ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ರಾಜ್ಯ

ಕೊಡಗಿನಲ್ಲಿ ರಾಮನವಮಿ ಆಚರಣೆ: ರಾಜಕೀಯೇತರ ಸಾರ್ವಜನಿಕ ಭಾಷಣಕ್ಕೆ ಹೈಕೋರ್ಟ್ ಅನುಮತಿ

Srinivasamurthy VN

ಮಡಿಕೇರಿ: ಕೊಡಗು ಹಿಂದೂ ಜಾಗರಣ ವೇದಿಕೆಯಿಂದ ರಾಮನವಮಿ ಆಚರಣೆ ವೇಳೆ ಸಾರ್ವಜನಿಕ ಭಾಷಣ ಮಾಡುವುದನ್ನು ನಿಷೇಧಿಸಿದ್ದ ಚುನಾವಣಾ ಆಯೋಗದ ಆದೇಶಕ್ಕೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಚುನಾವಣಾ ಆಯೋಗದ ಆದೇಶದ ವಿರುದ್ಧ ಕೊಡಗು ಹಿಂದೂ ಜಾಗರಣ ವೇದಿಕೆಯಿಂದ ರಿಟ್ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ರಾಮನವಮಿ ಆಚರಣೆ ವೇಳೆ ರಾಜಕೀಯೇತರ ಸಾರ್ವಜನಿಕ ಭಾಷಣಕ್ಕೆ ಅನುಮತಿ ನೀಡಿದೆ. ಆ ಮೂಲಕ ಕೊಡಗಿನ ಮಾದಾಪುರದಲ್ಲಿ ನಡೆಯುವ ಆಚರಣೆಯಲ್ಲಿ ಸಾರ್ವಜನಿಕ ಭಾಷಣ ಮಾಡಲು ಅರ್ಜಿದಾರರು ಅನುಮತಿ ಪಡೆದಿದ್ದಾರೆ.

ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ವೇದಿಕೆಯು ಈ ಹಿಂದೆ ಉತ್ಸವವನ್ನು ಆಯೋಜಿಸಲು ಚುನಾವಣಾ ಆಯೋಗದಿಂದ ಅನುಮತಿ ಕೋರಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಅನ್ವಯ ಮೈಸೂರು-ಕೊಡಗು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಬ್ಬದ ಆಚರಣೆಗೆ ಹಲವು ನಿರ್ಬಂಧಗಳನ್ನು ವಿಧಿಸಿದ್ದಾರೆ. ಇತರ ನಿರ್ಬಂಧಗಳ ಜೊತೆಗೆ, ಉತ್ಸವ ಆಚರಣೆಯ ಸಮಯದಲ್ಲಿ ಭಾಷಣಗಳ ಮೂಲಕ ಭಕ್ತರ ಸಾರ್ವಜನಿಕ ಭಾಷಣವನ್ನು ಆಯೋಜಿಸುವುದನ್ನು ಆಯೋಗವು ನಿಷೇಧಿಸಿತ್ತು.

ಆದಾಗ್ಯೂ, ನಿಷೇಧದ ವಿರುದ್ಧ HJV (Hindu Jagarana Vedike) ಸದಸ್ಯ ಸುನಿಲ್ ಅವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಹೈಕೋರ್ಟ್ ಕೆಲವು ನಿಷೇಧಗಳನ್ನು ವಿಧಿಸಿದ್ದರೂ, ಹಬ್ಬದ ಸಂದರ್ಭದಲ್ಲಿ ರಾಜಕೀಯೇತರ ಸಾರ್ವಜನಿಕ ಭಾಷಣಕ್ಕೆ ಅನುಮತಿ ನೀಡಿದೆ. ಅಂತೆಯೇ, ಇಂದು ಹಬ್ಬದ ವೈಭವದ ಆಚರಣೆಯ ಜೊತೆಗೆ, ಬೆಂಗಳೂರಿನ ಹಿಂದೂ ಕಾರ್ಯಕರ್ತೆ ಹರಿಕಾ ಮಂಜುನಾಥ್ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

“ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಭಾಷಣಕ್ಕೆ ಅವಕಾಶ ನೀಡಬಾರದು ಎಂಬ ಆದೇಶದ ಮೂಲಕ ಚುನಾವಣಾ ಆಯೋಗವು ಸಂವಿಧಾನ ನೀಡಿರುವ ಧರ್ಮದ ಹಕ್ಕನ್ನು ಕಸಿದುಕೊಂಡಿದೆ. ಈ ಕ್ರಮವನ್ನು ಪ್ರಶ್ನಿಸಿ ನಾವು ಹೈಕೋರ್ಟ್‌ ಮೆಟ್ಟಿಲೇರಿದ್ದೇವೆ. ಈಗ ಕಾರ್ಯಕ್ರಮದಲ್ಲಿ ರಾಜಕೀಯೇತರ ಭಾಷಣಕ್ಕೆ ಅವಕಾಶ ನೀಡಲಾಗಿದೆ’ ಎಂದು ಸುನೀಲ್ ಖಚಿತಪಡಿಸಿದರು.

SCROLL FOR NEXT