ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳ: ಬಿಸಿಲಿಗೆ ಬಸವಳಿದ ಬಾನಾಡಿಗಳು, ಬಿಲದಿಂದ ಹೊರಬರುತ್ತಿರುವ ಹಾವುಗಳು!

Manjula VN

ಬೆಂಗಳೂರು: ನಗರದಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ಮನುಷ್ಯರು ಸೇರಿ ಪ್ರಾಣಿ-ಪಕ್ಷಿಗಳೂ ನೀರಿಗಾಗಿ ಪರದಾಡುವಂತಾಗಿದೆ. ವಿಪರೀತ ಸೆಕೆಯಿಂದ ಮನುಷ್ಯರು ಫ್ಯಾನು, ಏಸಿಗಳ ಮೊರೆ ಹೋಗುತ್ತಿದ್ದು, ಪ್ರಾಣಿಗಳು ತಂಪಾದ ಜಾಗವನ್ನು ಹುಡುಕಿಕೊಂಡು ಹೊರ ಬರುತ್ತಿವೆ. ಬಿಸಿಲ ದಗೆ ತಾಳಲಾರದೆ ಹಾವುಗಳು ಬಿಲಗಳಿಂದ ಹೊರಬರುತ್ತಿದ್ದು, ಈ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ.

ಬಿಬಿಎಂಪಿ ವನ್ಯಜೀವಿ ವಾರ್ಡನ್ ಪ್ರಸನ್ನಕುಮಾರ್ ಮಾತನಾಡಿ, ಈ ಬಾರಿಯ ಬೇಸಿಗೆಯಲ್ಲಿ ಸಹಾಯವಣಿ ಸಂಖ್ಯೆಗೆ ಹೆಚ್ಚಿನ ಕರೆಗಳು ಬರುತ್ತಿರುವೆ ರಕ್ಷಣಾ ಕಾರ್ಯಗಳ ಸಂಖ್ಯೆಯಲ್ಲಿಯೂ ಹೆಚ್ಚಳಗಳು ಕಂಡು ಬಂದಿವೆ. ಇಲಾಖೆಗೆ ಪ್ರತಿದಿನ ಕನಿಷ್ಠ 100 ಕರೆಗಳು ಬರುತ್ತಿವೆ, ಕಳೆದ ಎರಡು ವಾರಗಳ ಹಿಂದೆ 45 ಕರೆಗಳು ಬರುತ್ತಿತ್ತು. ಆದರೀಗ ಈ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಆಗಸದಲ್ಲಿ ಹಾರಾಡುವ ಪಕ್ಷಿಗಳು ನಿರ್ಜಲೀಕರಣದಿಂದಾಗಿ ಕೆಳಗೆ ಬೀಳುತ್ತಿವೆ. ಮೈನಾ, ಕಾಗೆಯಂತಹ ಪಕ್ಷಗಳು ಕೆಳಗೆ ಬೀಳುತ್ತಿವೆ. ಕೆಳಗೆ ಬಿದ್ದ ಪಕ್ಷಿಗಳ ರಕ್ಷಣ ಮಾಡುವಂತೆ ಆರ್ ಆರ್ ನಗರ ವಲಯ, ಯಲಹಂಕ ಮತ್ತು ದಾಸರಹಳ್ಳಿ ವಲಯದಿಂದ ಹೆಚ್ಚಿನ ಕರೆಗಳು ಬರುತ್ತಿವೆ. ಉದ್ಯಾನವನಗಳು ಹಾಗೂ ಅಡುಗೆ ಮನೆಗಳಲ್ಲಿ ಹಾವು ಕಾಣಿಸಿಕೊಳ್ಳುತ್ತಿರುವ ಕುರಿತು ಕರೆಗಳು ಬರುತ್ತಿವೆ.

ಬಿಸಿಲು ಹೆಚ್ಚಾದ ಹಿನ್ನೆಲೆಯಲ್ಲಿ ತಂಪಾದ ಜಾಗಗಳನ್ನು ಹುಡುಕಿಕೊಂಡು ಹಾವುಗಳು ಬಿಲಗಳಿಂದ ಹೊರ ಬರುತ್ತಿವೆ. ಇದರಲ್ಲಿ ಭಯಪಡುವ ಅಗತ್ಯವಿಲ್ಲ. ಈ ಹಾವುಗಳನ್ನು ತಾವೇ ನಿಭಾಯಿಸುವ ಬದಲು ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಜನರು ಕರೆ ಮಾಡಬೇಕೆಂದು ಸಲಹೆ ನೀಡಿದ್ದಾರೆ.

ಪೀಪಲ್ ಫಾರ್ ಅನಿಮಲ್ (ಪಿಎಫ್‌ಎ) ಜನರಲ್ ಮ್ಯಾನೇಜರ್ ಕರ್ನಲ್ ನವಾಜ್ ಷರೀಫ್ ಅವರು ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.20ರಷ್ಟು ಹೆಚ್ಚು ದೂರವಾಣಿ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ.

SCROLL FOR NEXT