ರಾಜ್ಯ

ಬೆಂಗಳೂರು: ಸುರಕ್ಷಿತ ಪಾದಚಾರಿ ಮಾರ್ಗದಿಂದ ಸಾರ್ವಜನಿಕ ಸಾರಿಗೆ ಪ್ರಯಾಣ ಸರಾಗ

ಇಂಡಿಯನ್ ರೋಡ್ ಕಾಂಗ್ರೆಸ್ (IRC) 103-2012 ರ ಪ್ರಕಾರ, ಫುಟ್‌ಪಾತ್ ಅಳತೆಗಳಿಗೆ ಪ್ರಮಾಣಿತ ನಿಯಮಗಳಿವೆ. ವಾಣಿಜ್ಯ ಪ್ರದೇಶಗಳಿಗೆ, ಫುಟ್‌ಪಾತ್‌ನ ಕನಿಷ್ಠ ಸ್ಪಷ್ಟ ಅಗಲವು 2.5 ಮೀಟರ್ ಆಗಿರಬೇಕು.

ಬೆಂಗಳೂರು: ಐಟಿ ರಾಜಧಾನಿ ಬೆಂಗಳೂರಿನಲ್ಲಿ ಫುಟ್ ಪಾತ್ ಗಳ ವ್ಯವಸ್ಥೆ ಸುರಕ್ಷಿತವಾಗುವುದಿಲ್ಲವೋ ಅಲ್ಲಿಯವರೆಗೆ ಸಾರ್ವಜನಿಕ ಸಾರಿಗೆಯನ್ನು ಜನರು ಬಳಸುವುದು ನಿಷ್ಟ್ರಯೋಜಕವಾಗುತ್ತದೆ. ಸುರಕ್ಷಿತ ಮತ್ತು ಉತ್ತಮವಾಗಿ ವಿನ್ಯಾಸಗೊಳಿಸಲಾದ ಫುಟ್ ಪಾತ್ ಗಳಿದ್ದರೆ ಜನರು ತಮ್ಮ ಖಾಸಗಿ ವಾಹನಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆ ಬಳಸುವುದು ಹೆಚ್ಚಾಗಬಹುದು.

ಬೆಂಗಳೂರು ನಗರದ ಕೆಲವು ಸ್ಥಳಗಳನ್ನು ಹೊರತುಪಡಿಸಿ ಬಹುತೇಕ ಭಾಗಗಳಲ್ಲಿ ಫುಟ್‌ಪಾತ್‌ಗಳಿಲ್ಲ ಅಥವಾ ಅತ್ಯಂತ ಕಳಪೆಯಾಗಿವೆ. ಇದು ಜನರು ಅವುಗಳನ್ನು ಬಳಸದಂತೆ ನಿರುತ್ಸಾಹಗೊಳಿಸುತ್ತದೆ. ಹೀಗಿರುವಾಗ ಜನರು ತಮಗೆ ಬೇಕಾದ ಸ್ಥಳಗಳಲ್ಲಿ ಮನಸೋ ಇಚ್ಛೆ ನಡೆದುಕೊಂಡು ಹೋಗುತ್ತಾರೆ ಮತ್ತು ಖಾಸಗಿ ವಾಹನಗಳನ್ನು ಬಳಸುತ್ತಾರೆ. ಸರಿಯಾದ ಫುಟ್‌ಪಾತ್‌ಗಳಿರುವಲ್ಲಿ, ಹೆಚ್ಚಿನವು ಅಕ್ರಮವಾಗಿ ಅತಿಕ್ರಮಿಸಲ್ಪಟ್ಟಿವೆ.

ಇಂಡಿಯನ್ ರೋಡ್ ಕಾಂಗ್ರೆಸ್ (IRC) 103-2012 ರ ಪ್ರಕಾರ, ಫುಟ್‌ಪಾತ್ ಅಳತೆಗಳಿಗೆ ಪ್ರಮಾಣಿತ ನಿಯಮಗಳಿವೆ. ವಾಣಿಜ್ಯ ಪ್ರದೇಶಗಳಿಗೆ, ಫುಟ್‌ಪಾತ್‌ನ ಕನಿಷ್ಠ ಸ್ಪಷ್ಟ ಅಗಲವು 2.5 ಮೀಟರ್ ಆಗಿರಬೇಕು. ಹೆಚ್ಚಿನ ಸ್ಥಳಗಳು ವಾಣಿಜ್ಯ ಪ್ರದೇಶವಾಗಿದ್ದರೆ, ಕನಿಷ್ಠ ಅಗಲವು 4 ಮೀಟರ್ ಆಗಿರಬೇಕು ಎಂದು ಅದು ಹೇಳುತ್ತದೆ. ಅಂಗಡಿ ಮುಂಭಾಗ ಇದ್ದರೆ, ಕನಿಷ್ಠ ಅಗಲವು 3.5-4.5 ಮೀಟರ್ ಆಗಿರಬೇಕು.

ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ (WRI) ಭಾರತದ ಇಂಟಿಗ್ರೇಟೆಡ್ ಟ್ರಾನ್ಸ್‌ಪೋರ್ಟ್ ಮತ್ತು ರಸ್ತೆ ಸುರಕ್ಷತೆಯ ಕಾರ್ಯಕ್ರಮ ವ್ಯವಸ್ಥಾಪಕ ಚೇತನ್ ಸೋಡಾಯೆ, ಅಡೆತಡೆಗಳಿಂದ ಮುಕ್ತವಾದ ಫುಟ್ ಪಾತ್ ಕನಿಷ್ಠ ಅಗಲವು 1.8 ಮೀ ಆಗಿರಬೇಕು. ಆದರೆ ಫುಟ್‌ಪಾತ್‌ನಲ್ಲಿ ಮರಗಳಿದ್ದರೆ ಅಡೆತಡೆಗಳ ಅಗಲವನ್ನು ಮೀರಿ ಅಗಲವು 1.8 ಮೀ ಹೆಚ್ಚಾಗುತ್ತದೆ.

ಫುಟ್‌ಪಾತ್‌ನ ಅಗಲ, ಗುಣಮಟ್ಟ, ನಿರಂತರ ಜನರ ಓಡಾಟ ಮತ್ತು ನಿರ್ವಹಣೆ ಉತ್ತಮವಾಗಿದ್ದರೆ, ಜನರು ಕನಿಷ್ಠ 500 ಮೀಟರ್‌ಗಳಿಂದ 3 ಕಿಮೀ ನಡುವಿನ ಕಡಿಮೆ ದೂರದವರೆಗೆ ನಡೆದುಕೊಂಡು ಹೋಗುತ್ತಾರೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್, ಪುಣೆಯ ಔಂಧ್‌ನ ಡಿಪಿ ರಸ್ತೆ, ಚೆನ್ನೈನ ಪಾಂಡಿ ಬಜಾರ್ ಇಂತಹ ಕಡೆಗಳಲ್ಲಿ ಫುಟ್ ಪಾತ್ ಗಳನ್ನು ವಿಸ್ತರಿಸಿದ ಮತ್ತು ಉತ್ತಮವಾಗಿ ನಿರ್ವಹಿಸಿದ ನಂತರ ಜನರ ಕಾಲ್ನಡಿಗೆ ಹೆಚ್ಚಾಗಿದೆ ಎನ್ನುತ್ತಾರೆ ಚೇತನ್ ನೋಡಾಯೆ.

ಸರಿಯಾದ ಬಾಳಿಕೆ ಬರುವ ವಸ್ತುಗಳಿಂದ ನಿರ್ಮಿಸಲಾದ ಉತ್ತಮ ಗುಣಮಟ್ಟದ ಕಾಲುದಾರಿಗಳ ಜೊತೆಗೆ, ಫುಟ್‌ಪಾತ್ ಮತ್ತು ಬಳಕೆಯ ಪ್ರಕಾರವನ್ನು ಆಧರಿಸಿ ಪ್ರತ್ಯೇಕ ಟೆಂಡರ್ ಪ್ರತಿ ಎರಡರಿಂದ ಐದು ವರ್ಷಗಳಿಗೊಮ್ಮೆ ಜಾರಿಯಲ್ಲಿರಬೇಕು, ಇದರಲ್ಲಿ ವಿವಿಧ ರೀತಿಯ ನಿರ್ವಹಣೆ - ಸ್ವಚ್ಛಗೊಳಿಸುವಿಕೆ, ದುರಸ್ತಿ, ತ್ಯಾಜ್ಯ ನಿರ್ವಹಣೆ, ಮರು-ಪೇಂಟಿಂಗ್ , ಮರು-ಮೇಲ್ಮೈ, ಡ್ರೈನೇಜ್ ಸಿಸ್ಟಮ್ ಕ್ಲೀನಿಂಗ್, ಡೆಸಿಲ್ಟಿಂಗ್ ಇತ್ಯಾದಿಗಳನ್ನು ಸೂಚಿಸುತ್ತವೆ.

ಅತಿಕ್ರಮಣ: ನಗರದಾದ್ಯಂತ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ನಿರ್ವಹಿಸುವ ಅನೇಕ ಪಾರ್ಕಿಂಗ್ ಸಂಕೀರ್ಣಗಳಿವೆ. ಅವರು ಪ್ರತಿ ಗಂಟೆಗೆ ಶುಲ್ಕವನ್ನು ಸಂಗ್ರಹಿಸುತ್ತಾರೆ, ವಾಣಿಜ್ಯ ಪ್ರದೇಶಗಳಿಗೆ ಭೇಟಿ ನೀಡುವ ಜನರಿಗೆ ಹಣವನ್ನು ಉಳಿಸಲು ತಮ್ಮ ವಾಹನಗಳನ್ನು ಫುಟ್‌ಪಾತ್‌ಗಳಲ್ಲಿ ನಿಲ್ಲಿಸುವುದು ಮೊದಲ ಆಯ್ಕೆಯಾಗಿದೆ. ಇದು ಅತಿಕ್ರಮಣವಾಗುತ್ತದೆ ಎನ್ನುತ್ತಾರೆ ಆಟೋ ಚಾಲಕ ಪ್ರಶಾಂತ್.

ಸೈಕಲ್ ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸಿದರೆ ನಾಗರಿಕರ ಮಾನಸಿಕ ಮತ್ತು ದೈಹಿಕ ಆರೋಗ್ಯ ಹೆಚ್ಚಿಸುತ್ತದೆ ಮತ್ತು ಜೀವನಶೈಲಿಯನ್ನು ಸುಧಾರಿಸುತ್ತದೆ. ಸಾರ್ವಜನಿಕ ಸಾರಿಗೆಯನ್ನು ಸಂಪರ್ಕಿಸುವ ನಿರಂತರ ವಾಕಿಂಗ್ ಮತ್ತು ಸೈಕ್ಲಿಂಗ್ ಮಾರ್ಗಗಳನ್ನು ನಿರ್ಮಿಸುವುದು ಮತ್ತು ಸ್ವತಂತ್ರ ನೆಟ್‌ವರ್ಕ್ ನ್ನು ರೂಪಿಸುವುದು ಖಾಸಗಿ ವಾಹನಗಳನ್ನು ಬಳಸುವುದರಿಂದ ಜನರನ್ನು ದೂರವಿಡಬಹುದು ಎನ್ನುತ್ತಾರೆ ನಾಗರಿಕ ಕಾರ್ಯಕರ್ತ ಸತ್ಯಶಂಕರನ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT