ಶಿವರಾಮ ಕಾರಂತ ಬಡಾವಣೆ 
ರಾಜ್ಯ

ಶಿವರಾಮ ಕಾರಂತ ಬಡಾವಣೆಗೆ ಅಭಿವೃದ್ಧಿ ಶುಲ್ಕ ನಿಗದಿಗೆ BDA ಮುಂದು

ಯಾವುದೇ ಪ್ರದೇಶದಲ್ಲಿ ಬಿಡಿಎ ಯೋಜನೆ ಕಾರ್ಯಗತಗೊಳಿಸಿದಾಗ ಸುತ್ತಮುತ್ತಲಿನ ಆಸ್ತಿಯ ಮೌಲ್ಯವು ಹೆಚ್ಚಾಗುತ್ತದೆ. ಆದ್ದರಿಂದ, ಬಿಡಿಎ ಕಾಯಿದೆ ಸೆಕ್ಷನ್ 20 ಮತ್ತು 21 ರ ಅಡಿಯಲ್ಲಿ ಅಭಿವೃದ್ಧಿ ಶುಲ್ಕ ನಿಗದಿಪಡಿಸಲು ಮುಂದಾಗಲಾಗಿದೆ.

ಬೆಂಗಳೂರು: ಡಾ. ಶಿವರಾಮ ಕಾರಂತ ಬಡಾವಣೆಯ 17 ಹಳ್ಳಿಗಳಲ್ಲಿ ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿಯು ಸಕ್ರಮಗೊಳಿಸಿರುವ 5171 ಕಟ್ಟಡಗಳಿಗೆ ಅಭಿವೃದ್ದಿ ಶುಲ್ಕ ನಿಗದಿುಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ.

ಬಿಡಿಎಯ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, ಯಾವುದೇ ಪ್ರದೇಶದಲ್ಲಿ ಬಿಡಿಎ ಯೋಜನೆ ಕಾರ್ಯಗತಗೊಳಿಸಿದಾಗ ಸುತ್ತಮುತ್ತಲಿನ ಆಸ್ತಿಯ ಮೌಲ್ಯವು ಹೆಚ್ಚಾಗುತ್ತದೆ. ಆದ್ದರಿಂದ, ಬಿಡಿಎ ಕಾಯಿದೆ ಸೆಕ್ಷನ್ 20 ಮತ್ತು 21 ರ ಅಡಿಯಲ್ಲಿ ಅಭಿವೃದ್ಧಿ ಶುಲ್ಕ ನಿಗದಿಪಡಿಸಲು ಮುಂದಾಗಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಶುಲ್ಕವನ್ನು ಹೇಗೆ ನಿಗದಿಪಡಿಸಲಾಗುತ್ತದೆ ಎಂದು ವಿವರಿಸಿರುವ ಅಧಿಕಾರಿಗಳು, ಭೂಮಿಗೆ ಬಿಡಿಎ ಲೇಔಟ್ ನಿರ್ಮಾಣದ ಮೊದಲು ಇದ್ದ ಮಾರುಕಟ್ಟೆ ಮೌಲ್ಯ ಮತ್ತು ನಂತರ ಇರುವ ಮೌಲ್ಯವನ್ನು ನಿರ್ಣಯಿಸಲಾಗುತ್ತದೆ. ನಂತರ ಎರಡು ಮೌಲ್ಯಗಳ ನಡುವಿನ ವ್ಯತ್ಯಾಸದ ಮೂರನೇ ಒಂದು ಭಾಗವಾಗದಷ್ಟು ಶುಲ್ಕವನ್ನು ನಿಗದಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರತಿ ಚದರ ಅಡಿಗೆ ವಿಧಿಸಬೇಕಾದ ಶುಲ್ಕವನ್ನು ಅಧಿಕಾರಿಗಳು ವಿವರಿಸಿದ್ದು, ಈ ಕುರಿತು ಮಾಹಿತಿ ಈ ಕೆಳಗಿನಂತಿದೆ... ಪ್ರತಿ ಚದರ ಮೀಟರ್ (ಸಾವಿರ ರೂ.ಗಳಲ್ಲಿ) ಪ್ರತಿ ಚದರ ಅಡಿ (ರೂ.ಗಳಲ್ಲಿ)

  • ಬೈಲಕೆರೆ – 1,833 – 170

  • ಜೆ.ಬಿ. ಕಾವಲ್- 2000 -186

  • ಸೋಮಶೆಟ್ಟಿಹಳ್ಳಿ -5,000- 465

  • ಗಾಣಿಗರಹಳ್ಳಿ – 5000 – 465

  • ಆವಲಹಳ್ಳಿ- 6042 – 561

  • ಹಾರೋಹಳ್ಳಿ- 1790 – 166

  • ಮೇಡಿ ಅಗ್ರಹಾರ- 667 – 62

  • ಕಾಳತಮ್ಮನಹಳ್ಳಿ- 1,167 – 180

  • ಕೆಂಪಾಪುರ – 12,367 – 1,149

  • ರಾಮಗೊಂಡನಹಳ್ಳಿ- 11,067- 1,028

  • ಕೆಂಪನಹಳ್ಳಿ- 465 – 43

  • ಲಕ್ಷ್ಮೇಪುರ- 5000 -465

  • ದೊಡ್ಡಬೆಟ್ಟಹಳ್ಳಿ – 8,667 -805

  • ವಡೇರಹಳ್ಳಿ- 833 – 77

  • ಗುಣಿ ಅಗ್ರಹಾರ- 2,333 – 217

  • ಶಾಮರಾಜಪುರ- 1833 – 170

  • ವೀರಸಾಗರ- 733 – 68

ಅಭಿವೃದ್ಧಿ ಶುಲ್ಕಗಳು ಜಾರಿಗೆ ಬರುವ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗೋವಾ ನೈಟ್ ಕ್ಲಬ್​ನಲ್ಲಿ ಭೀಕರ ಅಗ್ನಿ ದುರಂತ: ಪ್ರವಾಸಿಗರು ಸೇರಿ 23 ಮಂದಿ ಸಜೀವ ದಹನ, ತನಿಖೆಗೆ ಆದೇಶ

ಗೋವಾ ನೈಟ್ ಕ್ಲಬ್​ ಅಗ್ನಿ ದುರಂತ: ಪ್ರಧಾನಿ ಮೋದಿ, ರಾಷ್ಟ್ರಪತಿ ತೀವ್ರ ಸಂತಾಪ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

'ಹಿಂದೂ ಬೆಳವಣಿಗೆ ದರ' ಧರ್ಮ ಕೆಣಕುವ ಒಂದು ಮಾರ್ಗವಾಗಿತ್ತು: ಪ್ರಧಾನಿ ಮೋದಿ

ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ, ನನಗೆ ಇಷ್ಟವಾದ ಶೂ, ವಾಚ್ ಧರಿಸುವೆ: ಡಿ.ಕೆ. ಶಿವಕುಮಾರ್

ದೆಹಲಿಯಲ್ಲಿ 2ನೇ ಮದುವೆಗೆ ಪತಿಯ ಸಿದ್ಧತೆ: ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬೇಡಿದ ಪಾಕ್ ಮಹಿಳೆ!

SCROLL FOR NEXT