ಫಿಲ್ಟರ್ ಕಾಫಿ 
ರಾಜ್ಯ

ಬೆಲೆ ಏರಿಕೆ ಎಫೆಕ್ಟ್: ಜನರ ಜೇಬು ಸುಡಲಿದೆ ಫಿಲ್ಟರ್ ಕಾಫಿ!

ಹಾಲು ಹಾಗೂ ಕಾಫಿ ಪುಡಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನಗರದ ಹೋಟಲ್ ಗಳು ಫಿಲ್ಟರ್ ಕಾಫಿಯ ದರಗಳನ್ನು ಪರಿಷ್ಕರಿಸಿದ್ದು, 3-5ರೂ ಹೆಚ್ಚಿವೆ.

ಬೆಂಗಳೂರು: ಬೆಲೆ ಏರಿಕೆಯ ಪರಿಣಾಮ ಉದ್ಯಾನ ನಗರಿ ಬೆಂಗಳೂರಿನಲ್ಲಿ ಬಿಸಿ ಬಿಸಿ ಫಿಲ್ಟರ್ ಕಾಫಿ ಕುಡಿಯುವ ಮೊದಲು ಜನರು ಒಮ್ಮೆ ಜೇಬು ಮುಟ್ಟಿ ನೋಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಹಾಲು ಹಾಗೂ ಕಾಫಿ ಪುಡಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನಗರದ ಹೋಟಲ್ ಗಳು ಫಿಲ್ಟರ್ ಕಾಫಿಯ ದರಗಳನ್ನು ಪರಿಷ್ಕರಿಸಿದ್ದು, 3-5ರೂ ಹೆಚ್ಚಿವೆ. ಇದರಂತೆ ರೂ.15 ಬೆಲೆಯಿದ್ದ ಒಂದ್ ಕಪ್ ಕಾಫಿಯ ಬೆಲೆ ಇದೀಗ ರೂ.18ಕ್ಕೆ ಏರಿಕೆಯಾಗಿದೆ. ಕೆಲವೆಗೆ ರೂ.20-25ಕ್ಕೆ ಏರಿಕೆಯಾಗಿದೆ.

ಪ್ರಮುಖ ಉತ್ಪನ್ನಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಮಾಡುವುದು ಬಿಟ್ಟರೆ ನಮಗೆ ಬೇರಾವುದೇ ದಾರಿಯಿಲ್ಲ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.

ಕಾಫಿ ಪುಡಿಯ ಬೆಲೆ ಕಳೆದ ಮೂರು ತಿಂಗಳಿಗಿಂತ ತೀವ್ರವಾಗಿ ಏರಿಕೆಯಾಗಿದ್ದು, ಕೆಲ ಕಾಫಿ ಬೀಜಗಳು ಪ್ರತಿ ಕೆಜಿಗೆ 1,500 ರಿಂದ 2,000 ರೂ.ಗಳವರೆಗೆ ಹೆಚ್ಚಳವಾಗಿದೆ.

ಈ ಹಿಂದೆ ಕೆಜಿಗೆ 580 ರೂ. ಇದ್ದ ಅರೇಬಿಕಾದಂತಹ ಸಾಮಾನ್ಯವಾಗಿ ಬಳಸುವ ಬ್ರ್ಯಾಂಡ್‌ಗಳು ಕೂಡ ಇದೀಗ ಕೆಜಿಗೆ 730 ರೂ.ಗೆ ಏರಿಕೆಯಾಗಿದೆ. ಇದರ ಜೊತೆಗೆ, ಹಾಲಿನ ಬೆಲೆಗಳು ಕೂಡ ಲೀಟರ್‌ಗೆ 4 ರೂ.ಗಳಷ್ಟು ಏರಿಕೆಯಾಗಿವೆ ಮತ್ತು ವಿದ್ಯುತ್ ಬೆಲೆ ಕೂಡ ತೀವ್ರವಾಗಿ ಏರಿಕೆಯಾಗಿವೆ, ಇದು ನಮ್ಮ ಮೇಲಿನ ಹೊರೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.

ಬೆಲೆ ಏರಿಕೆಯು ದೊಡ್ಡ ಹೊಡೆತವಾಗಿದೆ. ಕಾಫಿ ಬೀಜಗಳ ಜೊತೆಗೆ ಹಾಲಿನ ದರ ಕೂಡ ಹೆಚ್ಚಾಗಿದೆ. ಹೀಗಾಗಿ ಗ್ರಾಹಕರ ಮೇಲೆ ಹೊರೆ ಹೊರಿಸುವುದು ಬಿಟ್ಟರೆ ನಮಗೆ ಬೇರೆ ದಾರಿಯಿಲ್ಲ ಎಂದು ಐಡಿಸಿಯ ಸ್ವಾಮಿ ನಂದನ್ ಅವರು ಹೇಳಿದ್ದಾರೆ.

ಗ್ರಾಹಕರಂತೆಯೇ ನಮಗೂ ನೋವಾಗುತ್ತಿದೆ. ಪರಿಣಾಮವನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸಿದ್ದೆವು. ಆದರೆ, ಎಲ್ಲಾ ವೆಚ್ಚಗಳು ಹೆಚ್ಚಾಗಿರುವುದರಿಂದ ಬೆಲೆಗಳನ್ನು ಹೆಚ್ಚಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ. ಇದೀಗ ಗ್ರಾಹಕರು ಕಾಫಿ ಬ್ರೇಕ್ ಗಳನ್ನು ಕಡಿಮೆ ಮಾಡಿದ್ದು, ಕಾಫಿಗಾಗಿ ಹೋಟೆಲ್ ಗೆ ಬರುವ ಜನರ ಸಂಖ್ಯೆ ಕೂಡ ಕಡಿಮೆಯಾಗಿದೆ ಎಂದು ಹಂಕಲ್ ಕಾಫಿಯ ಅಭಿಮನ್ಯು ಅವರು ತಿಳಿಸಿದ್ದಾರೆ.

ಬೆಲೆ ಏರಿಕೆ ಬಗ್ಗೆ ಜನರು ಸಾಕಷ್ಟು ಪ್ರಶ್ನೆಗಳನ್ನು ಮಾಡುತ್ತಿದ್ದಾರೆ. ಇದರಿಂದ ನಾವೂ ಒತ್ತಡಕ್ಕೊಳಗಾಗುತ್ತಿದ್ದೇವೆ. ಒಂದು ಕಪ್ ಚಹಾ ಅಥವಾ ಕಾಫಿಗೆ ಕೇವಲ 50 ಮಿಲಿ ಹಾಲು ಬೇಕಾಗುತ್ತದೆಯಷ್ಟೇ ಎಂದು ವಾದಿಸುತ್ತಿದ್ದಾರೆ. ಕಾಫಿ ತಯಾರಿಗೆ ಹಿಂದಿರುವ ಹಲವು ಚಿತ್ರಣಗಳು ಅವರಿಗೆ ಕಾಣುವುದೇ ಇಲ್ಲ. ಕಚ್ಚಾ ವಸ್ತುಗಳಿಂದ ಹಿಡಿದು ವಿದ್ಯುತ್ ವರೆಗೆ ಎಲ್ಲಾ ಬೆಲೆಯೂ ಹೆಚ್ಚಾಗಿದೆ. ಪದೇ ಪದೇ ಮನವಿ ಮಾಡಿದರೂ, ಸರ್ಕಾರ ಕೂಡ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT