ಸಭಾಪತಿಗಳಿಗೆ ಚಿನ್ನ ಲೇಪಿತ ಬೆಳ್ಳಿಯ ಗಂಡಭೇರುಂಡ ಲಾಂಛನ ನೀಡಿದ ಟಿ.ಎ. ಶರವಣ  
ರಾಜ್ಯ

MLC ಗಳಿಗೆ ಚಿನ್ನ ಲೇಪಿತ ಗಂಡಭೇರುಂಡ ಲಾಂಛನ ಗಿಫ್ಟ್ ಕೊಟ್ಟ ಟಿ.ಎ ಶರವಣ

ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ಸದನದ ಎಲ್ಲಾ ಸದಸ್ಯರಿಗೆ ಚಿನ್ನದ ಲೇಪಿತ ಬೆಳ್ಳಿಯ ಗಂಡಭೇರುಂಡ ಲಾಂಛನವನ್ನು ಶರವಣ ಅವರು ವಿತರಿಸಿದರು.

ಬೆಂಗಳೂರು: ಚಿನ್ನ ಲೇಪಿತ ಬೆಳ್ಳಿಯ ಗಂಡಭೇರುಂಡ ಲಾಂಛನವನ್ನು ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರು ಮೇಲ್ಮನೆಯ ಎಲ್ಲಾ ಎಂ.ಎಲ್.ಸಿ.ಗಳಿಗೆ ಉಡುಗೊರೆಯಾಗಿ ಮಂಗಳವಾರ ನೀಡಿದರು.

ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ಸದನದ ಎಲ್ಲಾ ಸದಸ್ಯರಿಗೆ ಚಿನ್ನದ ಲೇಪಿತ ಬೆಳ್ಳಿಯ ಗಂಡಭೇರುಂಡ ಲಾಂಛನವನ್ನು ಶರವಣ ಅವರು ವಿತರಿಸಿದರು.

ಮಂಗಳವಾರ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಯಲ್ಲಿ ಲಾಂಛನ ಇರುವ ಪೆಟ್ಟಿಗೆಯನ್ನು ಸದಸ್ಯರಿಗೆ ನೀಡಲು ಹಸ್ತಾಂತರ ಮಾಡಿದರು.

ಈ ವೇಳೆ ಉಪಸ್ಥಿತರಿದ್ದ ಅನೇಕ ಸದಸ್ಯರಿಗೆ ಟಿ.ಎ. ಶರವಣ ಅವರೇ ಲಾಂಛನ ನೀಡಿದರು. ಕಲಾಪದ ವೇಳೆ ಸಭಾಪತಿ ಸೇರಿದಂತೆ ಅನೇಕ ಸದಸ್ಯರು ಲಾಂಛನ ಧರಿಸಿದ್ದು ಗಮನ ಸೆಳೆಯಿತು.

ಬಳಿಕ ಮಾತನಾಡಿದ ಶರವಣ ಅವರು, ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ಶಾಸಕರು ಧರಿಸುವ ಲಾಂಛನವು ಮೂಲವಾಗಿರಬೇಕು. ರಾಜ್ಯ ಸರ್ಕಾರದ ಲಾಂಛನವಾಗಿರುವ ಗಂಡಭೇರುಂಡ ಲಾಂಛನವನ್ನು ಎಂ.ಎಲ್.ಸಿ.ಗಳಿಗೆ ವಿತರಿಸುವ ಕುರಿತು ಸಭಾಪತಿ ಬಳಿ ವಿನಂತಿಸಿದೆ. ಅದಕ್ಕೆ ಅವರು ಒಪ್ಪಿದರು. ಬಳಿಕ ವಿತರಿಸಿದೆ. ಕೆಳಮನೆಯ ಸದಸ್ಯರು ಕೂಡ ಕೇಳಿದ್ದು, ಎಲ್ಲಾ 224 ಶಾಸಕರಿಗೂ ನೀಡುತ್ತೇನೆ. ಎಲ್ಲರೂ ಈ ಲಾಂಛನವನ್ನು ಧರಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT