ಸಭಾಪತಿಗಳಿಗೆ ಚಿನ್ನ ಲೇಪಿತ ಬೆಳ್ಳಿಯ ಗಂಡಭೇರುಂಡ ಲಾಂಛನ ನೀಡಿದ ಟಿ.ಎ. ಶರವಣ  
ರಾಜ್ಯ

MLC ಗಳಿಗೆ ಚಿನ್ನ ಲೇಪಿತ ಗಂಡಭೇರುಂಡ ಲಾಂಛನ ಗಿಫ್ಟ್ ಕೊಟ್ಟ ಟಿ.ಎ ಶರವಣ

ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ಸದನದ ಎಲ್ಲಾ ಸದಸ್ಯರಿಗೆ ಚಿನ್ನದ ಲೇಪಿತ ಬೆಳ್ಳಿಯ ಗಂಡಭೇರುಂಡ ಲಾಂಛನವನ್ನು ಶರವಣ ಅವರು ವಿತರಿಸಿದರು.

ಬೆಂಗಳೂರು: ಚಿನ್ನ ಲೇಪಿತ ಬೆಳ್ಳಿಯ ಗಂಡಭೇರುಂಡ ಲಾಂಛನವನ್ನು ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರು ಮೇಲ್ಮನೆಯ ಎಲ್ಲಾ ಎಂ.ಎಲ್.ಸಿ.ಗಳಿಗೆ ಉಡುಗೊರೆಯಾಗಿ ಮಂಗಳವಾರ ನೀಡಿದರು.

ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ಸದನದ ಎಲ್ಲಾ ಸದಸ್ಯರಿಗೆ ಚಿನ್ನದ ಲೇಪಿತ ಬೆಳ್ಳಿಯ ಗಂಡಭೇರುಂಡ ಲಾಂಛನವನ್ನು ಶರವಣ ಅವರು ವಿತರಿಸಿದರು.

ಮಂಗಳವಾರ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಯಲ್ಲಿ ಲಾಂಛನ ಇರುವ ಪೆಟ್ಟಿಗೆಯನ್ನು ಸದಸ್ಯರಿಗೆ ನೀಡಲು ಹಸ್ತಾಂತರ ಮಾಡಿದರು.

ಈ ವೇಳೆ ಉಪಸ್ಥಿತರಿದ್ದ ಅನೇಕ ಸದಸ್ಯರಿಗೆ ಟಿ.ಎ. ಶರವಣ ಅವರೇ ಲಾಂಛನ ನೀಡಿದರು. ಕಲಾಪದ ವೇಳೆ ಸಭಾಪತಿ ಸೇರಿದಂತೆ ಅನೇಕ ಸದಸ್ಯರು ಲಾಂಛನ ಧರಿಸಿದ್ದು ಗಮನ ಸೆಳೆಯಿತು.

ಬಳಿಕ ಮಾತನಾಡಿದ ಶರವಣ ಅವರು, ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ಶಾಸಕರು ಧರಿಸುವ ಲಾಂಛನವು ಮೂಲವಾಗಿರಬೇಕು. ರಾಜ್ಯ ಸರ್ಕಾರದ ಲಾಂಛನವಾಗಿರುವ ಗಂಡಭೇರುಂಡ ಲಾಂಛನವನ್ನು ಎಂ.ಎಲ್.ಸಿ.ಗಳಿಗೆ ವಿತರಿಸುವ ಕುರಿತು ಸಭಾಪತಿ ಬಳಿ ವಿನಂತಿಸಿದೆ. ಅದಕ್ಕೆ ಅವರು ಒಪ್ಪಿದರು. ಬಳಿಕ ವಿತರಿಸಿದೆ. ಕೆಳಮನೆಯ ಸದಸ್ಯರು ಕೂಡ ಕೇಳಿದ್ದು, ಎಲ್ಲಾ 224 ಶಾಸಕರಿಗೂ ನೀಡುತ್ತೇನೆ. ಎಲ್ಲರೂ ಈ ಲಾಂಛನವನ್ನು ಧರಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್