ಕೆಂಪೇಗೌಡ ವಿಮಾನ ನಿಲ್ದಾಣ  
ರಾಜ್ಯ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ದಕ್ಷಿಣ ಭಾರತದಲ್ಲಿ ಪಕ್ಷಿ ಡಿಕ್ಕಿಗೆ ಹೆಚ್ಚು ತುತ್ತಾಗುವ airport

ಹೈದರಾಬಾದ್ ಮತ್ತು ಚೆನ್ನೈಯಲ್ಲಿ ಇದೇ ಅವಧಿಯಲ್ಲಿ ಕ್ರಮವಾಗಿ 420 ಮತ್ತು 379 ದಾಖಲಾಗಿವೆ.

ಬೆಂಗಳೂರು: ಟರ್ಮಿನಲ್ 2 ನಿಂದ ಜಾಗತಿಕ ಮೆಚ್ಚುಗೆಗೆ ಪಾತ್ರವಾಗಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA)ದ ಬಗ್ಗೆ ಕಳವಳಕಾರಿ ಅಂಶವೊಂದು ಹೊರಬಿದ್ದಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದಕ್ಷಿಣ ಭಾರತದ ಪ್ರದೇಶದಲ್ಲಿ ಪಕ್ಷಿಗಳ ಡಿಕ್ಕಿಗೆ ಹೆಚ್ಚು ಒಳಗಾಗುವ ವಿಮಾನ ನಿಲ್ದಾಣವಾಗಿದೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ದೆಹಲಿ, ಮುಂಬೈ ಮತ್ತು ಅಹಮದಾಬಾದ್‌ ನಂತರ ನಾಲ್ಕನೇ ಸ್ಥಾನದಲ್ಲಿದೆ.

2022 ರಿಂದ ಮೇ 2025 ರವರೆಗೆ ಕೆಂಪೇಗೌಡ ನಿಲ್ದಾಣದಲ್ಲಿ ಒಟ್ಟು 535 ಪಕ್ಷಿಗಳು ಡಿಕ್ಕಿಯಾಗಿವೆ ಎಂದು ವರದಿಯಾಗಿವೆ. ಹೈದರಾಬಾದ್ ಮತ್ತು ಚೆನ್ನೈಯಲ್ಲಿ ಇದೇ ಅವಧಿಯಲ್ಲಿ ಕ್ರಮವಾಗಿ 420 ಮತ್ತು 379 ದಾಖಲಾಗಿವೆ.

ಪಕ್ಷಿ ಡಿಕ್ಕಿ ವಿಮಾನ ಮತ್ತು ಪಕ್ಷಿಗಳ ನಡುವಿನ ಆಕಸ್ಮಿಕ ಡಿಕ್ಕಿಗಳಾಗಿವೆ, ಪಕ್ಷಿ ಡಿಕ್ಕಿಗಳು ಹಾರಾಟದ ಎರಡು ಅತ್ಯಂತ ನಿರ್ಣಾಯಕ ಹಂತಗಳಲ್ಲಿ ಸಂಭವಿಸುತ್ತವೆ: ಟೇಕ್-ಆಫ್ ಮತ್ತು ಲ್ಯಾಂಡಿಂಗ್. ಹೆಚ್ಚಿನ ಪಕ್ಷಿ ಡಿಕ್ಕಿಗಳು ಒಂದೇ ಎಂಜಿನ್‌ಗೆ ಗಂಭೀರ ಹಾನಿಯನ್ನುಂಟುಮಾಡುತ್ತವೆ, ಇದರಿಂದಾಗಿ ಪೈಲಟ್‌ಗಳಿಗೆ ತುರ್ತು ಲ್ಯಾಂಡಿಂಗ್‌ ಮಾಡಬೇಕಾದ ಪರಿಸ್ಥಿತಿ ಬರಬಹುದು.

ಪಕ್ಷಿ ಡಿಕ್ಕಿಯ ಅತ್ಯಂತ ಕುಖ್ಯಾತ ಪ್ರಕರಣಗಳಲ್ಲಿ ಒಂದಾದ ಯುಎಸ್ ಏರ್ವೇಸ್ ಫ್ಲೈಟ್ 1549 - ಏರ್ಬಸ್ A320 - ಹಡ್ಸನ್ ನದಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಹೆಬ್ಬಾತುಗಳ ಹಿಂಡು ವಿಮಾನಕ್ಕೆ ಡಿಕ್ಕಿ ಹೊಡೆದು ಡ್ಯುಯಲ್-ಎಂಜಿನ್ ವೈಫಲ್ಯ ಕಂಡಿತು.

ಬೆಂಗಳೂರು ಮೂಲದ ಪಕ್ಷಿವಿಜ್ಞಾನಿ ಎಂ ಬಿ ಕೃಷ್ಣ ಅವರು ಹೇಳಿಕೊಳ್ಳುವಂತೆ ವಿಮಾನ ನಿಲ್ದಾಣವನ್ನು ನಿರ್ಮಿಸಿದ ಇಡೀ ಪ್ರದೇಶವು ಒಂದು ಕೆರೆಯಾಗಿತ್ತು. ಹೆಚ್ಚುವರಿಯಾಗಿ, ಸುತ್ತಮುತ್ತಲಿನ ಪ್ರದೇಶಗಳು ಕೃಷಿ ಪ್ರದೇಶಗಳಾಗಿವೆ, ಇದು ಪಕ್ಷಿಗಳ ಸಂತತಿಯನ್ನು ಹೆಚ್ಚಿಸುತ್ತದೆ. ವಿಮಾನ ನಿಲ್ದಾಣವು ಸ್ಥಾಪನೆಯಾಗುವ ಮೊದಲೇ ಪಕ್ಷಿ ಪ್ರಭೇದಗಳು ಅಲ್ಲಿ ಇರುವುದರಿಂದ, ಅವುಗಳ ಜೀವಕ್ಕೆ ಆದ್ಯತೆ ನೀಡಬೇಕು ಎನ್ನುತ್ತಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ವಕ್ತಾರರ ಪ್ರಕಾರ, ವಿಮಾನ ನಿಲ್ದಾಣದ "ಇನ್-ಹೌಸ್ ಬರ್ಡ್ ಏರ್‌ಕ್ರಾಫ್ಟ್ ಸ್ಟ್ರೈಕ್ ಅಪಾಯ ನಿರ್ವಹಣೆ (BASHM) ತಂಡವು ಪಕ್ಷಿ ಡಿಕ್ಕಿಯ ಅಪಾಯಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ನಿಯಂತ್ರಕ ಅವಶ್ಯಕತೆಗಳನ್ನು ಮೀರಿದ ಅಂಕಿಅಂಶ-ಚಾಲಿತ ವಿಧಾನವನ್ನು ಬಳಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಣ್ಣಲ್ಲಿ ಮಣ್ಣಾದ ʻವೃಕ್ಷಮಾತೆʼ; ಸಕಲ ಸರ್ಕಾರಿ ಗೌರವಗಳೊಂದಿಗೆ ತಿಮ್ಮಕ್ಕ ಅಂತ್ಯಕ್ರಿಯೆ

ಬಿಹಾರ ಚುನಾವಣೆ: ಸೋಲಿಗೆ ದುಃಖವಿಲ್ಲ, 'ಸಾರ್ವಜನಿಕ ಜೀವನದಲ್ಲಿ ಏರಿಳಿತ ಅನಿವಾರ್ಯ: RJD ಮೊದಲ ಪ್ರತಿಕ್ರಿಯೆ

ಜಮ್ಮು-ಕಾಶ್ಮೀರ ನೌಗಮ್ ಪೋಲಿಸ್ ಠಾಣೆ ಸ್ಫೋಟ, ಮೃತರ ಸಂಖ್ಯೆ 9ಕ್ಕೆ ಏರಿಕೆ, 32 ಮಂದಿ ಗಾಯ, ಭಯೋತ್ಪಾದಕ ಕೃತ್ಯವೇ? ಪೊಲೀಸರು ಹೇಳುವುದೇನು-Video

ಬಿಹಾರ: ಭರ್ಜರಿ ಗೆಲುವಿನ ಮರುದಿನವೇ ಬಿಜೆಪಿಯಿಂದ ಆರ್.ಕೆ. ಸಿಂಗ್ ಅಮಾನತು!

ಬಿಹಾರದಲ್ಲಿ ಮೋಡಿ ಮಾಡಿದ NDAನ ಮಖಾನಾ ಮಂಡಳಿ!

SCROLL FOR NEXT