ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ (ಬಿಎನ್ಪಿ) ಮಂಗಳವಾರ ಬೆಳಗ್ಗೆ ಸುಮಾರು 8-9 ವರ್ಷ ಪ್ರಾಯದ ಆನೆ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಅಧಿಕಾರಿಗಳ ಪ್ರಕಾರ, ಸಂಭವನೀಯ ಆಘಾತ ಮತ್ತು ಹರ್ಪಿಸ್ ಸೋಂಕಿನಿಂದ ಪ್ರಾಣಿ ಸಾವನ್ನಪ್ಪಿದೆ. ಶವಪರೀಕ್ಷೆಯಲ್ಲಿ ವಿದ್ಯುದಾಘಾತ, ರಸ್ತೆ ಅಪಘಾತ ಅಥವಾ ಗುಂಡಿನ ದಾಳಿಯಂತಹ ಪ್ರಾಣಿಗಳ ಸಾವಿನಲ್ಲಿ ಯಾವುದೇ ಮಾನವ ಹಸ್ತಕ್ಷೇಪವಿಲ್ಲ ಎಂದು ತಿಳಿದುಬಂದಿದೆ.
"ಪ್ರಾಣಿಗಳು ಮತ್ತು ಮಾನವರು ನ್ಯೂರೋ ಪ್ಯಾನಿಕ್ ಸೆಪ್ಟಿಸೆಮಿಕ್ನಂತಹ ಹಠಾತ್ ಆಘಾತಗಳನ್ನು ಪಡೆಯಬಹುದು. ಪ್ರಸ್ತುತ ಮೃತ ಆನೆಯ ದೇಹದ ಮಾದರಿಗಳನ್ನು ವಿಶ್ಲೇಷಣೆಗಾಗಿ ತಜ್ಞರಿಗೆ ಕಳುಹಿಸಲಾಗಿದೆ ಮತ್ತು ಅಂತಿಮ ವರದಿಯು ಹರ್ಪಿಸ್ ವೈರಲ್ ಸೋಂಕನ್ನು ಹೊರತುಪಡಿಸಿ ಸಾವಿಗೆ ಕಾರಣವೇನು ಎಂಬುದನ್ನು ತೋರಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆನೇಕಲ್ ವ್ಯಾಪ್ತಿಯ ಮುರಗಂದಡ್ಡಿಯಲ್ಲಿ ಕಾಡಾನೆಯಿಂದ ಹಾದು ಹೋಗುವ ರಸ್ತೆಯಿಂದ ಸುಮಾರು 20-30 ಮೀಟರ್ ದೂರದಲ್ಲಿ ಗಸ್ತು ಸಿಬ್ಬಂದಿ ನೆಲದ ಮೇಲೆ ಕುಸಿದು ಬಿದ್ದ ಸ್ಥಿತಿಯಲ್ಲಿ ಆನೆ ಪತ್ತೆಯಾಗಿತ್ತು. ಸಿಬ್ಬಂದಿಗಳು ಸ್ಥಳಕ್ಕೆ ಬಂದು ಸಹಾಯ ಮಾಡುವಷ್ಟರಲ್ಲಿ ಅದು ಸಾವನ್ನಪ್ಪಿತ್ತು.
ಈ ವರ್ಷದ ಮೊದಲ ಸಾವು
ಇನ್ನು ಇದು ಈ ವರ್ಷ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ವರದಿಯಾದ ಮೊದಲ ಆನೆ ಸಾವಾಗಿದೆ. ಅರಣ್ಯ ಇಲಾಖೆಯ ಪ್ರಕಾರ, ರಾಷ್ಟ್ರೀಯ ಉದ್ಯಾನವನವು 106.83 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ನಗರಕ್ಕೆ ಹೊಂದಿಕೊಂಡಂತೆ 127 ಆನೆಗಳನ್ನು ಹೊಂದಿದೆ. ಕಾಡು ಪ್ರಾಣಿಗಳಲ್ಲಿ ಅದರಲ್ಲೂ ಸಸ್ಯಹಾರಿಗಳಲ್ಲಿ ವೈರಲ್ ಸೋಂಕುಗಳು ಮತ್ತು ಆಘಾತಗಳು ಸಾಮಾನ್ಯವಾಗಿದೆ. ಆನೆಗಳು ಹರ್ಪಿಸ್ ಸೋಂಕಿಗೆ ಒಳಗಾಗುತ್ತವೆ. ವಿಶೇಷವಾಗಿ ಚಿಕ್ಕ ಪ್ರಾಯದ ಆನೆಗಳು ಇಂತಹ ಸೋಂಕಿಗೆ ತುತ್ತಾಗುವುದು ಸಾಮಾನ್ಯ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಅಂತೆಯೇ ವಯಸ್ಸಾದ ಆನೆಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಆದರೆ ಚಿಕ್ಕ ವಯಸ್ಸಿನ ಆನೆಗಳು ಹೆಚ್ಚಾಗಿ ಸೋಂಕಿಗೆ ತುತ್ತಾಗುತ್ತವೆ. ಇತ್ತೀಚೆಗೆ ಸೋಂಕಿಗೆ ತುತ್ತಾಗುವ ಆನೆಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಸೋಂಕಿತ ಆನೆಗಳನ್ನು ಪತ್ತೆ ಹಚ್ಚುವುದು ಕೂಡ ಸಮಸ್ಯೆಯಾಗಿದೆ. ಇದೂ ಕೂಡ ಆನೆಗಳ ಸಾವಿಗೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.