ದಲಿತ ಅಧಿಕಾರಿಗೆ ಗ್ರಾಮ ಪ್ರವೇಶಿಸಲು ಅನುಮತಿ ನೀಡಿದ ಜನತೆ 
ರಾಜ್ಯ

ಸಂಪ್ರದಾಯ ಮುರಿದ ಕಲ್ಲಹಳ್ಳಿ ಗೊಲ್ಲರಹಟ್ಟಿ ಜನ: ದಲಿತ ಅಧಿಕಾರಿ ಗ್ರಾಮಕ್ಕೆ ಪ್ರವೇಶಿಸಲು ಸಮ್ಮತಿ

ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಕೂಡ್ಲಿಗಿ ತಾಲ್ಲೂಕಿನ ಕಲ್ಲಹಳ್ಳಿ ಗುಳ್ಳರಹಟ್ಟಿ ಹಳ್ಳಿಗೆ ದಲಿತನೊಬ್ಬನಿಗೆ ಗ್ರಾಮ ಪ್ರವೇಶಕ್ಕೆ ಅನುಮತಿಸಲಾಗಿದೆ.

ಹೊಸಪೇಟೆ: ತಲಾ ತಲಾಂತರಗಳಿಂದ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ, ಕಟ್ಟುಪಾಡು, ಅಸ್ಪೃಶ್ಯತೆ ಹೋಗಲಾಡಿಸಲು ಕಲ್ಲಹಳ್ಳಿ ಗೊಲ್ಲರಹಟ್ಟಿಯ ಜನತೆ ಈಗ ದಲಿತರನ್ನು ಹಟ್ಟಿಯೊಳಗೆ ಸ್ವಾಗತಿಸಿ ಪ್ರವೇಶ ಮಾಡಿಸಿಕೊಳ್ಳುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಕೂಡ್ಲಿಗಿ ಶಾಸಕ ಎನ್.ಟಿ. ಶ್ರೀನಿವಾಸ್ ಮತ್ತು ತಾಲ್ಲೂಕು ಆಡಳಿತದ ಪ್ರಯತ್ನದಿಂದಾಗಿ, ಒಂದು ದೊಡ್ಡ ಮೈಲಿಗಲ್ಲು ಸಾಧಿಸಿದಂತಾಗಿದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಕೂಡ್ಲಿಗಿ ತಾಲ್ಲೂಕಿನ ಕಲ್ಲಹಳ್ಳಿ ಗುಳ್ಳರಹಟ್ಟಿ ಹಳ್ಳಿಗೆ ದಲಿತನೊಬ್ಬನಿಗೆ ಪ್ರವೇಶಕ್ಕೆ ಅನುಮತಿಸಲಾಗಿದೆ.

ಇಲ್ಲಿನ ಗ್ರಾಮಸ್ಥರು ಯಾವುದೇ ದಲಿತರಿಗೆ ಪ್ರವೇಶಕ್ಕೆ ಅನುಮತಿ ನೀಡಿದರೆ ಅದು ಅವರಿಗೆ ದುರದೃಷ್ಟಕರ ಎಂದು ನಂಬಿದ್ದರು. ಇತ್ತೀಚೆಗೆ, ಸಮೀಕ್ಷೆ ನಡೆಸಲು ದಲಿತ ಅಧಿಕಾರಿಯೊಬ್ಬರು ಗ್ರಾಮಕ್ಕೆ ಬರಲು ಅವರು ನಿರಾಕರಿಸಿದರು. ಅಧಿಕಾರಿ ತಹಶೀಲ್ದಾರ್ ವಿ.ಕೆ. ನೇತ್ರಾವತಿಗೆ ಮಾಹಿತಿ ನೀಡಿದರು, ಅವರು ಸಿಬ್ಬಂದಿಯೊಂದಿಗೆ ಗ್ರಾಮಸ್ಥರನ್ನು ಕರೆದು ಸಂವಿಧಾನದ ನೇರ ಉಲ್ಲಂಘನೆಯಾಗಿರುವ ಇಂತಹ ಮೂಢನಂಬಿಕೆಗಳನ್ನು ಪಾಲಿಸುತ್ತಿರುವುದನ್ನು ಖಂಡಿಸಿದರು.

ಇಲ್ಲಿಯ ವಿದ್ಯಾವಂತರು ನಮ್ಮ ಗೊಲ್ಲರಹಟ್ಟಿಯಲ್ಲಿ ಆಚರಿಸುವಂಥ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸುವ ಉದ್ದೇಶದಿಂದ ಊರಿನ ಅನಕ್ಷರಸ್ಥರಿಗೆ ಈ ಬಗ್ಗೆ ತಿಳುವಳಿಕೆ ಹೇಳಿದ್ದಾರೆ. ಇದರ ಫಲವಾಗಿ ಈಗ ದಲಿತರನ್ನು ಹಟ್ಟಿಯೊಳಗೆ ಬಿಟ್ಟುಕೊಳ್ಳಲು ಎಲ್ಲರೂ ಸಮ್ಮತಿ ಸೂಚಿಸಿದ್ದಾರೆ.

ಈ ಗ್ರಾಮವು ಮುಖ್ಯವಾಗಿ ಯಾದವ ಸಮುದಾಯವು ವಾಸಿಸುವ ಪ್ರದೇಶವಾಗಿದ್ದು ಸುಮಾರು 130 ಮನೆಗಳನ್ನು ಒಳಗೊಂಡಿದೆ., ಗ್ರಾಮಸ್ಥರು ಅಂತಿಮವಾಗಿ ದಲಿತ ಅಧಿಕಾರಿಗೆ ಗ್ರಾಮಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು, ಮೂಢನಂಬಿಕೆಗಳಲ್ಲಿ ಮುಳುಗಿದ್ದ ತಮ್ಮ ಪದ್ಧತಿಗಳನ್ನು ತೊರೆದಿದ್ದಾರೆ, ಇದಕ್ಕಾಗಿ ತಹಶೀಲ್ದಾರ್ ಮತ್ತು ಶಾಸಕ ಶ್ರೀನಿವಾಸ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಅಂತಹ ಪದ್ಧತಿಗಳನ್ನು ಅನುಸರಿಸುವುದು, ತಿಳಿದೋ ಅಥವಾ ತಿಳಿಯದೆಯೋ, ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಶ್ರೀನಿವಾಸ್ ಹೇಳಿದರು. "ದಲಿತರನ್ನು ಸ್ವಾಗತಿಸುವ ಗ್ರಾಮಸ್ಥರ ನಿರ್ಧಾರವು ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಪ್ರಗತಿಪರ ಹೆಜ್ಜೆಯಾಗಿದೆ, ಏಕೆಂದರೆ ಇಂತಹ ತಾರತಮ್ಯದ ಪದ್ಧತಿಗಳು ಸಮಾಜಕ್ಕೆ ಹಾನಿಕಾರಕ ಎಂದಿದ್ದಾರೆ.

ದಲಿತ ಅಧಿಕಾರಿಯನ್ನು ಗ್ರಾಮದಿಂದ ನಿರ್ಬಂಧಿಸಿದ ನಂತರ, ನಾನು ಅಧಿಕಾರಿಗಳಿಗೆ ಗ್ರಾಮಸ್ಥರೊಂದಿಗೆ ಸಭೆ ನಡೆಸಲು ಸೂಚಿಸಿದೆ. ಸಾಂವಿಧಾನಿಕ ನಿಬಂಧನೆಗಳು ಮತ್ತು ಅಂತಹ ಪದ್ಧತಿಗಳನ್ನು ಮುಂದುವರಿಸುವುದರಿಂದ ಉಂಟಾಗುವ ಸಂಭಾವ್ಯ ಪರಿಣಾಮಗಳ ಬಗ್ಗೆ ನಾವು ಅವರಿಗೆ ತಿಳಿಸಿದ್ದೇವೆ. ದಲಿತ ಯುವಕರು ಮತ್ತು ಗುಂಪುಗಳನ್ನು ತಮ್ಮ ಸಮುದಾಯಕ್ಕೆ ಗೌರವಿಸಲು ಮತ್ತು ಸ್ವಾಗತಿಸಲು ಗ್ರಾಮಸ್ಥರು ಒಪ್ಪಿಕೊಂಡರು ಎಂದು ನೇತ್ರಾವತಿ ತಿಳಿಸಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT