ಯಶ್ ಆರ್ ಚೌಗಾಲ 
ರಾಜ್ಯ

ಬೆಳಗಾವಿ: ರಜೆಗೆಂದು ಊರಿಗೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ನಿಧನ

ಬೆಳಗಿನ ನಡಿಗೆಗಾಗಿ ಹೊರಗೆ ಹೋಗಿದ್ದಾಗ ಅಪರಿಚತ ವಾಹನ ಡಿಕ್ಕಿ ಹೊಡೆದು, ಪರಾರಿಯಾಗಿದೆ.

ಬೆಳಗಾವಿ: ರಜೆಯ ಮೇಲೆ ಮನೆಗೆ ಮರಳಿದ್ದ ಯುವ ಸೈನಿಕನೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೋರಗಲ್ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಯಶ್ ಆರ್ ಚೌಗಾಲ (21) ಎಂದು ಗುರ್ತಿಸಲಾಗಿದೆ. ಏಳು ತಿಂಗಳ ಹಿಂದೆ ಭಾರತೀಯ ಸೇನೆಗೆ ಆಯ್ಕೆಯಾಗಿದ್ದ ಅವರು, ತರಬೇತಿ ಪಡೆಯುತ್ತಿದ್ದರು. ಆರು ತಿಂಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ, ಇತ್ತೀಚೆಗೆ ರಜೆಯ ಮೇಲೆ ತಮ್ಮ ಊರಿಗೆ ಆಗಮಿಸಿದ್ದರು.

ಬೆಳಗಿನ ನಡಿಗೆಗಾಗಿ ಹೊರಗೆ ಹೋಗಿದ್ದಾಗ ಅಪರಿಚತ ವಾಹನ ಡಿಕ್ಕಿ ಹೊಡೆದು, ಪರಾರಿಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಘಟನೆ ಬೆನ್ನಲ್ಲೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ನಡುವೆ ಗ್ರಾಮಸ್ಥರು ತನಿಖೆಗೆ ಆಗ್ರಹಿಸಿದ್ದಾರೆ.

ಇನ್ನು ಯಶ್ ಅವರು ಪಾರ್ಥೀವ ಶರೀರದ ಮೆರವಣಿಗೆಯನ್ನು ಹುಟ್ಟೂರಿನಲ್ಲಿ ನಡೆಸಲಾಗಿದ್ದು, ಸಾವಿರಾರು ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು. ಬಳಿಕ ಸೇನಾ ಗೌರವಗಳೊಂದಿಗೆ, ಅಂತಿಮ ನಮನ ಸಲ್ಲಿಸಿ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಪಿಯೂಷ್ ಗೋಯಲ್ ಅವರೇ, ಸುಳ್ಳು ಹೇಳಬೇಡಿ, ಈ ಒಪ್ಪಂದ ಸರೆಂಡರ್ ಅಷ್ಟೆ’: ರಾಹುಲ್–ವಾಣಿಜ್ಯ ಸಚಿವರ ನಡುವೆ ವಾಗ್ವಾದ-Video

ಈಶಾನ್ಯ ಭಾರತದ ಮೊಟ್ಟಮೊದಲ ವಿಮಾನ ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ ಭೂಸ್ಪರ್ಶ: ಪ್ರಧಾನಿ ಮೋದಿ ಭೇಟಿ, ವಾಯುಪ್ರದರ್ಶನ ವೀಕ್ಷಣೆ-Video

ಜೋರಾಗಿ ಸುಳ್ಳು ಹೇಳುವುದು, ಅದನ್ನೇ ಪುನರಾವರ್ತಿಸುವುದು ರಾಹುಲ್ ಗಾಂಧಿಯ ಪಾಲಿಸಿ: ಅಮಿತ್ ಶಾ

'What kind of life is this?': ದೆಹಲಿಯ ಕಳಪೆ ಗುಣಮಟ್ಟದ ಗಾಳಿಯನ್ನು 'ಗ್ಯಾಸ್ ಚೇಂಬರ್' ಗೆ ಹೋಲಿಸಿದ ಯೋಗಿ ಆದಿತ್ಯ ನಾಥ್!

'ನಿಮ್ಮಿಂದ ಆಗದಿದ್ದರೆ ಎದ್ದು ಹೊರ ಹೋಗಿ': ಆದೇಶ ನಿರಾಕರಿಸಿದ SP ಮೇಲೆ ಹೌಹಾರಿದ ಸಚಿವ, ಸಾರ್ವಜನಿಕ ಸಭೆಯಲ್ಲೇ ಹೈಡ್ರಾಮಾ..! Video

SCROLL FOR NEXT