ಮಿರಾಜ್ ಪಬ್ 
ರಾಜ್ಯ

'ಹೇಳೋರಿಲ್ಲಾ.. ಕೇಳೋರಿಲ್ಲಾ.. ಸಚಿವರ ಪಬ್ ಗೆ ತಡರಾತ್ರಿಯವರೆಗೂ ಪರ್ಮಿಷನ್'; JDS ಕಿಡಿ

ಮುಂದಿನ ಮುಖ್ಯಮಂತ್ರಿ ಎಂದು ಹಗಲುಗನಸು ಕಾಣುತ್ತಿರುವ ಸಚಿವರೊಬ್ಬರ ಒಡೆತನದ ಮಿರಾಜ್ ಪಬ್ ನಿಯಮ ಮೀರಿ ನಡೆಸಲಾಗುತ್ತಿದೆ ಎಂದು ಜೆಡಿಎಸ್ ಆಕ್ರೋಶ ಹೊರಹಾಕಿದೆ.

ಬೆಂಗಳೂರು: ಬೆಂಗಳೂರಿನಲ್ಲಿರುವ ಮಿರಾಜ್ ಪಬ್ ತಡರಾತ್ರಿಯವರೆಗೂ ಕಾರ್ಯ ನಿರ್ವಹಿಸಿದ್ದು, ಇದಕ್ಕೆ ಅನುಮತಿ ನೀಡಿದವರು ಯಾರು ಎಂದು ಜೆಡಿಎಸ್ ಕಿಡಿಕಾರಿದೆ.

ಬೆಂಗಳೂರಿನಲ್ಲಿ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ತೆರೆಯಲು ರಾತ್ರಿ ಒಂದು ಗಂಟೆವರೆಗೂ ಮಾತ್ರ ಅವಕಾಶ ನೀಡಲಾಗಿದೆ.. ಆದರೆ ಮುಂದಿನ ಮುಖ್ಯಮಂತ್ರಿ ಎಂದು ಹಗಲುಗನಸು ಕಾಣುತ್ತಿರುವ ಸಚಿವರೊಬ್ಬರ ಒಡೆತನದ ಮಿರಾಜ್ ಪಬ್ ನಿಯಮ ಮೀರಿ ನಡೆಸಲಾಗುತ್ತಿದೆ ಎಂದು ಜೆಡಿಎಸ್ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, 'ಕರ್ನಾಟಕದಲ್ಲಿ ಕಾಂಗ್ರೆಸ್‌ನ ಅಂಧಾ ದರ್ಬಾರ್ ಜೋರಾಗಿಯೇ ನಡೆಯುತ್ತಿದೆ. ಇದನ್ನು ಹೇಳುವವರು, ಇಲ್ಲ ಕೇಳುವವರು ಯಾರು ಇಲ್ಲ. ಮಿರಾಜ್ ಪಬ್ ರಾತ್ರಿ ಒಂದು ಗಂಟೆಯಾದರೂ ಬಂದ್ ಮಾಡದೇ ಡಿ.ಜೆ ಸೌಂಡ್ ಹಾಕಿ ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ.

ಈ ಬಗ್ಗೆ ಸ್ಥಳೀಯರು ಸೆ.9 ರಂದು ಮತ್ತು ಸೆ. 16 ರಂದು ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರೂ ಪಬ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಂಗಳೂರು ಪೊಲೀಸರೇ ಆ ಪ್ರಭಾವಿ ಸಚಿವರ ಒತ್ತಡಕ್ಕೆ ಒಳಗಾಗಿ ಕಂಡು ಕಾಣದಂತೆ ಸುಮ್ಮನಿದ್ದೀರಾ..? ಕಾನೂನು, ಕಟ್ಟಳೆ, ನಿಯಮಗಳು ಕೇವಲ ಜನಸಮಾನ್ಯರಿಗಷ್ಟೇ ಸೀಮಿತವೇ..? ಕಾಂಗ್ರೆಸ್ ನಾಯಕರಿಗೆ ಅದು ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದೆ.

ಅಂತೆಯೇ ಮಿರಾಜ್ ಪಬ್ ವಿರುದ್ಧ ಕ್ರಮ ಕೈಗೊಳ್ಳದಂತೆ ನಿಮ್ಮನ್ನು ತಡೆಯುತ್ತಿರುವ ಆ ಆದೇಶ ಯಾವುದು ಎಂದು ಹೇಳುವಿರಾ? ಎಂದು ಜೆಡಿಎಸ್ ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಳಗಾವಿ ಅಧಿವೇಶನ: ಶಾಮನೂರು ಶಿವಶಂಕರಪ್ಪಗೆ ಸಂತಾಪ; ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಿಕೆ

ನಿತಿನ್ ನಬಿನ್ ನೇರವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷರ ಹುದ್ದೆಗೆ ನೇಮಕ ಆಗಲಿಲ್ಲ ಏಕೆ?: ಕಾರ್ಯಾಧ್ಯಕ್ಷರ ಪಾತ್ರವೇನು?

ಕಾಂಗ್ರೆಸ್ 'ವೋಟ್ ಚೋರಿ' ವಿವಾದ: ಇದಕ್ಕೂ 'ಇಂಡಿಯಾ ಬಣ'ಕ್ಕೂ ಯಾವುದೇ ಸಂಬಂಧ ಇಲ್ಲ- ಸಿಎಂ ಒಮರ್ ಅಬ್ದುಲ್ಲಾ

'ಒಂದು ಕ್ಷಣ ಯೋಚಿಸಬೇಕಿತ್ತು': ನಟ ದಿಲೀಪ್ ಅಭಿನಯದ ಚಿತ್ರದ ಪೋಸ್ಟರ್ ಹಂಚಿಕೊಂಡ ಮೋಹನ್ ಲಾಲ್ ವಿರುದ್ಧ ಭಾಗ್ಯಲಕ್ಷ್ಮಿ ಕಿಡಿ!

ಪುಣೆ: ಕೋಚಿಂಗ್ ಸೆಂಟರ್‌ನಲ್ಲಿ ಕ್ಲಾಸ್​ಮೇಟ್​ಗೆ ಚಾಕುವಿನಿಂದ ಇರಿದ ವಿದ್ಯಾರ್ಥಿ; ಬಾಲಕ ಸಾವು!

SCROLL FOR NEXT