ಕರ್ನಾಟಕ ಹೈಕೋರ್ಟ್ 
ರಾಜ್ಯ

ಶಿಕ್ಷಣ, ಉದ್ಯೋಗಗಳಲ್ಲಿ ಮೀಸಲಾತಿಗಾಗಿ ಒಂದು ಜಾತಿಯನ್ನು ವಿವಿಧ ಗುಂಪುಗಳಾಗಿ ವರ್ಗೀಕರಿಸೋದು ಸರಿಯಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಬಲಜಿಗ/ಬಣಜಿಗ ಸಮುದಾಯದ ರಾಜ್ಯದ ವರ್ಗೀಕರಣವನ್ನು ಪ್ರಶ್ನಿಸಿ ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ನಿವಾಸಿ ವಿ ಸುಮಿತ್ರಾ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಹೈಕೋರ್ಟ್ ಈ ತೀರ್ಪು ನೀಡಿದೆ.

ಬೆಂಗಳೂರು: ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಒಂದೇ ಸಮುದಾಯವನ್ನು ಎರಡು ವಿಭಿನ್ನ ಮೀಸಲಾತಿ ವರ್ಗಗಳ ಅಡಿಯಲ್ಲಿ ವರ್ಗೀಕರಿಸುವುದು ಸರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಬಲಜಿಗ/ಬಣಜಿಗ ಸಮುದಾಯದ ರಾಜ್ಯದ ವರ್ಗೀಕರಣವನ್ನು ಪ್ರಶ್ನಿಸಿ ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ನಿವಾಸಿ ವಿ ಸುಮಿತ್ರಾ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಹೈಕೋರ್ಟ್ ಈ ತೀರ್ಪು ನೀಡಿದೆ. ಇತ್ತೀಚೆಗೆ ತೀರ್ಪು ನೀಡಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, ಶಿಕ್ಷಣ ಮತ್ತು ಉದ್ಯೋಗ ಉದ್ದೇಶಗಳಿಗಾಗಿ ಬಲಜಿಗ/ಬಣಜಿಗ ಸಮುದಾಯವನ್ನು ಗುಂಪು 'ಬಿ' ಅಡಿಯಲ್ಲಿ ಏಕರೂಪವಾಗಿ ವರ್ಗೀಕರಿಸಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದರು.

ಶಿಕ್ಷಣಕ್ಕಾಗಿ ವರ್ಗ 'ಬಿ' ಅಡಿಯಲ್ಲಿ (ಆರ್ಟಿಕಲ್ 15(4) ಅಡಿಯಲ್ಲಿ) ಮತ್ತು ಉದ್ಯೋಗಕ್ಕಾಗಿ ವರ್ಗ 'ಡಿ' ಅಡಿಯಲ್ಲಿ (ಆರ್ಟಿಕಲ್ 16(4) ಅಡಿಯಲ್ಲಿ) ಸಮುದಾಯವನ್ನು ಇರಿಸುವ ರಾಜ್ಯದ ಅಸ್ತಿತ್ವದಲ್ಲಿರುವ ವರ್ಗೀಕರಣವು ತಾರತಮ್ಯ ಮತ್ತು ಸಂವಿಧಾನಬಾಹಿರವಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಸುಮಿತ್ರಾ ಅವರು ತಮ್ಮ ಜಾತಿ 'ಬಿ' ವರ್ಗಕ್ಕೆ ಸೇರಿದೆ ಎಂದು ಹೇಳಿಕೊಂಡ ಕಾರಣ 1993ರಲ್ಲಿ ಒಬಿಸಿ ಕೋಟಾದಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡರು. ಆದಾಗ್ಯೂ, 1996ರಲ್ಲಿ ಉದ್ಯೋಗಕ್ಕಾಗಿ ತಮ್ಮ ಸಮುದಾಯವನ್ನು 'ಡಿ' ವರ್ಗದ ಅಡಿಯಲ್ಲಿ ವರ್ಗೀಕರಿಸಲಾಗಿದೆ ಎಂದು ತಿಳಿಸುವ ನೋಟಿಸ್ ಅವರಿಗೆ ಬಂದಿತು. ಇದರಿಂದಾಗಿ ಅವರ ಜಾತಿ ಪ್ರಮಾಣಪತ್ರವು ಉದ್ಯೋಗ-ಸಂಬಂಧಿತ ಮೀಸಲಾತಿಗೆ ಅಮಾನ್ಯವಾಗಿತ್ತು.

ಇಲಾಖಾ ಮೇಲ್ಮನವಿಗಳು ಮತ್ತು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮೂಲಕ ಪರಿಹಾರಕ್ಕಾಗಿ ಹಲವು ಬಾರಿ ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ನಂತರ ಸುಮಿತ್ರಾ ಈ ದ್ವಂದ್ವ ವರ್ಗೀಕರಣವನ್ನು ತೋರಿಸುವ 1986ರ ಸರ್ಕಾರಿ ಅಧಿಸೂಚನೆಯನ್ನು ಪತ್ತೆಹಚ್ಚಿದರು. ಆರ್ಟಿಕಲ್ 15(4) ಮತ್ತು 16(4) ವಿಧಿಗಳ ಹಿಂದಿನ ಸಾಂವಿಧಾನಿಕ ಉದ್ದೇಶವು ಸ್ಥಿರವಾಗಿದೆ. ಅದೇ ಅನಾನುಕೂಲಕರ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ ಎಂದು ವಾದಿಸಿದ ಅವರು, ರಾಜ್ಯದ ವರ್ಗೀಕರಣವನ್ನು ಪ್ರಶ್ನಿಸಿದರು.

ನ್ಯಾಯಮೂರ್ತಿ ಗೋವಿಂದರಾಜ್ ಅವರು ಈ ವಾದವನ್ನು ಎತ್ತಿಹಿಡಿದು, 14ನೇ ವಿಧಿಯ ಅಡಿಯಲ್ಲಿ ಕಾನೂನಿನ ಮುಂದೆ ಸಮಾನತೆಯ ತತ್ವವು ಮೀಸಲಾತಿಯ ವಿಷಯದಲ್ಲೂ ಸಮಾನ ವ್ಯವಸ್ಥೆಯನ್ನು ಒಳಗೊಂಡಿದೆ. ಸಂದರ್ಭವನ್ನು ಅವಲಂಬಿಸಿ ಒಂದೇ ಸಮುದಾಯವನ್ನು ವಿಭಿನ್ನ ವರ್ಗಗಳಲ್ಲಿ ಇರಿಸಲಾಗುವುದಿಲ್ಲ —ಅಂತಹ ವಿಭಾಗವು ಅಂತರ್ಗತವಾಗಿ ತಾರತಮ್ಯದಿಂದ ಕೂಡಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅಂತಹ ಯಾವುದೇ ವಿಭಿನ್ನ ನಡವಳಿಕೆ ಸಾಂವಿಧಾನಿಕ ರಕ್ಷಣೆಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

"ಶಿಕ್ಷಣಕ್ಕಾಗಿ ಹಿಂದುಳಿದ ಸಮುದಾಯವನ್ನು ಗುರುತಿಸಿದರೆ, ಉದ್ಯೋಗಕ್ಕೆ ಬಂದಾಗ ಅದನ್ನು ವಿಭಿನ್ನವಾಗಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಅಲ್ಲದೆ ಉದ್ಯೋಗದಲ್ಲಿ ಸುಮಿತ್ರಾ ಅವರ ಗ್ರೂಪ್ 'ಬಿ' ಮೀಸಲಾತಿ ಹಕ್ಕನ್ನು ತಿರಸ್ಕರಿಸಿದ ಆದೇಶಗಳನ್ನು ರದ್ದುಗೊಳಿಸಿ,

ಮೀಸಲಾತಿ ವರ್ಗ 'ಬಿ' ಅಡಿಯಲ್ಲಿ ಅವರ ಅರ್ಹತೆಯನ್ನು ಒಪ್ಪಿಕೊಂಡು, ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಅವರ ಉದ್ಯೋಗವನ್ನು ಪುನರ್ ಕಲ್ಪಿಸಿ ಎಂದು ರಾಜ್ಯಕ್ಕೆ ನಿರ್ದೇಶನ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT