು. ಇದನ್ನು ಗಮನಿಸಿದ ಕುಶಾಲನಗರದ ನಿವಾಸಿ ಬಾಗೂ ಕಾವೇರಿ ಸ್ವಚ್ಛತಾ ಆಂದೋಲನದ ಸದಸ್ಯರಾದ ಚಂದ್ರಮೋಹನ್ ಮತ್ತು ವನಿತಾ ದಂಪತಿಗಳು, ತೇಲುತ್ತಿದ್ದ ಕಾಗದವೊಂದನ್ನು ತೆಗೆದು ನೋಡಿದ್ದರು. ಕಾಗದ ಮದುವೆಯ ಆಮಂತ್ರಣ ಪತ್ರಿಕೆಯಾಗಿತ್ತು. ಸುಮಾರು 500ಕ್ಕೂ ಹೆಚ್ಚು ಕಾರ್ಡ್ ಗಳು ನದಿ ನೀರಿನಲ್ಲಿ ತೇಲುತ್ತಿದ್ದವು. ನಂತರ ಕಾರ್ಡ್ ನಲ್ಲಿದ್ದ ಮೊಬೈಲ್ ಫೋನ್ ಸಂಖ್ಯೆಯನ್ನು ಸಂಪರ್ಕಿಸಿದ್ದಾರೆ.

ನದಿಗೆ ಕಾಗದ ಎಸೆದಿದ್ದ ಕುಟುಂಬ ಖಾಸಗಿ ಬಸ್ ನಲ್ಲಿ ಬೆಂಗಳೂರಿಗೆ ತೆರಳುತ್ತಿತ್ತು. ಈ ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿರುವ ದಂಪತಿಗಳು, ಮರಳಿ ನದಿ ಬಳಿಗೆ ಬಂದು ಸ್ವಚ್ಛಗೊಳಿಸದೇ ಹೋದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ಬಳಿಕ ಸುಮಾರು 25 ಮಂದಿ ಸದಸ್ಯರು ನದಿ ಬಳಿಗೆ ಬಂದಿದ್ದು, ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ವಿತರಣೆಯಾಗದ ಮದುವೆ ಕಾರ್ಡ್ ಗಳನ್ನು ಕಾವೇರಿ ನದಿಗೆ ಎಸೆಯುವಂತೆ ಪುರೋಹಿತರು ಸೂಚಿಸಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ಘಟನೆ ಸಂಬಂಧ ಕ್ಷಮೆಯಾಚನೆ ಮಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತೆ ಕಸ ಹಾಕುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಹಿಂತಿರುಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT