ಸಂಗ್ರಹ ಚಿತ್ರ 
ರಾಜ್ಯ

ರಾಜ್ಯದ ಶೇ.75ರಷ್ಟು ಮಂದಿಯಲ್ಲಿ ಬೊಜ್ಜು, ಅಧಿಕ ತೂಕ ಸಮಸ್ಯೆ...!

ರಾಜ್ಯದಲ್ಲಿ 2024ರಲ್ಲಿ ತಪಾಸಣೆಗೆ ಒಳಗಾದ ಜನಸಂಖ್ಯೆಯಲ್ಲಿ ಶೇ.75ರಷ್ಟು ಮಂದಿ ಬೊಜ್ಜು ಹಾಗೂ ಅಧಿಕ ತೂಕ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಬೊಜ್ಜು ಅಥವಾ ಅಧಿಕ ತೂಕದ ಸಮಸ್ಯೆ ಇತ್ತೀಚಿನ ದಿನಗಳಲ್ಲಂತೂ ಹೆಚ್ಚಾಗಿದೆ. ವ್ಯಕ್ತಿಯ ಆಹಾರ ಕ್ರಮ ಹಾಗೂ ಕೆಟ್ಟ ಜೀವನಶೈಲಿಯಿಂದ ದೇಹದ ಆರೋಗ್ಯದ ಮೇಲೆ ನೇರ ಪರಿಣಾಮ ಉಂಟಾಗುತ್ತಿದೆ. ಸಣ್ಣ ಮಕ್ಕಳು ಸೇರಿದಂತೆ ಸಾಕಷ್ಟು ಮಂದಿ ಹೊಟ್ಟೆಯ ಸುತ್ತಲಿನ ಕೊಬ್ಬಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ.75ರಷ್ಟು ಮಂದಿ ಬೊಜ್ಜು ಹಾಗೂ ಅಧಿಕ ತೂಕದಿಂದ ಬಳಲುತ್ತಿದ್ದಾರೆಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.

ಅಪೊಲೊ ಆಸ್ಪತ್ರೆಗಳ ಇತ್ತೀಚಿನ ಹೆಲ್ತ್ ಆಫ್ ದಿ ನೇಷನ್ 2025 ವರದಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ರಾಜ್ಯದಲ್ಲಿ 2024ರಲ್ಲಿ ತಪಾಸಣೆಗೆ ಒಳಗಾದ ಜನಸಂಖ್ಯೆಯಲ್ಲಿ ಶೇ.75ರಷ್ಟು ಮಂದಿ ಬೊಜ್ಜು ಹಾಗೂ ಅಧಿಕ ತೂಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಪೈಕಿ ಶೇ.56 ರಂದು ಮಂದಿ ಬೊಜ್ಜು ಸಮಸ್ಯೆ ಹಾಗೂ ಶೇ.21ರಷ್ಟು ಮಂತಿ ಅಧಿಕ ತೂಕ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ತಿಳಿಸಿದೆ.

ಜಡ ಜೀವನಶೈಲಿ, ಕಳಪೆ ಪೋಷಣೆ ಮತ್ತು ರೋಗನಿರ್ಣಯ ಮಾಡದ ದೀರ್ಘಕಾಲದ ಪರಿಸ್ಥಿತಿಗಳಿಂದ ಸಮಸ್ಯೆ ಉಲ್ಭಣಿಸಿದ್ದು, ಇದು ಸಾರ್ವಜನಿಕ ಆರೋಗ್ಯ ಬಿಕ್ಕನ್ನು ಸೂಚಿಸುತ್ತದೆ. ಈ ಪರಿಸ್ಥಿತಿಯನ್ನು ಗಮನಿಸಿದರೆ ರೋಗಲಕ್ಷಣ ಆಧಾರಿತ ಆರೋಗ್ಯ ರಕ್ಷಣೆ ಇನ್ನು ಮುಂದೆ ಸಾಕಾಗುವುದಿಲ್ಲ ಎಂದು ಹೇಳಿದೆ.

ಇನ್ನು ರಾಜ್ಯದಲ್ಲಿ ಪರೀಕ್ಷಿಸಲ್ಪಟ್ಟ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ.28 ರಷ್ಟು ಮಂದಿ ಅಧಿಕ ರಕ್ತದೊತ್ತಡ, ಶೇ.20ರಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಶೇ.84ರಷ್ಟು ಮಂದಿಯಲ್ಲಿ ಮೂಳೆ ಸಮಸ್ಯೆ ಹಾಗೂ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುವ ವಿಟಮಿನ್ ಡಿ ಸಮಸ್ಸೆಯಿಂದ ಬಳಲುತ್ತಿದ್ದಾರೆಂದು ತಿಳಿಸಿದೆ.

ಇದಲ್ಲದೆ, ಫ್ಯಾಟಿ ಲಿವರ್, ಋತುಬಂಧದ ನಂತರದ ಆರೋಗ್ಯ ಅಪಾಯಗಳು ಮತ್ತು ಬಾಲ್ಯದ ಸ್ಥೂಲಕಾಯತೆ ಸಮಸ್ಯೆಗಳು ಕಂಡು ಬಂದಿದ್ದು, ಬಾಲ್ಯದಲ್ಲಿಯೇ ಬೊಜ್ಜು ಹೆಚ್ಚುತ್ತಿರುವ ಕಳವಳಕಾರಿ ಅಂಶವಾಗಿದ್ದು, ಶೇ. 28 ರಷ್ಟು ಕಾಲೇಜು ವಿದ್ಯಾರ್ಥಿಗಳು ಅಧಿಕ ತೂಕ ಅಥವಾ ಬೊಜ್ಜು ಸಮಸ್ಯೆ ಹೊಂದಿರುವುದು ಮತ್ತು ಶೇ. 19 ರಷ್ಟು ಮಂದಿ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿದೆ.

ಮಾನಸಿಕ ಆರೋಗ್ಯದಲ್ಲಿ ರಾಷ್ಟ್ರೀಯವಾಗಿ ಪರೀಕ್ಷಿಸಲಾದ ಶೇ. 7 ರಷ್ಟು ಮಹಿಳೆಯರು ಮತ್ತು ಶೇ. 5 ರಷ್ಟು ಪುರುಷರು ಕ್ಲಿನಿಕಲ್ ಖಿನ್ನತೆಯ ಲಕ್ಷಣಗಳಿಂದ ಬಲುತ್ತಿರುವುದು ಕಂಡು ಬಂದಿದೆ. ಮಧ್ಯವಯಸ್ಕರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ ಎಂದು ತಿಳಿಸಿದೆ.

ಅಪೋಲೋ ಆಸ್ಪತ್ರೆಗಳ ಅಧ್ಯಕ್ಷ ಡಾ. ಪ್ರತಾಪ್ ಸಿ ರೆಡ್ಡಿ ಅವರು ಮಾತನಾಡಿ, ಭಾರತವು ಬೊಜ್ಜು ಹಾಗೂ ಅಧಿಕ ತೂಕ ಸಮಸ್ಯೆ ನಿವಾರಣಂ ಸಂಸ್ಕೃತಿಯತ್ತ ಸಾಗಬೇಕು. ಆರಂಭಿಕ ತಪಾಸಣೆ, ಮಧ್ಯಸ್ಥಿಕೆಗಳು ಮತ್ತು ಆರೋಗ್ಯ ಶಿಕ್ಷಣವು ನಮ್ಮ ಮನೆಗಳು, ಶಾಲೆಗಳು ಮತ್ತು ಕೆಲಸದ ಸ್ಥಳಗಳಲ್ಲಿ ಅವಿಭಾಜ್ಯ ಅಂಗವಾಗಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT