ವಿಧಾನಸೌಧ  
ರಾಜ್ಯ

ವಿವಿಧ ಇಲಾಖೆಗಳಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ: ಹೊರಗುತ್ತಿಗೆ ಸಿಬ್ಬಂದಿ ಅವಲಂಬಿಸಿರುವ ರಾಜ್ಯ ಸರ್ಕಾರ

ಹೊರಗುತ್ತಿಗೆ ಸಿಬ್ಬಂದಿ ಭ್ರಷ್ಟಾಚಾರದಲ್ಲಿ ಭಾಗಿಯಾದರೆ ಅಥವಾ ತಪ್ಪುಗಳನ್ನು ಮಾಡಿದರೆ, ಸರ್ಕಾರವು ಇಲಾಖಾ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಅವರು ಖಾಯಂ ಉದ್ಯೋಗಿಗಳಲ್ಲದ ಕಾರಣ, ಅವರು ತಮ್ಮ ತಪ್ಪುಗಳಿಗೆ ಆಗುವ ಕಠಿಣ ಕ್ರಮಗಳ ಪರಿಣಾಮಗಳಿಗೆ ಹೆದರುವುದಿಲ್ಲ.

ಬೆಂಗಳೂರು: ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು ಒಂದು ಲಕ್ಷ ಹುದ್ದೆಗಳನ್ನು ಹೊರಗುತ್ತಿಗೆ ನೌಕರರು ನಿರ್ವಹಿಸುತ್ತಿದ್ದಾರೆ. ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಫಲವಾಗಿರುವುದು ಇದಕ್ಕೆ ಪ್ರಮುಖ ಕಾರಣ.

ರಾಜ್ಯ ಸರ್ಕಾರವು ಈಗ 72 ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಲ್ಲಿ 5.2 ಲಕ್ಷ ಖಾಯಂ ಸಿಬ್ಬಂದಿಯನ್ನು ಹೊಂದಿದ್ದರೆ, 2.5 ಲಕ್ಷ ಖಾಲಿ ಹುದ್ದೆಗಳಿವೆ. ಈ ಖಾಲಿ ಹುದ್ದೆಗಳನ್ನು ಗುತ್ತಿಗೆ ನೌಕರರಿಂದ ತುಂಬಿಸಲಾಗಿದೆ. ನಿಯಮಿತ ಉದ್ಯೋಗಿಗಳಂತೆ ಅವರಿಗೆ ಸವಲತ್ತು ನೀಡದ್ದರಿಂದ ಸರ್ಕಾರದ ವೆಚ್ಚವನ್ನು ಕಡಿಮೆ ಮಾಡುತ್ತದೆ, ಆದರೆ ಹೊಣೆಗಾರಿಕೆಯ ಗಂಭೀರ ಕೊರತೆಯಿದೆ.

ಹೊರಗುತ್ತಿಗೆ ಸಿಬ್ಬಂದಿ ಭ್ರಷ್ಟಾಚಾರದಲ್ಲಿ ಭಾಗಿಯಾದರೆ ಅಥವಾ ತಪ್ಪುಗಳನ್ನು ಮಾಡಿದರೆ, ಸರ್ಕಾರವು ಇಲಾಖಾ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಅವರು ಖಾಯಂ ಉದ್ಯೋಗಿಗಳಲ್ಲದ ಕಾರಣ, ಅವರು ತಮ್ಮ ತಪ್ಪುಗಳಿಗೆ ಆಗುವ ಕಠಿಣ ಕ್ರಮಗಳ ಪರಿಣಾಮಗಳಿಗೆ ಹೆದರುವುದಿಲ್ಲ ಎಂದು ಹೆಸರು ಹೇಳಲು ಬಯಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

96,844 ಹೊರಗುತ್ತಿಗೆ ನೌಕರರಲ್ಲಿ ಸುಮಾರು 16,000 ಜನರು ಕೃಷಿ ಇಲಾಖೆಯಲ್ಲಿದ್ದಾರೆ. ಖಾಯಂ ಉದ್ಯೋಗಿಗಳ ಕೊರತೆಯು ರೈತರಿಗೆ ಸರ್ಕಾರಿ ಕಾರ್ಯಕ್ರಮಗಳ ವಿತರಣೆಯ ಮೇಲೆ ಪರಿಣಾಮ ಬೀರುತ್ತದೆ.

ಪಶುಸಂಗೋಪನೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಸಹ ಹೆಚ್ಚಿನ ಸಂಖ್ಯೆಯ ಗುತ್ತಿಗೆ ನೌಕರರನ್ನು ಹೊಂದಿವೆ. ಹೊರಗುತ್ತಿಗೆ ಹೆಸರಿನಲ್ಲಿ ಸರ್ಕಾರ ಶೋಷಣೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಸಮಾನ ಕೆಲಸ, ಸಮಾನ ವೇತನ ಎಂಬುದು ಕೇವಲ ಘೋಷಣೆ. ಸರ್ಕಾರದಿಂದ ನೇಮಕಗೊಂಡ ವ್ಯಕ್ತಿ ಮತ್ತು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಇನ್ನೊಬ್ಬರು ಒಂದೇ ರೀತಿಯ ಕೆಲಸಗಳನ್ನು ನಿರ್ವಹಿಸುತ್ತಿದ್ದರೂ ಅವರ ಸಂಬಳದಲ್ಲಿ ಭಾರಿ ವ್ಯತ್ಯಾಸವಿದೆ. ಸುಮಾರು ಒಂದು ಲಕ್ಷ ಜನರನ್ನು ಹೊರಗುತ್ತಿಗೆ ನೌಕರರಾಗಿ ನೇಮಕ ಮಾಡಿಕೊಳ್ಳಲಾಗಿದೆ, ಇದರಿಂದ ನೇಮಕಾತಿ ಏಜೆನ್ಸಿಗಳು ಹಣ ಗಳಿಸುತ್ತಿವೆ ಎಂದರ್ಥ. ಇದು ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಸ್ತುತ ಸರ್ಕಾರ ಹೊರಗುತ್ತಿಗೆಗೆ ಅಂತ್ಯ ಹಾಡಲು ಬಯಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಖಾಸಗಿ ಹೊರಗುತ್ತಿಗೆ ನಿಷೇಧ ಮಸೂದೆಯನ್ನು ಮಂಡಿಸಲು ಬಯಸಿತ್ತು ಒಂದು ವೇಳೆ ಈ ಮಸೂದೆ ಅಂಗೀಕಾರವಾಗಿದ್ದರೆ, ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲು ಖಾಸಗಿ ಏಜೆನ್ಸಿಗಳನ್ನು ತೊಡಗಿಸಿಕೊಳ್ಳುವುದನ್ನು ಮಸೂದೆ ಕೊನೆಗೊಳಿಸುತ್ತಿತ್ತು.

ಅಪರಾಧಿಗಳನ್ನು ಶಿಕ್ಷಿಸಲು ಮಸೂದೆಯಲ್ಲಿ ಒಂದು ನಿಯಮವನ್ನು ಸಹ ಹೊಂದಿತ್ತು. ಆದರೆ ಅದು ಸಾಧ್ಯ ಆಗಲಿಲ್ಲ, ಜೊತೆಗೆ ಬೆಳಗಾವಿ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗಿಲ್ಲ. ಈ ಮಸೂದೆಯನ್ನು ಅಂಗೀಕರಿಸದಂತೆ ಹಣಕಾಸು ಇಲಾಖೆ ಮತ್ತು ಖಾಸಗಿ ನೇಮಕಾತಿ ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಹೊರಗುತ್ತಿಗೆ ನೀಡುವುದು ಆರ್ಥಿಕವಾಗಿ ಉತ್ತಮವಾಗಿದೆ ಎಂದು ಹಣಕಾಸು ಇಲಾಖೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. "ಈ ಉದ್ಯೋಗಿಗಳು ಕೆಲಸ ಮಾಡಲು ಹೆಚ್ಚು ಸಿದ್ಧರಿದ್ದಾರೆ ಮತ್ತು ಹೆಚ್ಚು ಜವಾಬ್ದಾರಿಯುತರಾಗಿದ್ದಾರೆ.

ಏಕೆಂದರೆ ಅವರನ್ನು ಯಾವುದೇ ಕ್ಷಣದಲ್ಲಿ ತಮ್ಮ ಕೆಲಸದಿಂದ ತೆಗೆದುಹಾಕಬಹುದು ಎಂಬ ಭಯವಿರುತ್ತದೆ. ನಿಯಮಿತ ಸಿಬ್ಬಂದಿಗಿಂತ ಭಿನ್ನವಾಗಿ, ಕಾರ್ಯಕ್ಷಮತೆಯ ಕೊರತೆ ಅಥವಾ ಕಡಿಮೆ ಕಾರ್ಯಕ್ಷಮತೆಗಾಗಿ ಅವರನ್ನು ತೆಗೆದುಹಾಕಲಾಗುವುದಿಲ್ಲ ಎಂದು ಅವರಿಗೆ ತಿಳಿದಿದೆ. ಯಾವುದೇ ಸಂದರ್ಭದಲ್ಲಿ, ಹೆಚ್ಚಿನ ಗುತ್ತಿಗೆ ಕಾರ್ಮಿಕರು ಎಲ್ಲರೂ ಸೂಕ್ಷ್ಮ ಹುದ್ದೆಗಳಲ್ಲಿಲ್ಲ. ನಾವು ಇದನ್ನು ಪ್ರೋತ್ಸಾಹಿಸಬೇಕು ಮತ್ತು ಕಡಿಮೆ ವೆಚ್ಚದಲ್ಲಿ ಉತ್ತಮ ಕೆಲಸ ಪಡೆಯಬೇಕು ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಕ್ಲು ಶಿವ ಕೊಲೆ ಪ್ರಕರಣ: ಭೈರತಿ ಬಸವರಾಜ್​ಗೆ ಬಿಗ್ ಶಾಕ್​​; ಸುಪ್ರೀಂ ಕೋರ್ಟ್ ನಲ್ಲೂ ಜಾಮೀನು‌ ಅರ್ಜಿ ವಜಾ

ಕಾನ್ಪುರ ಲ್ಯಾಂಬೋರ್ಗಿನಿ ಅಪಘಾತ: ತಂಬಾಕು ದೊರೆ ಕೆಕೆ ಮಿಶ್ರಾ ಪುತ್ರನ ಬಂಧನ

ಬಾಂಗ್ಲಾದೇಶ ಐತಿಹಾಸಿಕ ಸಂಸತ್ ಚುನಾವಣೆ: ಮತದಾನ ಪ್ರಗತಿಯಲ್ಲಿ, 50 ಲಕ್ಷ ಯುವ ಮತದಾರರು-Video

ಅಮೃತ್ ಭಾರತ ಯೋಜನೆಯಡಿ ಬೆಂಗಳೂರಿನ 9 ರೈಲು ನಿಲ್ದಾಣಗಳ ನವೀಕರಣ

ನಾಳೆಯಿಂದ ಹಂಪಿ ಉತ್ಸವದಲ್ಲಿ ಮೊದಲ ಬಾರಿ ಡ್ರೋನ್ ಪ್ರದರ್ಶನ

SCROLL FOR NEXT