ಯುವತಿಯ ನಿಂದಿಸಿದ ಆಟೋ ಚಾಲಕ  ಚಿತ್ರ; nannade_kannada
ರಾಜ್ಯ

Video: 'ಸಿಲ್ಕ್ ಬೋರ್ಡ್ ಪಕ್ದಲ್ಲಿ ಇದ್ಯಾ ನಿಮ್*****'; ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಟೋ ಚಾಲಕ!

ನಗರದಲ್ಲಿ ಆಗಿಂದಾಗ್ಗೆ ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಕಿರಿಕ್ ನಡೆಯುತ್ತಿರುತ್ತದೆ. ಈ ಪಟ್ಟಿಗೆ ಇದೀಗ ಮತ್ತೊಂದು ಪ್ರಕರಣ ಹೊಸ ಸೇರ್ಪಡೆಯಾಗಿದ್ದು, ಆಟೋ ಚಾಲಕನೋರ್ವ ಯುವತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ವರದಿಯಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಿದಂತೆಯೇ ರೋಡ್ ರೇಜ್ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿದ್ದು, ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಟೋ ಚಾಲಕನ ವಿಡಿಯೋ ವೈರಲ್ ಆಗುತ್ತಿದೆ.

ಹೌದು.. ನಗರದಲ್ಲಿ ಆಗಿಂದಾಗ್ಗೆ ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಕಿರಿಕ್ ನಡೆಯುತ್ತಿರುತ್ತದೆ. ಈ ಪಟ್ಟಿಗೆ ಇದೀಗ ಮತ್ತೊಂದು ಪ್ರಕರಣ ಹೊಸ ಸೇರ್ಪಡೆಯಾಗಿದ್ದು, ಆಟೋ ಚಾಲಕನೋರ್ವ ಯುವತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ವರದಿಯಾಗಿದೆ.

ಏನಿದು ಘಟನೆ?

ಯುವತಿಯೊಬ್ಬಳು ಸಿಲ್ಕ್ ಬೋರ್ಡ್ ಪ್ರಯಾಣಿಸಲು ಆಟೋ ಚಾಲಕನೊಬ್ಬನನ್ನು ವಿಚಾರಿಸಿದ್ದು, ಈ ವೇಳೆ ಆತ ದುಬಾರಿ ಹಣ ಕೇಳಿದ್ದಾನೆ. ಇದಕ್ಕೆ ಯುವತಿ ಹೆಚ್ಚಿನ ಬಾಡಿಗೆ ಕೊಡುವುದಿಲ್ಲ ಎಂದು ಹೇಳಿದ್ದು, ಈ ವೇಳೆ ಚಾಲಕ ಯುವತಿಯೊಂದಿಗೆ ಜಗಳಕ್ಕೇ ಇಳಿದಿದ್ದಾನೆ.

ಮಹಿಳಾ ಪ್ರಯಾಣಿಕರೊಬ್ಬರು ಆಟೋ ಹತ್ತುವಾಗಲೇ ಚಾಲಕ ಹೆಚ್ಚಿನ ಹಣ ಕೇಳಿದ್ದಾನೆ. ಆಕೆ 150 ರೂ. ಕೊಡುವುದಾಗಿ ಹೇಳಿದಾಗ ಕೋಪಗೊಂಡ ಚಾಲಕ ಆಕೆ ಮೇಲೆ ರೇಗಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಸಿಲ್ಕ್ ಬೋರ್ಡ್‌ ಇಲ್ಲೇ ಪಕ್ಕದಲ್ಲಿ ಇದ್ಯಾ ಎಂದು ಆಕ್ರೋಶಭರಿತನಾಗಿ ಹೇಳಿದ್ದಾನೆ. ಅಲ್ಲದೆ ಹಣ ಕೊಡೋ ಯೋಗ್ಯತೆ ಇಲ್ಲ ಎಂದು ಛೇಡಿಸಿದ್ದಾನೆ.

ಆಟೋ ಚಾಲಕನ ವರ್ತನೆಯನ್ನು ಯುವತಿ ವಿಡಿಯೋ ಮಾಡಿಕೊಂಡು ನಗರ ಪೊಲೀಸರಿಗೆ ಎಕ್ಸ್ ಖಾತೆಯಲ್ಲಿ ಟ್ಯಾಗ್‌ ಮಾಡಿ ಪೋಸ್ಟ್‌ ಮಾಡಿದ್ದಾರೆ. ನಗರ ಪೊಲೀಸರು ಯುವತಿ ಹಾಕಿರುವ ಪೋಸ್ಟ್‌ ಗಮನಿಸಿ ಘಟನೆ ನಡೆದ ಸ್ಥಳದ ಬಗ್ಗೆ ನಿಖರ ಮಾಹಿತಿ ನೀಡುವಂತೆ ಕೇಳಿದ್ದಾರೆ.

ಈ ಹಿಂದೆ ಅಂದರೆ ಸೆಪ್ಟೆಂಬರ್ 2ರಂದು ಇದೇ ರೀತಿಯ ಘಟನೆ ವರದಿಯಾಗಿತ್ತು. ಮಾಗಡಿ ರಸ್ತೆ ಪೋಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಆಟೋ ಬುಕಿಂಗ್‌ ಕ್ಯಾನ್ಸಲ್‌ ಮಾಡಿದ್ದಕ್ಕೆ ಆಟೋ ಚಾಲಕ ಯುವತಿಗೆ ನಿಂದಿಸಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಅದೇ ರೀತಿಯ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ. ಈ ರೀತಿ ವರ್ತಿಸಿದರೆ ಮಹಿಳಾ ಪ್ರಯಾಣಿಕರು ಆಟೋಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುವುದರಲ್ಲಿ ಸಂಶಯವಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

9 ಸಾವಿರ ಟ್ರಾಫಿಕ್ ದಂಡ ಬಾಕಿ, ಇನ್ಶುರೆನ್ಸ್ ಕೂಡ ಇಲ್ಲ!

ಇನ್ನು ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆಟೋ ನಂಬರ್ KA 05 AL 9980 ಆಗಿದ್ದು, ಚಾಲಕನ ಹೆಸರು ಸಂತೋಷ್ ಕುಮಾರ್ ಎಸ್ ಎಂದು ನಮೂದಾಗಿದೆ. ಈ ಆಟೋ ಮೇಲೆ ಬರೊಬ್ಬರಿ 9 ಸಾವಿರ ರೂ ಟ್ರಾಫಿಕ್ ದಂಡ ಬಾಕಿ ಉಳಿದಿದೆ ಎನ್ನಲಾಗಿದೆ. ಮಾತ್ರವಲ್ಲದೇ ಆಟೋ ವಿಮೆ ಕೂಡ ಎಕ್ಸ್ ಪೈರಿ ಯಾಗಿದೆ ಎಂದು ಹೇಳಲಾಗಿದೆ. ಈ ಕುರಿತ ಪೋಸ್ಟ್ ಗಳನ್ನೂ ಕೂಡ ನೆಟ್ಟಿಗರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಮಮತಾಗೆ ಬಿಗ್ ಶಾಕ್; TMC ವಿಭಜನೆ? ತೃಣಮೂಲ ಕಾಂಗ್ರೆಸ್ ನ 50 ಶಾಸಕರು, 20 ಸಂಸದರು ಬಿಜೆಪಿ ಸೇರ್ಪಡೆ?

ಗ್ಯಾಂಗ್ ರೇಪ್ ಪ್ರಕರಣ: ವಿವಾದಿತ ದೇವಮಾನವ Asaram Bapu ಖುಲಾಸೆ

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SCROLL FOR NEXT