ಕೃಷ್ಣ ಭೈರೇಗೌಡ 
ರಾಜ್ಯ

ರಾಜ್ಯ ಸರ್ಕಾರದ ವಿತ್ತೀಯ ಕೊರತೆ ಶೇ.3: ಕಂದಾಯ ಸಚಿವ ಕೃಷ್ಣ ಭೈರೇಗೌಡ

ಸರ್ಕಾರವು ಯಾವುದೇ ತುರ್ತು ಪರಿಸ್ಥಿತಿಗಳನ್ನು ಎದುರಿಸಿದರೆ ಈ ಮಿತಿಯನ್ನು ಉಲ್ಲಂಘಿಸಬಹುದು ಎಂದು ಅವರು ಹೇಳಿದರು.

ಬೆಳಗಾವಿ: ರಾಜ್ಯ ಸರ್ಕಾರವು ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಯನ್ನು ಅನುಸರಿಸಲು ಬದ್ಧವಾಗಿದೆ. ಪ್ರಸ್ತುತ ಒಟ್ಟು ರಾಜ್ಯ ದೇಶೀಯ ಉತ್ಪನ್ನ (GSDP)ದ ಶೇಕಡಾ 3ಕ್ಕೆ ಬದ್ಧವಾಗಿರುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆಯಲ್ಲಿ ತಿಳಿಸಿದರು.

ಸರ್ಕಾರವು ಯಾವುದೇ ತುರ್ತು ಪರಿಸ್ಥಿತಿಗಳನ್ನು ಎದುರಿಸಿದರೆ ಈ ಮಿತಿಯನ್ನು ಉಲ್ಲಂಘಿಸಬಹುದು ಎಂದು ಅವರು ಹೇಳಿದರು.

ಪೂರಕ ಬಜೆಟ್ ಅಂದಾಜಿನ ಮೇಲಿನ ಚರ್ಚೆಯಲ್ಲಿ, ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ರಾಜ್ಯದ ಹೆಚ್ಚಿದ ಹಣಕಾಸಿನ ಕೊರತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಸರ್ಕಾರ ನೀಡಿದ ದತ್ತಾಂಶದ ಪ್ರಕಾರ, ಅದು 2.95% ನಲ್ಲಿಯೇ ಉಳಿದಿದೆ, ಇದು ಮಿತಿಯ ಹತ್ತಿರದಲ್ಲಿದೆ ಎಂದರು.

2023-24 ರಲ್ಲಿ 65,525 ರೂಪಾಯಿಗಳಷ್ಟಿದ್ದ ಕೊರತೆಯನ್ನು ಆರ್ಥಿಕ ವರ್ಷ 2026ರಲ್ಲಿ 90,420 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ GSDP ಯ 2.55 ರಿಂದ 2.99% ಕ್ಕೆ ಹೆಚ್ಚಿಸಲಾಗಿದೆ ಎಂದರು. ಕರ್ನಾಟಕವು ಆರ್ಥಿಕವಾಗಿ ಉತ್ತಮವಾಗಿ ನಿರ್ವಹಿಸಲ್ಪಡುವ ರಾಜ್ಯವಾಗಿದ್ದರೂ, ರಾಜ್ಯದ ಸಾಲವು ಕಳೆದ ವರ್ಷದ 3.24 ಲಕ್ಷ ಕೋಟಿ ರೂಪಾಯಿಗಳಿಂದ 4.08 ಲಕ್ಷ ಕೋಟಿಗೆ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಅಂದಾಜು 2.08 ಲಕ್ಷ ಕೋಟಿ ರೂಪಾಯಿಗೆ ಹೋಲಿಸಿದರೆ ವರಮಾನ ಸಂಗ್ರಹ ಕೇವಲ 90,998 ಕೋಟಿ ಮಾತ್ರ. ಸರ್ಕಾರದ ಕಳಪೆ ನಿರ್ವಹಣೆ ಮುಂದುವರಿದರೆ, ಹಣಕಾಸಿನ ಕೊರತೆಯು ಶೇಕಡಾ 3ರ ಮಿತಿಯನ್ನು ಮೀರಬಹುದು ಎಂದು ಅಶೋಕ ಹೇಳಿದರು. ಆದರೆ ಸರ್ಕಾರವು ಮಿತಿಯನ್ನು ದಾಟಲು ಬಿಡುವುದಿಲ್ಲ ಎಂದು ಕೃಷ್ಣ ಭೈರೇಗೌಡ ಭರವಸೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾನ್ಪುರ ಲ್ಯಾಂಬೋರ್ಗಿನಿ ಅಪಘಾತ: ತಂಬಾಕು ದೊರೆ ಕೆಕೆ ಮಿಶ್ರಾ ಪುತ್ರನ ಬಂಧನ

ಬಾಂಗ್ಲಾದೇಶ ಐತಿಹಾಸಿಕ ಸಂಸತ್ ಚುನಾವಣೆ: ಮತದಾನ ಪ್ರಗತಿಯಲ್ಲಿ, 50 ಲಕ್ಷ ಯುವ ಮತದಾರರು-Video

ಅಮೃತ್ ಭಾರತ ಯೋಜನೆಯಡಿ ಬೆಂಗಳೂರಿನ 9 ರೈಲು ನಿಲ್ದಾಣಗಳ ನವೀಕರಣ

ನಾಳೆಯಿಂದ ಹಂಪಿ ಉತ್ಸವದಲ್ಲಿ ಮೊದಲ ಬಾರಿ ಡ್ರೋನ್ ಪ್ರದರ್ಶನ

ವಿಧಾನಸೌಧಕ್ಕೆ ಚಿನ್ನ-ಹಣ ಬಂದಿದ್ದು ಹೇಗೆ..? ತನಿಖೆಗೆ ರಾಜ್ಯ ಸರ್ಕಾರ ಆದೇಶ

SCROLL FOR NEXT