ಶಿವರಾಮ ಕಾರಂತ ಬಡಾವಣೆ 
ರಾಜ್ಯ

ಶಿವರಾಮ ಕಾರಂತ ಬಡಾವಣೆಗೆ ಅಭಿವೃದ್ಧಿ ಶುಲ್ಕ ನಿಗದಿಗೆ BDA ಮುಂದು

ಯಾವುದೇ ಪ್ರದೇಶದಲ್ಲಿ ಬಿಡಿಎ ಯೋಜನೆ ಕಾರ್ಯಗತಗೊಳಿಸಿದಾಗ ಸುತ್ತಮುತ್ತಲಿನ ಆಸ್ತಿಯ ಮೌಲ್ಯವು ಹೆಚ್ಚಾಗುತ್ತದೆ. ಆದ್ದರಿಂದ, ಬಿಡಿಎ ಕಾಯಿದೆ ಸೆಕ್ಷನ್ 20 ಮತ್ತು 21 ರ ಅಡಿಯಲ್ಲಿ ಅಭಿವೃದ್ಧಿ ಶುಲ್ಕ ನಿಗದಿಪಡಿಸಲು ಮುಂದಾಗಲಾಗಿದೆ.

ಬೆಂಗಳೂರು: ಡಾ. ಶಿವರಾಮ ಕಾರಂತ ಬಡಾವಣೆಯ 17 ಹಳ್ಳಿಗಳಲ್ಲಿ ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿಯು ಸಕ್ರಮಗೊಳಿಸಿರುವ 5171 ಕಟ್ಟಡಗಳಿಗೆ ಅಭಿವೃದ್ದಿ ಶುಲ್ಕ ನಿಗದಿುಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ.

ಬಿಡಿಎಯ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, ಯಾವುದೇ ಪ್ರದೇಶದಲ್ಲಿ ಬಿಡಿಎ ಯೋಜನೆ ಕಾರ್ಯಗತಗೊಳಿಸಿದಾಗ ಸುತ್ತಮುತ್ತಲಿನ ಆಸ್ತಿಯ ಮೌಲ್ಯವು ಹೆಚ್ಚಾಗುತ್ತದೆ. ಆದ್ದರಿಂದ, ಬಿಡಿಎ ಕಾಯಿದೆ ಸೆಕ್ಷನ್ 20 ಮತ್ತು 21 ರ ಅಡಿಯಲ್ಲಿ ಅಭಿವೃದ್ಧಿ ಶುಲ್ಕ ನಿಗದಿಪಡಿಸಲು ಮುಂದಾಗಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಶುಲ್ಕವನ್ನು ಹೇಗೆ ನಿಗದಿಪಡಿಸಲಾಗುತ್ತದೆ ಎಂದು ವಿವರಿಸಿರುವ ಅಧಿಕಾರಿಗಳು, ಭೂಮಿಗೆ ಬಿಡಿಎ ಲೇಔಟ್ ನಿರ್ಮಾಣದ ಮೊದಲು ಇದ್ದ ಮಾರುಕಟ್ಟೆ ಮೌಲ್ಯ ಮತ್ತು ನಂತರ ಇರುವ ಮೌಲ್ಯವನ್ನು ನಿರ್ಣಯಿಸಲಾಗುತ್ತದೆ. ನಂತರ ಎರಡು ಮೌಲ್ಯಗಳ ನಡುವಿನ ವ್ಯತ್ಯಾಸದ ಮೂರನೇ ಒಂದು ಭಾಗವಾಗದಷ್ಟು ಶುಲ್ಕವನ್ನು ನಿಗದಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರತಿ ಚದರ ಅಡಿಗೆ ವಿಧಿಸಬೇಕಾದ ಶುಲ್ಕವನ್ನು ಅಧಿಕಾರಿಗಳು ವಿವರಿಸಿದ್ದು, ಈ ಕುರಿತು ಮಾಹಿತಿ ಈ ಕೆಳಗಿನಂತಿದೆ... ಪ್ರತಿ ಚದರ ಮೀಟರ್ (ಸಾವಿರ ರೂ.ಗಳಲ್ಲಿ) ಪ್ರತಿ ಚದರ ಅಡಿ (ರೂ.ಗಳಲ್ಲಿ)

  • ಬೈಲಕೆರೆ – 1,833 – 170

  • ಜೆ.ಬಿ. ಕಾವಲ್- 2000 -186

  • ಸೋಮಶೆಟ್ಟಿಹಳ್ಳಿ -5,000- 465

  • ಗಾಣಿಗರಹಳ್ಳಿ – 5000 – 465

  • ಆವಲಹಳ್ಳಿ- 6042 – 561

  • ಹಾರೋಹಳ್ಳಿ- 1790 – 166

  • ಮೇಡಿ ಅಗ್ರಹಾರ- 667 – 62

  • ಕಾಳತಮ್ಮನಹಳ್ಳಿ- 1,167 – 180

  • ಕೆಂಪಾಪುರ – 12,367 – 1,149

  • ರಾಮಗೊಂಡನಹಳ್ಳಿ- 11,067- 1,028

  • ಕೆಂಪನಹಳ್ಳಿ- 465 – 43

  • ಲಕ್ಷ್ಮೇಪುರ- 5000 -465

  • ದೊಡ್ಡಬೆಟ್ಟಹಳ್ಳಿ – 8,667 -805

  • ವಡೇರಹಳ್ಳಿ- 833 – 77

  • ಗುಣಿ ಅಗ್ರಹಾರ- 2,333 – 217

  • ಶಾಮರಾಜಪುರ- 1833 – 170

  • ವೀರಸಾಗರ- 733 – 68

ಅಭಿವೃದ್ಧಿ ಶುಲ್ಕಗಳು ಜಾರಿಗೆ ಬರುವ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT