ಧರ್ಮಸ್ಥಳದಲ್ಲಿ ಶವ ಶೋಧ ಕಾರ್ಯಾಚರಣೆ 
ರಾಜ್ಯ

Dharmasthala Case: ನೂರಾರು ಶವ ಹೂತಿದ್ದೇನೆ ಅಂದಿದ್ದ ಸ್ಥಳ 13ರಲ್ಲಿ 2ನೇ ದಿನವೂ ಸಿಗಲಿಲ್ಲ ಒಂದೂ ಅಸ್ಥಿಪಂಜರ; SIT ಶೋಧ ಮುಕ್ತಾಯ!

ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಎಸ್‌ಐಟಿ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಮತ್ತು ವಿಧಿವಿಜ್ಞಾನ ತಜ್ಞರು ನಡೆಯುತ್ತಿರುವ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು.

ಮಂಗಳೂರು: ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ-ಸಾಕ್ಷಿ ಗುರುತಿಸಿದ 13 ನೇ ಸ್ಥಳದಲ್ಲಿ ವಿಶೇಷ ತನಿಖಾ ತಂಡಕ್ಕೆ (SIT) ಯಾವುದೇ ಮಾನವ ಅವಶೇಷಗಳನ್ನು ಸಿಗಲಿಲ್ಲ.

ಸ್ಥಳದಿಂದ ಕೆಲವೇ ಮೀಟರ್ ದೂರದಲ್ಲಿ ವಿದ್ಯುತ್ ಕಂಬಗಳು ಮತ್ತು ಅಣೆಕಟ್ಟು ಇದ್ದ ಕಾರಣ, ಭೂಗತ ಪರಿಸ್ಥಿತಿಗಳನ್ನು ನಿರ್ಣಯಿಸಲು SIT ಮಂಗಳವಾರ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ಅನ್ನು ಬಳಸಿತ್ತು. GPR ಸಂಶೋಧನೆಗಳ ಆಧಾರದ ಮೇಲೆ, ಮಂಗಳವಾರ ಪ್ರದೇಶದ ಒಂದು ಭಾಗದಲ್ಲಿ ಮಾತ್ರ ಮಣ್ಣು ಅಗೆಯುವ ಕಾರ್ಯ ನಡೆಸಲಾಯಿತು. ಬುಧವಾರ, ಅದೇ ಸ್ಥಳದಲ್ಲಿ ಉತ್ಖನನ ಕಾರ್ಯ ಮುಂದುವರೆಯಿತು ಮತ್ತು ಸುಮಾರು 18 ಅಡಿ ಆಳಕ್ಕೆ ನೆಲವನ್ನು ಅಗೆಯಲಾಯಿತು.

ಹತ್ತಿರದ ಅಣೆಕಟ್ಟಿನ ನಿರ್ಮಾಣದ ಸಮಯದಲ್ಲಿ ಸ್ಥಳದಲ್ಲಿ ಅಪಾರ ಪ್ರಮಾಣದ ಮಣ್ಣನ್ನು ಸುರಿಯಲಾಗಿದ್ದ ಕಾರಣ 18 ಅಡಿಗಳವರೆಗೆ ಅಗೆಯಬೇಕಾಯಿತು ಎಂದು ಮೂಲಗಳು ತಿಳಿಸಿವೆ.

ದೊಡ್ಡ ಮಣ್ಣು ತೆಗೆಯುವ ಯಂತ್ರ ಮತ್ತು ಸಣ್ಣ ಅಗೆಯುವ ಯಂತ್ರ ಸೇರಿದಂತೆ ಭಾರೀ ಉತ್ಖನನ ಉಪಕರಣಗಳನ್ನು ಉತ್ಖನನಕ್ಕೆ ಬಳಸಲಾಗುತ್ತಿತ್ತು. ನಿರಂತರ ಮಳೆಯ ಹೊರತಾಗಿಯೂ, ಸ್ಥಳದಲ್ಲಿದ್ದ ದೂರುದಾರ-ಸಾಕ್ಷಿಯ ಸೂಚನೆಗಳನ್ನು ಅನುಸರಿಸಿ ತಂಡವು ಅಗೆಯುವುದನ್ನು ಮುಂದುವರೆಸಿತು.

ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಎಸ್‌ಐಟಿ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಮತ್ತು ವಿಧಿವಿಜ್ಞಾನ ತಜ್ಞರು ನಡೆಯುತ್ತಿರುವ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು.

ಪ್ರಕರಣ ಸಂಬಂಧ ಈಗಾಗಲೇ ಎಸ್ಐಟಿ 12 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು ಸ್ಥಳ ಸಂಖ್ಯೆ 6ರಲ್ಲಿ ಮಾತ್ರ ಅಸ್ಥಿಪಂಜರ ಪತ್ತೆಯಾಗಿತ್ತು.

ಇನ್ನು ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಅವರನ್ನು ಎಸ್ಐಟಿ ಅಧಿಕಾರಿಗಳು ಭೇಟಿಯಾಗಿದ್ದರು. ಎಸ್ ಐಟಿ ಮುಖ್ಯ ಸ್ಥ ಪ್ರಣವ್ ಮೊಹಂತಿ, ಡಿಐಜಿಪಿ ಅನುಚೇತ್ ಭೇಟಿ ವೇಳೆ ಪರಮೇಶ್ವರ್ ಅವರು, ತನಿಖಾ ಪ್ರಗತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಶೀಘ್ರವಾಗಿ ತನಿಖೆ ಮುಗಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

ದೂರುದಾರ-ಸಾಕ್ಷಿಯು ಮಾಜಿ ನೈರ್ಮಲ್ಯ ಕಾರ್ಮಿಕರಾಗಿದ್ದು, ಒಂದು ದಶಕದ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತರ ಶವಗಳನ್ನು ಹೂತಿದ್ದೆ ಎಂದು ಆರೋಪಿಸಿದ್ದಾರೆ. ಜುಲೈ 19 ರಂದು ರಚಿಸಲಾದ DGP ಪ್ರಣಬ್ ಮೊಹಂತಿ ನೇತೃತ್ವದಲ್ಲಿ SIT ಈ ಪ್ರಕರಣದ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದ್ವಿಪಕ್ಷೀಯ ಸಂಬಂಧ ವೃದ್ಧಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಡಿ. 5–6 ರಂದು ಭಾರತಕ್ಕೆ ಭೇಟಿ ನಿರೀಕ್ಷೆ

ಗಾಂಧಿ ಜಯಂತಿ 2025: ರಾಜ್‌ಘಾಟ್‌ನಲ್ಲಿ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ

1st Test: Mohammed Siraj ದಾಳಿಗೆ ಪತರುಗುಟ್ಟಿದ West Indies, ಭೋಜನ ವಿರಾಮದ ವೇಳೆಗೆ 90/5

ಸರ್ಕಾರ ವಿರುದ್ಧ ಸೋನಮ್ ವಾಂಗ್‌ಚುಕ್ ಪತ್ನಿಯಿಂದ ಕಿರುಕುಳದ ಆರೋಪ: ಪ್ರಧಾನಿ, ರಾಷ್ಟ್ರಪತಿಗಳಿಗೆ ಪತ್ರ, ಪತಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹ

ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗದು: ಸಿಎಂ ಸಿದ್ದರಾಮಯ್ಯ

SCROLL FOR NEXT