ಸಾಂದರ್ಭಿಕ ಚಿತ್ರ 
ರಾಜ್ಯ

ಪಾನಮತ್ತರಾಗಿ ಶಾಲಾ ಮಕ್ಕಳ ವಾಹನ ಚಾಲನೆ: 9 ತಿಂಗಳಲ್ಲಿ 108 ಕೇಸು ದಾಖಲು

ಇದುವರೆಗೆ ಪಾನಮತ್ತರಾಗಿ ಶಾಲಾ ವಾಹನಗಳನ್ನು ಚಲಾಯಿಸಿದ ಪ್ರಕರಣಗಳಲ್ಲಿ ಸಂಚಾರ ಪೊಲೀಸರು 1,36,000 ರೂಪಾಯಿ ದಂಡ ವಿಧಿಸಿದ್ದಾರೆ.

ಬೆಂಗಳೂರು: ಕಳೆದ ಒಂಭತ್ತು ತಿಂಗಳ ಅವಧಿಯಲ್ಲಿ ಶಾಲಾ ಬಸ್ ಚಾಲಕರು ಪಾನಮತ್ತರಾಗಿ ವಾಹನ ಚಲಾಯಿಸಿದ 108 ಪ್ರಕರಣಗಳು ಮತ್ತು ಸಾಮರ್ಥ್ಯಕ್ಕಿಂತ ಅಧಿಕ ಮಕ್ಕಳನ್ನು ಕರೆದೊಯ್ಯುವ ಶಾಲಾ ಬಸ್‌ಗಳ ಸುಮಾರು 679 ಪ್ರಕರಣಗಳನ್ನು ಬೆಂಗಳೂರು ಸಂಚಾರ ಪೊಲೀಸರು (BTP) ದಾಖಲಿಸಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡಿದ ಸಂಚಾರ ಪೊಲೀಸ್ ಅಧಿಕಾರಿಗಳು, ನಿರಂತರ ಜಾರಿ ಅಭಿಯಾನಗಳ ಹೊರತಾಗಿಯೂ, ಶಾಲೆಗಳು ಆರಂಭವಾಗುವ ಮೊದಲು ಚಾಲಕರ ಸ್ಥಿತಿಯನ್ನು ಪರಿಶೀಲಿಸುತ್ತಿಲ್ಲ, ಇದು ಮಕ್ಕಳ ಜೀವವನ್ನು ಗಂಭೀರ ಅಪಾಯಕ್ಕೆ ತಳ್ಳುತ್ತದೆ. ಇದುವರೆಗೆ ಪಾನಮತ್ತರಾಗಿ ಶಾಲಾ ವಾಹನಗಳನ್ನು ಚಲಾಯಿಸಿದ ಪ್ರಕರಣಗಳಲ್ಲಿ ಸಂಚಾರ ಪೊಲೀಸರು 1,36,000 ರೂಪಾಯಿ ದಂಡ ವಿಧಿಸಿದ್ದಾರೆ.

ಸಂಚಾರ ಪೊಲೀಸ್ ವಿಭಾಗದ ಉಪ ಕಮಿಷನರ್ (ಪೂರ್ವ ವಿಭಾಗ) ಕುಲದೀಪ್ ಕುಮಾರ್ ಜೈನ್, ಇಲ್ಲಿಯವರೆಗೆ ಯಾವುದೇ ಅಭಿಯಾನ ನಡೆಸಿದಾಗ, ಚಾಲಕರನ್ನು ಪ್ರತಿಬಾರಿ ತಪಾಸಣೆ ನಡೆಸಿದಾಗ ಎಲ್ಲಾ ಚಾಲಕರು ಪ್ರತಿ ತಪಾಸಣೆಯಲ್ಲೂ ಸಮಚಿತ್ತದಿಂದ ವರ್ತಿಸಿದ ಪ್ರಕರಣಗಳಿಲ್ಲ. 15-20 ಚಾಲಕರು ಮದ್ಯಪಾನ ಮಾಡಿರುತ್ತಾರೆ. ಈ ಬಗ್ಗೆ ಶಾಲೆಗಳನ್ನು ಪ್ರಶ್ನಿಸಿದಾಗ, ಚಾಲಕರು ಹಿಂದಿನ ರಾತ್ರಿ ಮದ್ಯಪಾನ ಮಾಡಿದ್ದಾರೆ ಎಂದು ಅವರ ಆಡಳಿತ ಮಂಡಳಿಗಳು ಹೇಳುತ್ತವೆ, ಆದರೆ ಉಸಿರಾಟದ ಪರೀಕ್ಷೆಗಳಲ್ಲಿ ಮಿತಿಗಿಂತ 4-5 ಪಟ್ಟು ಹೆಚ್ಚು ಆಲ್ಕೋಹಾಲ್ ಮಟ್ಟವನ್ನು ಬಹಿರಂಗಪಡಿಸುತ್ತವೆ ಎಂದು ಹೇಳಿದರು.

ಸಂಚಾರಿ ಪೊಲೀಸರು 21 ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಕಾರಣವಾದ ಇತ್ತೀಚಿನ ಅಭಿಯಾನ ನಂತರ, ಸಂಚಾರಿ ಪೊಲೀಸರು ಈ ವಾಹನಗಳ ಪರ್ಮಿಟ್‌ಗಳನ್ನು ರದ್ದುಗೊಳಿಸುವಂತೆ ಆರ್ ಟಿಒಗೆ ತಿಳಿಸಿತ್ತು.

ಹಿಂದೆ, ಆರ್‌ಟಿಒ ಚಾಲಕರ ಪರವಾನಗಿಯನ್ನು ಮಾತ್ರ ಅಮಾನತುಗೊಳಿಸಿತು, ಆದರೆ ನಿಯಮಾವಳಿಗಳನ್ನು ಉಲ್ಲಂಘಿಸುವುದು ಮತ್ತಷ್ಟು ಹೆಚ್ಚಾಗುತ್ತಿದೆ. ಈಗ, ಈ ವಾಹನಗಳ ಪರ್ಮಿಟ್‌ಗಳನ್ನು ರದ್ದುಗೊಳಿಸುವ ಮೂಲಕ ಹೆಚ್ಚು ನಿರ್ಣಾಯಕ ಕ್ರಮ ತೆಗೆದುಕೊಳ್ಳುವಂತೆ ನಾವು ಆರ್‌ಟಿಒಗೆ ಮನವಿ ಮಾಡಿದ್ದೇವೆ. ಆದಾಗ್ಯೂ, ಉಲ್ಲಂಘನೆ ಮುಂದುವರಿದರೆ, ಟ್ರಾಫಿಕ್ ಪೊಲೀಸರು ಬಸ್‌ಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು RTO ನೊಂದಿಗೆ ಕೆಲಸ ಮಾಡುತ್ತಾರೆ ಎಂದು DCP ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(TNIE) ಪ್ರತಿನಿಧಿಗೆ ತಿಳಿಸಿದ್ದಾರೆ.

ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಶಾಲೆಗಳಲ್ಲಿ ಆಲ್ಕೋಹಾಲ್ ಮೀಟರ್ ಮತ್ತು ಹೆಚ್ಚುವರಿ ಚಾಲಕರು ಲಭ್ಯವಾಗುವುದನ್ನು ಕಡ್ಡಾಯಗೊಳಿಸುವಂತೆ ಶಿಕ್ಷಣ ಇಲಾಖೆಗೆ ಪತ್ರ ಬರೆಯಲು ಇಲಾಖೆ ಯೋಜಿಸುತ್ತಿದೆ ಎಂದು ಹೇಳಿದರು.

ಮತ್ತೋರ್ವ ಹಿರಿಯ ಅಧಿಕಾರಿ, ಮಕ್ಕಳ ಸುರಕ್ಷತೆಗೆ ಧಕ್ಕೆ ತರುವ ಇಂತಹ ಘಟನೆಗಳು ನಡೆದಾಗ ಪೋಷಕರು ಶಾಲೆಗಳಿಂದ ಹೊಣೆಗಾರಿಕೆಯನ್ನು ಕೇಳಬೇಕು ಮತ್ತು ಎಲ್ಲ ಕೋನಗಳಿಂದ ಪ್ರಶ್ನಿಸಬೇಕು. ಶಾಲೆಗಳು ಬಸ್ ಸೇವೆಗಳಿಗೆ ಹೆಚ್ಚುವರಿ ಶುಲ್ಕವನ್ನು ಕೋರಿದರೆ, ಪ್ರತಿ ಪಿಕ್-ಅಪ್ ಮತ್ತು ಡ್ರಾಪ್-ಆಫ್ ಮೊದಲು ಚಾಲಕರನ್ನು ಪರೀಕ್ಷಿಸುವುದನ್ನು ಖಚಿತಪಡಿಸಿಕೊಳ್ಳುವುದು ಸಹ ಅಗತ್ಯವಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಪೋಷಕರು ತಮ್ಮ ಮಕ್ಕಳು ಸುರಕ್ಷಿತ ಕೈಯಲ್ಲಿದ್ದಾರೆ ಎಂಬ ಭರವಸೆ ಹೊಂದಿರುತ್ತಾರೆ ಎಂದರು.

ಇಂತಹ ಘಟನೆಗಳು ವರದಿಯಾದಾಗಲೆಲ್ಲಾ ಶಾಲೆಗಳು ರಾಜಿ ಮಾಡಿಕೊಳ್ಳುವ ಸುರಕ್ಷತೆಗಾಗಿ ವಿತ್ತೀಯ ಪರಿಹಾರವನ್ನು ನೀಡಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಬೇಕು. ಈ ಕ್ರಮವು ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಖಾತ್ರಿಪಡಿಸುವಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಶಾಲೆಗಳನ್ನು ಒತ್ತಾಯಿಸುತ್ತದೆ ಎನ್ನುತ್ತಾರೆ ಸಂಚಾರಿ ಪೊಲೀಸ್ ಇಲಾಖೆ ಅಧಿಕಾರಿಗಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT