ಯೂಟ್ಯೂಬರ್ ಎಂಡಿ ಸಮೀರ್ youtube
ರಾಜ್ಯ

Dharmasthala: Youtuber ಸಮೀರ್ ವಿರುದ್ಧ FIR ಬೆನ್ನಲ್ಲೇ ಕನ್ನಡದ Content Creators ಯು-ಟರ್ನ್?

ಈ ಹಿಂದೆ ಧರ್ಮಸ್ಥಳ ವಿಚಾರವಾಗಿ ಎಐ ವಿಡಿಯೋ ಮಾಡಿ ವ್ಯಾಪಕ ವೈರಲ್ ಆಗಿದ್ದ ಎಂಡಿ ಸಮೀರ್ ವಿರುದ್ಧ ಬೆದರಿಕೆ ಆರೋಪಗಳು ಕೇಳಿಬಂದಿದ್ದವು.

ಬೆಂಗಳೂರು: ಧರ್ಮಸ್ಥಳ ವಿಚಾರವಾಗಿ ಯೂಟ್ಯೂಬರ್ ಎಂಡಿ ಸಮೀರ್ (MD Sameer) ವಿರುದ್ಧ ಎಫ್ ಐಆರ್ ದಾಖಲಾಗುತ್ತಿದ್ದಂತೆಯೇ ಈ ಹಿಂದೆ ಆತನನ್ನು ಬೆಂಬಲಿಸಿ ವಿಡಿಯೋ ಮಾಡಿದ್ದ ಕನ್ನಡದ Content Creators ಯೂಟರ್ನ್ ಹೊಡೆದಿದ್ದಾರೆ.

ಹೌದು.. ಈ ಹಿಂದೆ ಧರ್ಮಸ್ಥಳ ವಿಚಾರವಾಗಿ ಎಐ ವಿಡಿಯೋ ಮಾಡಿ ವ್ಯಾಪಕ ವೈರಲ್ ಆಗಿದ್ದ ಎಂಡಿ ಸಮೀರ್ ವಿರುದ್ಧ ಬೆದರಿಕೆ ಆರೋಪಗಳು ಕೇಳಿಬಂದಿದ್ದವು.

ಈ ವೇಳೆ ಸಮೀರ್ ಗೆ ಬೆಂಬಲ ಸೂಚಿಸಿ ಹಲವು ಕಂಟೆಂಟ್ ಕ್ರಿಯೇಟರ್ ಗಳು ವಿಡಿಯೋ ಮಾಡಿದ್ದರು. ಕಟೆಂಟ್ ಕ್ರಿಯೇಟರ್ ಗಳಾದ ದೀಪಕ್, ಮಧು, ತೇಜಸ್ ಗೌಡ ಸೇರಿದಂತೆ ಹಲವರು ಎಂಡಿ ಸಮೀರ್ ಭೇಟಿ ಮಾಡಿ ಬೆಂಬಲ ಸೂಚಿಸಿದ್ದರು.

ಇದೀಗ ಸಮೀರ್ ವಿರುದ್ಧವೇ ಎಫ್ ಐಆರ್ ದಾಖಲಾಗಿದ್ದು, ಅಂದು ಸಮೀರ್ ಗೆ ಬೆಂಬಲ ನೀಡಿದ್ದ ಈ ಕಂಟೆಂಟ್ ಕ್ರಿಯೇಟರ್ ಗಳ ವಿರುದ್ಧವೂ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಅತ್ತ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಲೇ ಇತ್ತ ಈ ಕುರಿತು ಸ್ಪಷ್ಟನೆ ನೀಡಿರುವ ಕಂಟೆಂಟ್ ಕ್ರಿಯೇಟರ್ಸ್, 'ನಾವು ಅಂದು ಸೌಜನ್ಯ ಪ್ರಕರಣದ ವಿಚಾರವಾಗಿ ಮಾತ್ರ ಸಮೀರ್ ಗೆ ಬೆಂಬಲ ನೀಡಿದ್ದೆವು. ಸಮೀರ್ ಏನು ಮಾಡಿದ್ದಾರೆ ನಮಗೆ ಗೊತ್ತಿಲ್ಲಾ.. ನಾವು ಅಂದು ಸಮೀರ್ ಬೆಂಬಲಕ್ಕೆ ನಿಂತಿರಲಿಲ್ಲ ಎಂದು ಹೇಳಿದ್ದಾರೆ.

ಸಮೀರ್ ಗೆ ನಿರೀಕ್ಷಣಾ ಜಾಮೀನು

ಇನ್ನು ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಕುರಿತು AI ವಿಡಿಯೋ ಮಾಡಿ, ಬಂಧನ ಭೀತಿಯಲ್ಲಿದ್ದ ಯುಟ್ಯೂಬರ್ ಎಂಡಿ ಸಮೀರ್​ಗೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ನಿನ್ನೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಧರ್ಮಸ್ಥಳ ವಿರುದ್ಧ ವಿಡಿಯೋ ಮೂಲಕ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಜುಲೈ 12ರಂದು ಸಮೀರ್​ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ಅಲ್ಲದೆ ಸಮೀರ್‌ನನ್ನು ವಶಕ್ಕೆ ಪಡೆಯಲು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ಕೂಡ ನಡೆಸಿದ್ದರು. ಇದಕ್ಕೂ ಮೊದಲೇ ಸಮೀರ್ ಗೆ ನಿರೀಕ್ಷಣಾ ಜಾಮೀನು ಮಂಜಾರಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

G20 Summit: ಭಯೋತ್ಪಾದನೆ- ಮಾದಕ ದ್ರವ್ಯ ಸಾಗಾಟ ತಡೆಗೆ ಜಾಗತಿಕ ಕ್ರಮ, ನಾಲ್ಕು ಉಪ ಕ್ರಮ ಪ್ರಸ್ತಾಪಿಸಿದ ಪ್ರಧಾನಿ ಮೋದಿ!

"ಗಾಳ ಹಾಕಿ ಮೀನು ಹಿಡಿಯುವ ಕಲೆಗಾರಿಕೆ ನನಗಿದೆ": ಸಿಎಂ ಎದುರೇ DK Shivakumar ಮಾರ್ಮಿಕ ಮಾತು!

Ashes: 2 ದಿನಕ್ಕೇ Australia vs England ಮೊದಲ ಟೆಸ್ಟ್ ಮುಕ್ತಾಯ, 104 ವರ್ಷಗಳ ಬಳಿಕ ಅತ್ಯಪರೂಪದ ದಾಖಲೆ!

ನೀವು ಮತ ನೀಡದಿದ್ದರೆ ನಾನು ನಿಮ್ಮ ನಗರಕ್ಕೆ ಹಣ ನೀಡುವುದಿಲ್ಲ: ಅಜಿತ್ ಪವಾರ್ ಬಹಿರಂಗ ಬೆದರಿಕೆ

ಶಾಸಕರ ಖರೀದಿ ನಡೆಯುತ್ತಿದೆ; ಆದ್ರೆ ಕಾಂಗ್ರೆಸ್‌ನಿಂದ ಹೊರಬರುವವರ ಜತೆ ಸರ್ಕಾರ ರಚಿಸಲ್ಲ: ಪ್ರಹ್ಲಾದ್ ಜೋಶಿ

SCROLL FOR NEXT