ಸಿಎಂ ಸಿದ್ದರಾಮಯ್ಯ 
ರಾಜ್ಯ

ನರೇಗಾ, ಅನ್ನಭಾಗ್ಯ ಯೋಜನೆ ಕೊರೋನಾ ಸಮಯದಲ್ಲಿ ಬಡವರ ಬದುಕಿಸಿತು: ಸಿಎಂ ಸಿದ್ದರಾಮಯ್ಯ

ಹೊಟ್ಟೆ ತುಂಬ ಹಿಟ್ಟು - ಬಾಯಿ ತುಂಬ ಅನ್ನ ಎಂದು ನನ್ನಮ್ಮ ಹೇಳುತ್ತಿದ್ದರು. ನಮಗೆ ಬಾಲ್ಯದಲ್ಲಿ ಮೊದಲು ಹೊಟ್ಟೆತುಂಬುವಷ್ಟು ಮುದ್ದೆ ಹಾಕಿ, ನಂತರ ಸ್ವಲ್ಪ ಅನ್ನ ಕೊಡೋರು. ಅನ್ನ ಉಣ್ಣಬೇಕಾದರೆ ಹಬ್ಬ ಹರಿದಿನಗಳು ಬರಬೇಕಿತ್ತು.

ಬೆಂಗಳೂರು: ನರೇಗಾ ಮತ್ತು ಅನ್ನಭಾಗ್ಯ ಯೋಜನೆಗಳು ಜಾರಿಯಾಗದೆ ಇದ್ದಿದ್ದರೆ ಸಾಂಕ್ರಾಮಿಕ ರೋಗ ಕೊರೋನಾ ಸಮಯದಲ್ಲಿ ಸಾಕಷ್ಟು ಬಡವರು ಸಂಕಷ್ಟಕ್ಕೆ ಸಿಲುಕುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ನಡೆದ ಸಮಾರಂಭದಲ್ಲಿ ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ ಕೃತಿ ಬಿಡುಗಡೆಗೊಳಿಸಿದ ಮುಖ್ಯಮಂತ್ರಿಗಳು, ಬಳಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೊಟ್ಟೆ ತುಂಬ ಹಿಟ್ಟು - ಬಾಯಿ ತುಂಬ ಅನ್ನ ಎಂದು ನನ್ನಮ್ಮ ಹೇಳುತ್ತಿದ್ದರು. ನಮಗೆ ಬಾಲ್ಯದಲ್ಲಿ ಮೊದಲು ಹೊಟ್ಟೆತುಂಬುವಷ್ಟು ಮುದ್ದೆ ಹಾಕಿ, ನಂತರ ಸ್ವಲ್ಪ ಅನ್ನ ಕೊಡೋರು. ಅನ್ನ ಉಣ್ಣಬೇಕಾದರೆ ಹಬ್ಬ ಹರಿದಿನಗಳು ಬರಬೇಕಿತ್ತು. ಬಡವರ ಮನೆ ಮಕ್ಕಳಿಗೆ ಹುಷಾರಿಲ್ಲ ಅಂದ್ರೆ ತುತ್ತು ಅನ್ನಕ್ಕಾಗಿ ಅನ್ನ ಮಾಡೋರ ಮನೆ ಮುಂದೆ ಕೈಯ್ಯೊಡ್ಡಿ ನಿಲ್ಲಬೇಕಾದ ಸ್ಥಿತಿ ಇತ್ತು. ಇವನ್ನೆಲ್ಲಾ ಕಣ್ಣಾರೆ ಕಂಡಿದ್ದ ನಾನು ನಾಡಿನ ಯಾರೊಬ್ಬರೂ ತುತ್ತು ಅನ್ನಕ್ಕಾಗಿ ಕೈವೊಡ್ಡಬಾರದೆಂದು ತೀರ್ಮಾನಿಸಿ ಅನ್ನ ಭಾಗ್ಯ ಜಾರಿಗೆ ಕೊಟ್ಟಿದ್ದೆ. ಈ ಯೋಜನೆ ಬಗ್ಗೆ ಹೊಟ್ಟೆತುಂಬಿದ ಜನ ಬಹಳಷ್ಟು ಟೀಕೆ ಟಿಪ್ಪಣಿ ಮಾಡಿದರು, ಆದರೆ, ಕೊರೋನಾ ಬಂದಾಗ ಈ ಯೋಜನೆಯ ಮಹತ್ವ ಜನರ ಅರಿವಿಗೆ ಬಂತು ಎಂದು ಹೇಳಿದರು.

1949 ನವೆಂಬರ್ 25 ರಂದು ಸಂವಿಧಾನ ಜಾರಿ ಸಭೆಯಲ್ಲಿ ಬಾಬಾ ಸಾಹೇಬರು ಮಾಡಿದ ಭಾಷಣ ನನ್ನ ಗ್ಯಾರಂಟಿಗಳಿಗೆ ಸ್ಫೂರ್ತಿ.‌ ಅವಕಾಶಗಳಿಂದ ವಂಚಿತರಾಗಿರುವವರಿಗೆ ಸಮಾನ ಅವಕಾಶಗಳು ಸಿಕ್ಕಾಗ ಸಮ ಸಮಾಜ ನಿರ್ಮಾಣ ಸಾಧ್ಯ. ಬಸವಾದಿ ಶರಣರು, ಬುದ್ಧ ಕೂಡ ಸಮ ಸಮಾಜದ ಬಗ್ಗೆ ಹೇಳಿದ್ದಾರೆ. ಕೇವಲ ಭಾಷಣಗಳಿಂದ ಸಮ ಸಮಾಜದ ಆಶಯ ಈಡೇರಲ್ಲ. ಈ ಕಾರಣಕ್ಕೇ ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಹಲವು ಭಾಗ್ಯಗಳನ್ನು ಜಾರಿ ಮಾಡಿದ್ದೆ. ಜಾತಿ ಕಾರಣಕ್ಕಾಗಿ ಸಮಾಜದಲ್ಲಿ ಆರ್ಥಿಕ‌ ಅಸಮಾನತೆ ಸೃಷ್ಟಿ ಆಯಿತು. ಆದ್ದರಿಂದ ಎಲ್ಲರಿಗೂ ಆರ್ಥಿಕ ಶಕ್ತಿ ಕೊಡುವ ಕಾರಣಕ್ಕೆ 2013-18 ರ ವರೆಗೆ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿದೆವು. ಹಾಗೆಯೇ ಎರಡನೇ ಬಾರಿ ಮುಖ್ಯಮಂತ್ರಿ ಆದಾಗಲೂ ಗ್ಯಾರಂಟಿಗಳ ಮೂಲಕ ಆರ್ಥಿಕ ಶಕ್ತಿ ನೀಡಿದೆವು.

ನಮ್ಮ ಭಾಗ್ಯಗಳನ್ನು, ಗ್ಯಾರಂಟಿಗಳನ್ನು ವಿರೋಧಿಗಳು ಆಡಿಕೊಂಡರು. ಈಗಲೂ ಅಪ ಪ್ರಚಾರ ಮಾಡುತ್ತಿದ್ದಾರೆ. ಆದರೆ ನಾನು ಹೋದಲ್ಲಿ ಬಂದಲ್ಲಿ ಗ್ಯಾರಂಟಿಗಳ ಫಲಾನುಭವಿಗಳು ನಮ್ಮ ಸರ್ಕಾರಕ್ಕೆ ಧನ್ಯತೆ ಅರ್ಪಿಸುತ್ತಿದ್ದಾರೆ. ನರೇಗಾ ಮತ್ತು ಅನ್ನಭಾಗ್ಯ ಯೋಜನೆಗಳು ಕೊರೋನಾ ಸಂದರ್ಭದಲ್ಲಿ ಬಡವರನ್ನು, ಕೆಳ ಮಧ್ಯಮ ವರ್ಗದವರನ್ನು ಬದುಕಿಸಿತು. ಹೀಗಾಗಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹೆಚ್ಚೆಚ್ಚು ಮಾತಾಡಬೇಕು. ಅನ್ನಭಾಗ್ಯದ ಮೇಲೆ "ಅನ್ನ" ಅಂತಲೇ ಸಿನಿಮಾ ಬಂದಿದೆ. ನಾನೂ ಸಿನಿಮಾ ನೋಡಿದೆ, ನೀವೊಮ್ಮೆ ನೋಡಿ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಿ-ಫೋರ್ಸ್ ಬ್ಲಾಕೌಟ್ ನಿಂದ ಪತನ ಸಾಧ್ಯತೆ: ತೇಜಸ್ ಅಪಘಾತ ಬಗ್ಗೆ ತಜ್ಞರು; ಮಗನ ಸಾವಿನ ಸುದ್ದಿ Youtube ನೋಡಿ ತಿಳಿದುಕೊಂಡ ಪೈಲಟ್ ತಂದೆ !

ಬೆಂಗಳೂರು ಎಟಿಎಂ ದರೋಡೆ: ಮತ್ತೋರ್ವ ಪ್ರಮುಖ ಆರೋಪಿ Xavier ತಮಿಳುನಾಡಿನಲ್ಲಿ ಬಂಧನ!

ತಪ್ಪಿಗಿಲ್ಲ ಅವಕಾಶ: ದುಬೈನಲ್ಲಿ ತೇಜಸ್ ವಿಮಾನದ ಇಜೆಕ್ಷನ್ ಸೀಟನ್ನು ಮಣಿಸಿದ ಭೌತಶಾಸ್ತ್ರ

ಮೇಡ್ ಇನ್ ಚೈನಾ, ಟರ್ಕಿ.. ಪಾಕ್ ಮೂಲಕ ಭಾರತಕ್ಕೆ ರವಾನೆ, ಬೃಹತ್ ಶಸ್ತ್ರಾಸ್ತ್ರ ಜಾಲ ಭೇದಿಸಿದ ದೆಹಲಿ ಪೊಲೀಸರು!

ಐಟಿ ಸಿಟಿ ಬೆಂಗಳೂರಿನ ಮಕ್ಕಳು ಕಲಿಕೆಯಲ್ಲಿ ಹಿಂದೆ: 3ರಿಂದ 5ನೇ ಕ್ಲಾಸಿನ ಶೇ.18ರಷ್ಟು ಮಕ್ಕಳು ಮಾತ್ರ 2ನೇ ತರಗತಿ ಪಠ್ಯ ಓದಬಲ್ಲರು !

SCROLL FOR NEXT