ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 
ರಾಜ್ಯ

ಪ್ರತಿಕೂಲ ಹವಾಮಾನ: ಬೆಂಗಳೂರು ತಲುಪಬೇಕಾಗಿದ್ದ 11 ವಿಮಾನಗಳು ಚೆನ್ನೈಗೆ Divert

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಡುಗು, ಮೋಡ, ಕ್ರಾಸ್‌ವಿಂಡ್‌ಉಂಟಾದ ಪರಿಣಾಮ ಬೆಂಗಳೂರಿಗೆ ಬರಬೇಕಾಗಿದ್ದ 11 ವಿಮಾನಗಳು ಭಾನುವಾರ ರಾತ್ರಿ ಚೆನ್ನೈಗೆ ತಲುಪಿವೆ.

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಡುಗು, ಮೋಡ, ಕ್ರಾಸ್‌ವಿಂಡ್‌ಉಂಟಾದ ಪರಿಣಾಮ ಬೆಂಗಳೂರಿಗೆ ಬರಬೇಕಾಗಿದ್ದ 11 ವಿಮಾನಗಳು ಭಾನುವಾರ ರಾತ್ರಿ ಚೆನ್ನೈಗೆ ತಲುಪಿವೆ. ಅವುಗಳಲ್ಲಿ ನಾಲ್ಕು ಅಂತರಾಷ್ಟ್ರೀಯ ವಿಮಾನಗಳಾಗಿವೆ.

ವಿಮಾನ ನಿಲ್ದಾಣದಲ್ಲಿ ಗುಡುಗು ಸಹಿತ ಮೋಡಗಳಿಂದಾಗಿ ಏರ್ ಟ್ರಾಫಿಕ್ ನಿಯಂತ್ರಣದ ಮೇಲೆ ಪರಿಣಾಮ ಉಂಟುಮಾಡಿದವು. ಇದರಿಂದಾಗಿ ಕ್ರಾಸ್ ವಿಂಡ್ ಉಂಟಾಯಿತು. ಇದು ಗಂಟೆಗೆ 20 ರಿಂದ 25 ಕಿ.ಮೀ ವೇಗ ಹೊಂದಿತ್ತು. ಉತ್ತರ ಮತ್ತು ದಕ್ಷಿಣದ ಎರಡೂ ರನ್‌ವೇಗಳು ಏರ್ ಟ್ರಾಫಿಕ್ ಕಂಟ್ರೋಲ್ ಸಮೀಪದಲ್ಲಿವೆ, ಆ ಅವಧಿಯಲ್ಲಿ ಟೈಲ್‌ವಿಂಡ್‌ಗಳ ಕಾರಣದಿಂದಾಗಿ ವಿಮಾನಗಳು ಇಳಿಯುವುದು ಅಥವಾ ಟೇಕ್ ಆಫ್ ಮಾಡುವುದು ಖಂಡಿತವಾಗಿಯೂ ಸುರಕ್ಷಿತವಲ್ಲ ಎಂದು ಏರೋಡ್ರಮ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಭಾರೀ ಹವಾಮಾನ ಮತ್ತು ಮಿಂಚಿನ ಕಾರಣದಿಂದ ರಾತ್ರಿ 11.18 ರಿಂದ 11.54 ರವರೆಗೆ ಲ್ಯಾಂಡಿಂಗ್ ನಿಲ್ಲಿಸಲಾಗಿತ್ತು. ಪ್ರತಿಕೂಲ ಹವಾಮಾನ 11 ವಿಮಾನಗಳ ಮೇಲೆ ಪರಿಣಾಮ ಬೀರಿತು. ಅವುಗಳಲ್ಲಿ ನಾಲ್ಕು ಅಂತರರಾಷ್ಟ್ರೀಯ ವಿಮಾನಗಳಾಗಿವೆ ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ವಕ್ತಾರರು ತಿಳಿಸಿದ್ದಾರೆ. ಮಾರ್ಗ ಬದಲಾವಣೆಯಿಂದಾಗಿ ವಿಮಾನಗಳು ತಮ್ಮ ಗಮ್ಯಸ್ಥಾನ ತಲುಪುವಲ್ಲಿ ಎರಡೂವರೆ ಗಂಟೆಯಿಂದ ಮೂರೂವರೆ ಗಂಟೆಗಳ ವಿಳಂಬವಾಯಿತು. ಬ್ಯಾಂಕಾಕ್‌ನಿಂದ ಥಾಯ್ ವಿಮಾನ (TG 325), ಬ್ಯಾಂಕಾಕ್‌ನಿಂದ ಥಾಯ್ ಲಯನ್ ಏರ್ (SL 216) ಪ್ಯಾರಿಸ್‌ನಿಂದ ಏರ್ ಫ್ರಾನ್ಸ್ (AF 194) ಮತ್ತು ಆಮ್‌ಸ್ಟರ್‌ಡ್ಯಾಮ್‌ನಿಂದ KLM ವಿಮಾನ (KL 879) ಗಳು ಸೇರಿವೆ.

ಮುಂಬೈ (AI 585) ಮತ್ತು ದೆಹಲಿ (AI 512), ಗೋವಾದಿಂದ ಆಕಾಶ ಏರ್ ವಿಮಾನಗಳು (QP 1397) ಮತ್ತು ಮುಂಬೈ (QP 1341) ನಿಂದ ಏರ್ ಇಂಡಿಯಾ ವಿಮಾನಗಳು ಚೆನ್ನೈಗೆ ಮಾರ್ಗ ಬದಾಲವಣೆ ಮಾಡಿದ ದೇಶೀಯ ವಿಮಾನಗಳಾಗಿವೆ.

ದೆಹಲಿಯಿಂದ ವಿಸ್ತಾರಾ ವಿಮಾನ (ಯುಕೆ 807), ಗೋವಾದಿಂದ ಏರ್ ಅಲಯನ್ಸ್ ವಿಮಾನ (91 548) ಮತ್ತು ಏರ್ ಏಷ್ಯಾ ಇಂಡಿಯಾ ವಿಮಾನವು ಗುವಾಹಟಿಯಿಂದ (I5 821) ಹೊರಟು ಚೆನ್ನೈನಲ್ಲಿ ನಿಲುಗಡೆಯ ನಂತರ ಬೆಂಗಳೂರಿಗೆ ಬರಬೇಕಿತ್ತು. ಈ ಏರ್ ಏಷ್ಯಾ ವಿಮಾನವು ಗುವಾಹಟಿಯಿಂದ ಸಂಜೆ 6.25 ಕ್ಕೆ ಹೊರಟು ರಾತ್ರಿ 9.25 ಕ್ಕೆ ಚೆನ್ನೈ ತಲುಪಿತು. ಇದು ನಿಗದಿತ ಸಮಯಕ್ಕೆ ರಾತ್ರಿ 10.05ಕ್ಕೆ ಚೆನ್ನೈನಿಂದ ಹೊರಟು ರಾತ್ರಿ 11 ಗಂಟೆಗೆ ಬೆಂಗಳೂರು ತಲುಪಬೇಕಿತ್ತು.

ಆದಾಗ್ಯೂ, KIA ಯಲ್ಲಿನ ಹವಾಮಾನದ ಕಾರಣದಿಂದ ಅದನ್ನು ಚೆನ್ನೈಗೆ ಹಿಂತಿರುಗಿಸಲಾಯಿತು ಮತ್ತು ಅಂತಿಮವಾಗಿ 3 ಗಂಟೆ ಮತ್ತು 27 ನಿಮಿಷಗಳ ತಡವಾಗಿ ಸೋಮವಾರ ಬೆಳಗಿನ ಜಾವ 2.27 ಕ್ಕೆ ಬೆಂಗಳೂರು ತಲುಪಿತು, ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್‌ಗಳು ವಿಷಯವನ್ನು ಬಹಿರಂಗಪಡಿಸಿತು.

ಪ್ರತಿಕೂಲ ಹವಾಮಾನದಿಂದಾಗಿ ಶುಕ್ರವಾರ (ಮೇ 10) ಸಹ ಒಟ್ಟು 17 ವಿಮಾನಗಳ ಮಾರ್ಗವನ್ನು ಬದಲಾಯಿಸಬೇಕಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT