ಸಾಂದರ್ಭಿಕ ಚಿತ್ರ  
ರಾಜ್ಯ

124 ಉಪಜಾತಿಗಳು: ಜಾತಿ ಗಣತಿ ಬಗ್ಗೆ ಮುಸಲ್ಮಾನರಲ್ಲಿ ಗೊಂದಲ

ಅನೇಕರು ಗಣತಿ ಪ್ರಕ್ರಿಯೆಯಲ್ಲಿ ತಮ್ಮ ಜಾತಿಯನ್ನು ಹೇಗೆ ಗುರುತಿಸಬೇಕು ಎಂಬುದು ಸ್ಪಷ್ಟವಾಗಿಲ್ಲ. ಯಾವ ಉಪಗುಂಪಿಗೆ ಸೇರಿದವರು ಎಂಬುದು ಖಚಿತವಿಲ್ಲ ಎಂದಿದ್ದಾರೆ.

ಮೈಸೂರು: ಮುಂಬರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿರುವುದರಿಂದ, ಜಾತಿ ದಾಖಲಾತಿ ಕುರಿತು ಮುಸ್ಲಿಂ ಸಮುದಾಯದಲ್ಲಿ ಗೊಂದಲ ಉಂಟಾಗಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಅಧಿಸೂಚನೆ ಹೊರಡಿಸಿದ್ದು, ಪೂರ್ವಸಿದ್ಧತಾ ಪ್ರಕ್ರಿಯೆಯ ಭಾಗವಾಗಿ, ಹಿಂದುಳಿದ ವರ್ಗಗಳ ಮೀಸಲಾತಿಗೆ ಅರ್ಹರಾಗಿರುವ ಮುಸ್ಲಿಂ ಸಮುದಾಯದ 124 ಉಪಜಾತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಅಧಿಸೂಚನೆಯು ಸಮುದಾಯದೊಳಗೆ ಚರ್ಚೆಗೆ ನಾಂದಿ ಹಾಡಿದೆ. ಅನೇಕರು ಗಣತಿ ಪ್ರಕ್ರಿಯೆಯಲ್ಲಿ ತಮ್ಮ ಜಾತಿಯನ್ನು ಹೇಗೆ ಗುರುತಿಸಬೇಕು ಎಂಬುದು ಸ್ಪಷ್ಟವಾಗಿಲ್ಲ. ಯಾವ ಉಪಗುಂಪಿಗೆ ಸೇರಿದವರು ಎಂಬುದು ಖಚಿತವಿಲ್ಲ ಎಂದಿದ್ದಾರೆ.

ಮುಸ್ಲಿಮರು ತಮ್ಮ ಧರ್ಮ ಅಥವಾ ಅವರ ನಿರ್ದಿಷ್ಟ ಉಪಜಾತಿ ಅಥವಾ ಔದ್ಯೋಗಿಕ ಗುಂಪಿನಿಂದ ತಮ್ಮನ್ನು ದಾಖಲಿಸಿಕೊಳ್ಳಬೇಕೇ ಎಂಬ ಪ್ರಶ್ನೆಗಳು ಎದ್ದಿವೆ. 124 ಉಪಜಾತಿಗಳು ಹೊಸದಲ್ಲ, ಹಿಂದಿನ ಜನಗಣತಿ, ಸಮೀಕ್ಷೆಗಳು ಮತ್ತು ಸಂಶೋಧನೆಗಳ ಸಮಯದಲ್ಲಿ ಮುಸ್ಲಿಮರನ್ನು ಇವುಗಳ ಅಡಿಯಲ್ಲಿ ದಾಖಲಿಸಲಾಗಿತ್ತು. ಯಾವುದೇ ಉಪಜಾತಿಯನ್ನು ಬಿಟ್ಟುಬಿಟ್ಟರೆ ಅಥವಾ ಪಟ್ಟಿ ಮಾಡಲಾದ ಹೆಸರುಗಳಲ್ಲಿ ದೋಷಗಳಿದ್ದರೆ ಆಯೋಗವು ಅಧಿಸೂಚನೆಯ ಏಳು ದಿನಗಳಲ್ಲಿ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ಈ ಜಾತಿಗಳಲ್ಲಿ ಬಂಗಿ ಮುಸ್ಲಿಂ, ಅಟಾರಿ, ಬ್ಯಾರಿ, ಚಪ್ಪರಬಂಡಾ, ದರ್ಜಿ ಮುಸ್ಲಿಂ, ಫಕೀರ್, ಗಬ್ಬಿಟ್, ಘ್ಯಾರೆ, ಗೌಂಡಿ, ಕಸ್ಬಿನ್, ಖಲೀಫಾ, ಮಾಪಿಲ್ಲಾ, ನದಾಫ್, ನೋಟರಿ, ಪೇಶ್-ಇಮಾಮ್, ಪಿಂಜಾರ, ಖಾಜಿ, ಸಲಫಿ, ಪಠಾಣ್, ಸಿಕ್ಕಲಿಗರ, ಟಕಂಕರ್, ಸೈಯದ್, ಸುನ್ನಿ ಮತ್ತು ಅನೇಕರು ಸೇರಿದ್ದಾರೆ.

ಈ ಗೊಂದಲದಿಂದ, ಜಾಗೃತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಏಕೀಕೃತ ನಿಲುವಿಗೆ ಬರಲು ದುಂಡುಮೇಜಿನ ಸಮ್ಮೇಳನಗಳನ್ನು ನಡೆಸಲಾಗಿದೆ. ಜನಗಣತಿಯ ಸಮಯದಲ್ಲಿ ಅಸಮಂಜಸ ಪ್ರತಿಕ್ರಿಯೆಯು ಮೀಸಲಾತಿ ಮತ್ತು ಕಲ್ಯಾಣ ಕ್ರಮಗಳ ಮೇಲೆ ದೀರ್ಘಾವಧಿಯ ಪರಿಣಾಮಗಳನ್ನು ಬೀರಬಹುದು ಎಂಬ ಕಾರಣಕ್ಕೆ ಪ್ರಸ್ತುತ ಸಂದರ್ಭದಲ್ಲಿ ಒಮ್ಮತ ಅತ್ಯಗತ್ಯ ಎಂದು ಸಮುದಾಯದ ಪ್ರತಿನಿಧಿಗಳು ಹೇಳುತ್ತಿದ್ದಾರೆ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ಘಟಕವು ನಿವೃತ್ತ ಸರ್ಕಾರಿ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಮುಸ್ಲಿಂ ಸಮುದಾಯದ ನಾಯಕರು, ಚುನಾಯಿತ ಪ್ರತಿನಿಧಿಗಳು, ಧಾರ್ಮಿಕ ವಿದ್ವಾಂಸರು ಮತ್ತು ಸಾಮಾಜಿಕ ಚಿಂತಕರ ಎರಡು ಸುತ್ತಿನ ಸಭೆಗಳನ್ನು ಸಹ ನಡೆಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾಲೂರು ಕ್ಷೇತ್ರ: ಮರು ಮತ ಎಣಿಕೆ, ಕಾಂಗ್ರೆಸ್ ನ ನಂಜೇಗೌಡರೇ ಗೆಲುವು! ಸುಪ್ರೀಂಕೋರ್ಟ್ ಮಹತ್ವದ ತೀರ್ಪು!

ಪ್ರಧಾನಿ ಮೋದಿ ಪ್ರತಿಕ್ರಿಯೆ ಇಲ್ಲದೆ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ ಅಂಗೀಕಾರ; ವಿಪಕ್ಷಗಳ ತೀವ್ರ ಗದ್ದಲ, ಮಧ್ಯಾಹ್ನ 3 ಗಂಟೆಗೆ ಲೋಕಸಭೆ ಕಲಾಪ ಮುಂದೂಡಿಕೆ

ದುಬೈ ಬಿಗ್ ಟಿಕೆಟ್ ಲಕ್ಕಿ ಡ್ರಾ: ಉಡುಪಿಯ ಯುವಕನಿಗೆ ಹೊಡೆಯಿತು ಭರ್ಜರಿ 49 ಕೋಟಿ ರೂ. ಲಾಟ್ರಿ!

ಭಾರತೀಯ ವಾಯುಪಡೆಗೆ ಹಸ್ತಾಂತರಿಸಲು 5 ತೇಜಸ್ ಜೆಟ್‌ಗಳು ಸಿದ್ಧ: HAL

Thank you, Pakistan: ಭಾರತದ ವಿರುದ್ಧ ಬಾಂಗ್ಲಾದೇಶದ ಹಗೆತನ ಬಟ್ಟ ಬಯಲು!

SCROLL FOR NEXT