ವಿಭೂತಿಪುರ ಕೆರೆ ಈಗ ಕೊಳಚೆ ಗುಂಡಿಯಂತಾಗಿದೆ 
ರಾಜ್ಯ

ಕಳಪೆ ಚರಂಡಿ ನಿರ್ವಹಣೆ: ವಿಭೂತಿಪುರ ಕೆರೆಗೆ ಕೊಳಚೆ ನೀರು, ಕಸ ಹರಿವು

ಕೊಳಚೆ ನೀರು ಸಂಸ್ಕರಣಾ ಘಟಕದಿಂದ ಸಂಸ್ಕರಿತ ನೀರು ಪಡೆಯಬೇಕಿದ್ದ ಯು ಒಳಹರಿವಿಗೆ ಸಂಪರ್ಕ ಕಲ್ಪಿಸುವ ಮಳೆನೀರು ಚರಂಡಿ (ರಾಜ ಕಾಲುವೆ) ಸರಿಯಾಗಿ ನಿರ್ವಹಣೆಯಾಗದ ಕಾರಣ ಕಸ ಮತ್ತು ಕೊಚ್ಚೆಯಿಂದ ತುಂಬಿಕೊಂಡಿದೆ.ಹೂಳು ತೆಗೆಯುವಲ್ಲಿ ಬಿಬಿಎಂಪಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಬೆಂಗಳೂರು: ಕೊಳಚೆ ನೀರು ಸಂಸ್ಕರಣಾ ಘಟಕದಿಂದ ಸಂಸ್ಕರಿತ ನೀರು ಪಡೆಯಬೇಕಿದ್ದ ವಿಭೂತಿಪುರ ಕೆರೆಯು ಒಳಹರಿವಿಗೆ ಸಂಪರ್ಕ ಕಲ್ಪಿಸುವ ಮಳೆನೀರು ಚರಂಡಿ (ರಾಜ ಕಾಲುವೆ) ಸರಿಯಾಗಿ ನಿರ್ವಹಣೆಯಾಗದ ಕಾರಣ ಕಸ ಮತ್ತು ಕೊಚ್ಚೆಯಿಂದ ತುಂಬಿಕೊಂಡಿದೆ.ಹೂಳು ತೆಗೆಯುವಲ್ಲಿ ಬಿಬಿಎಂಪಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಇತ್ತೀಚೆಗಷ್ಟೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಾರ್ಯಪಾಲಕ ಎಂಜಿನಿಯರ್ ಭೂಪ್ರದಾ ಅವರು ಮೇ ಮೊದಲ ವಾರ ವಿಭೂತಿಪುರ ಕೆರೆಯ 1.5 ಎಕರೆ ಜೌಗು ಪ್ರದೇಶವನ್ನು ಹೂಳು ತೆಗೆಯಲಾಗಿದ್ದು, 1.5 ಎಂಎಲ್‌ಡಿ ಕೊಳಚೆ ನೀರು ಸಂಸ್ಕರಣಾ ಘಟಕದಿಂದ (STP) ಸಂಸ್ಕರಿಸಿದ ನೀರನ್ನು ಮೊದಲು ಕೆರೆಗೆ ಬಿಡಲಾಗುವುದು ಎಂದು ಹೇಳಿದ್ದರು.

ಕೆರೆಯನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸುವ ಯೋಜನೆಯನ್ನು ಹೊಂದಿದ್ದರು ಆದರೆ ಇದು ಮಳೆನೀರಿನ ಚರಂಡಿಗಳಿಂದ ಹರಿಯುವ ಕೊಳಚೆಯಿಂದ ತುಂಬಿಹೋಗಿತ್ತು. ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ಕೆರೆಯಲ್ಲಿ ಪ್ಲಾಸ್ಟಿಕ್‌ ವಸ್ತುಗಳು ಸೇರಿ ಕಸ ತುಂಬಿತ್ತು.

ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತ ಆರ್.ಪ್ರತಿಭಾ, ಪೊಲೀಸರು ಪರಿಸ್ಥಿತಿಯನ್ನು ಅರಿತುಕೊಂಡು ಮಳೆನೀರು ಚರಂಡಿಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದರು.

ಬಿಬಿಎಂಪಿಯು ಬುಧವಾರದಿಂದ 15 ದಿನಗಳ ಪ್ಲಾಸ್ಟಿಕ್ ಅಭಿಯಾನ ಪ್ರಾರಂಭಿಸಿದೆ. ಎಂಟು ವಲಯಗಳಲ್ಲಿ ಅಧಿಕಾರಿಗಳು ಮತ್ತು ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ತಯಾರಿಸುವ/ಮಾರಾಟ ಮಾಡುವ ಘಟಕಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲು ಅಧಿಕಾರಿಗಳಿಗೆ ಆದೇಶ ನೀಡಲಾಯಿತು ಎಂದು ಪ್ರತಿಭಾ ಹೇಳಿದರು, ನಿಷೇಧಿತ ಪ್ಲಾಸ್ಟಿಕ್ ಮತ್ತು ಇತರ ವಸ್ತುಗಳನ್ನು ಬಳಸದಂತೆ ಮತ್ತು ಕಸ ಹಾಕದಂತೆ ಪಾಲಿಕೆಯು ಮಾಹಿತಿ ಮತ್ತು ಸಂವಹನ ಅಭಿಯಾನವನ್ನು ತೀವ್ರಗೊಳಿಸುತ್ತದೆ ಎಂದು ಹೇಳಿದರು.

ಕಸ ನಿರ್ವಹಣೆಯ ವಿಷಯದಲ್ಲಿ ಬೆಂಗಳೂರು ಎಂದಿಗೂ ಶೇಕಡಾ 100ರಷ್ಟು ಮನೆ-ಮನೆಗೆ ಸಂಗ್ರಹಣೆಯನ್ನು ತಲುಪಲು ಸಾಧ್ಯವಿಲ್ಲ, ಏಕೆಂದರೆ ಪಾಲಿಕೆಯು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಜನರು ಬೀದಿ ಮೂಲೆಗಳಲ್ಲಿ ತ್ಯಾಜ್ಯವನ್ನು ಎಸೆಯುವಂತಾಗಿದೆ. ಇದು ಚರಂಡಿಗಳ ಮುಚ್ಚುವಿಕೆಗೆ ಕಾರಣವಾಗುತ್ತದೆ, ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತವೆ ಎಂದು ಬೆಂಗಳೂರಿನ ಪರಿಸರವಾಗಿ ರಾಮ್ ಪ್ರಸಾದ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT